ರಾ.ಹೆದ್ದಾರಿ 75 ಕೊಲ್ಲಹಳ್ಳಿ ಸಮೀಪ ರಸ್ತೆ ದಾಟಿದ ಕಾಡಾನೆ: ಕೆಲಕಾಲ ಆತಂಕ
Team Udayavani, Aug 21, 2022, 7:42 PM IST
ಸಕಲೇಶಪುರ: ಪಟ್ಟಣಕ್ಕೆ ಪ್ರವೇಶ ಮಾಡುವ ಕೊಲ್ಲಹಳ್ಳಿ ಗ್ರಾಮದ ನಂದಿ ಎಸ್ಟೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 75 ರ ಬದಿಯಲ್ಲೇ ಕಾಡಾನೆಯೊಂದು ಭಾನುವಾರ ಸಂಜೆ ಏಕಾಏಕಿ ಕಾಣಿಸಿಕೊಂಡಿದ್ದರಿಂದ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು.
ರಾಷ್ಟ್ರೀಯ ಹೆದ್ದಾರಿ 75 ಮಂಗಳೂರು-ಬೆಂಗಳೂರು ನಡುವೆ ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುವುದು ಸಾಮಾನ್ಯವಾಗಿದ್ದು ಈ ವೇಳೆ ಹೆದ್ದಾರಿಯ ಒಂದು ಬದಿಯಲ್ಲಿರುವ ಗದ್ದೆಯಲ್ಲಿ ಕಾಡಾನೆಯೊಂದು ಕಾಣಿಸಿಕೊಂಡಿದ್ದು ಇದನ್ನು ನೋಡಲು ಜನ ಮುಗಿದು ಬಿದ್ದರು. ಕೆಲವರು ವಾಹನಗಳಲ್ಲೆ ವಿಡಿಯೋ ಪೋಟೋ ತೆಗೆದುಕೊಂಡರೆ ಇನ್ನು ಕೆಲವರು ವಾಹನಗಳನ್ನು ನಿಲ್ಲಿಸಿ ಕಾಡಾನೆ ವೀಕ್ಷಿಸಿದರು.
ನಂತರ ಗದ್ದೆಯಿಂದ ನಿಧಾನಕ್ಕೆ ಬಂದ ಕಾಡಾನೆ ಹೆದ್ದಾರಿಯನ್ನು ದಾಟಿ ನಂದಿ ಎಸ್ಟೇಟ್ ಒಳಗೆ ಪ್ರವೇಶಿಸಿತು. ಕಳೆದ ವರ್ಷ ಕಾಡಾನೆಯೊಂದು ಇದೇ ಪ್ರದೇಶದಲ್ಲಿ ಅಸ್ತಿಕ ಭಟ್ ಎಂಬುವರ ಮೇಲೆ ದಾಳಿ ನಡೆಸಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಜಾಗವು ಪಟ್ಟಣಕ್ಕೆ ಅತ್ಯಂತ ಸಮೀಪದಲ್ಲಿದ್ದು ಮತ್ತೊಮ್ಮೆ ಕಾಡಾನೆ ಈ ಪ್ರದೇಶಕ್ಕೆ ಬಂದಿರುವುದು ಜನರಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.
ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಶಿಲ್ಪ ಹಾಗೂ ಇತರ ಸಿಬ್ಬಂದಿಗಳು ಭೇಟಿ ನೀಡಿ ಯಾವುದೇ ಅನಾಹುತವಾಗದಂತೆ ನೋಡಿಕೊಂಡರು. ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ವ್ಯಾಪಕವಾಗಿದ್ದು ಜನಸಾಮಾನ್ಯರು, ಬೆಳೆಗಾರರ ಪರಿಸ್ಥಿತಿ ಚಿಂತಾಜನಕವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ