ಮೀನಿಗೆ ಹಾಕಿದ್ದ ಬಲೆಗೆ ಬಿದ್ದ ಹೆಬ್ಬಾವು: ಗ್ರಾಮಸ್ಥರ ಆತಂಕ
Team Udayavani, Aug 24, 2022, 9:30 PM IST
ಕುಣಿಗಲ್: ಮೀನಿಗಾಗಿ ಹಾಕಿದ್ದ ಬಲೆಗೆ ಬೃಹತ್ ಗಾತ್ರದ ಹೆಬ್ಬಾವು ಬಿದ್ದು ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದ ಘಟನೆ ತಾಲೂಕಿನ ಹುಲಿಯೂರುದುರ್ಗ ಹೋಬಳಿ ಗುಡ್ಡೆ ತಿಪ್ಪಸಂದ್ರ ಗ್ರಾಮದಲ್ಲಿ ಬುಧವಾರ ನಡೆದಿದೆ.
ಗ್ರಾಮಸ್ಥರು ಮೀನಿಗಾಗಿ ಗುಡ್ಡೆ ತಿಪ್ಪಸಂದ್ರ ಕೆರೆಗೆ ಬುಧವಾರ ಬಲೆ ಹಾಕಿದರು. ಆದರೆ ಮೀನಿಗೆ ಬದಲಾಗಿ ಸುಮಾರು_ಒಂದುವರೆ ವರ್ಷದ ಹೆಬ್ಬಾವು ಬಿದ್ದಿತು. ಇದನ್ನು ನೋಡಿದ ಗ್ರಾಮಸ್ಥರು ಭಯ ಭೀತರಾಗಿ ಹುಲಿಯೂರುದುರ್ಗ ಅರಣ್ಯ ಇಲಾಖೆ ಮಾಹಿತಿ ನೀಡಿದರು. ಈ ಹಿನ್ನಲೆ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ, ಹೆಬ್ಬಾವನ್ನು ವಶಕ್ಕೆ ಪಡೆದುಕೊಂಡು ಅಂದಲಕುಪ್ಪೆ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ ಎಂದು ಹುಲಿಯೂರುದುರ್ಗ ಅರಣ್ಯ ಸಂರಕ್ಷಣಾಧಿಕಾರಿ ಮಹಮದ್ ಮನ್ಸೂರು ತಿಳಿಸಿದ್ದಾರೆ.