ಮಲಗಿದ್ದ ಮಹಿಳೆಯ ಬೆನ್ನೇರಿ ಹೆಡೆ ಬಿಚ್ಚಿದ ಹಾವು
Team Udayavani, Aug 28, 2022, 7:25 AM IST
ಅಫಜಲಪುರ (ಕಲಬುರಗಿ): ಮಲಗಿದ್ದ ಮಹಿಳೆಯೊಬ್ಬರ ಬೆನ್ನ ಮೇಲೆ ಹಾವೊಂದು ಹೆಡೆಯೆತ್ತಿ ಸುಮಾರು ಒಂದು ಗಂಟೆ ಕಾಲ ಕುಳಿತಿದ್ದರೂ ಆಕೆಗೆ ಯಾವುದೇ ಹಾನಿ ಮಾಡದೆ ಇಳಿದು ಹೋದ ಕುತೂಹಲಕಾರಿ ಘಟನೆ ನಡೆದಿದೆ.
ಮಲ್ಲಾಬಾದ ಗ್ರಾಮದ ರೈತ ಮಹಿಳೆ ಭಾಗಮ್ಮ ಹಣಮಂತ ಬಡದಾಳ ಅವರು ತಮ್ಮದೇ ತೋಟದಲ್ಲಿ ಕೃಷಿ ಕೆಲಸ ಮುಗಿಸಿ ಊಟ ಮಾಡಿ, ಗಿಡವೊಂದರ ಕೆಳಗೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದಾಗ ಈ ಘಟನೆ ನಡೆದಿದೆ.
ಹಾವು ಮೈಮೇರಿದ್ದು ಗಮನಕ್ಕೆ ಬಂದ ಕೂಡಲೇ ಅವರು “ಹೇ ಮಲ್ಲಯ್ಯ, ಶ್ರೀಶೈಲ ಮಲ್ಲಯ್ಯ, ಸ್ವಾಮಿ ಕಾಪಾಡು ನನ್ನಪ್ಪ, ನೀ ಮಾಯವಾಗೋ ನನ್ನಪ್ಪ, ಹೇ ಮಲ್ಲಯ್ಯ’ ಎಂದು ದೇವರ ಜಪ ಮಾಡಿದ್ದರು. ಆಕೆಯ ಜಪ ಕೇಳಿಸಿತೋ ಎಂಬಂತೆ ಸುಮಾರು ಒಂದು ತಾಸು ಕಳೆದು ಹಾವು ಕೆಳಗಿಳಿದು ಹೋಯಿತು.
ವಿಷಯ ತಿಳಿದ ಜನ ಓಡೋಡಿ ಬಂದು ಈ ಅತ್ಯಪರೂಪದ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆಹಿಡಿಯುತ್ತಿದ್ದರು. ಜನರ ಗದ್ದಲಕ್ಕೂ ಹಾವು ಸರಿದಾಡಿರಲಿಲ್ಲ. ಭಾಗಮ್ಮ ಅವರ ಮನೆಯವರು ಕೂಡ ದೇವರನ್ನು ಸ್ಮರಿಸಲು ಹೇಳಿದ್ದರು.
ಮಗನೇ ಹಾವಿನ ರೂಪದಲ್ಲಿ ಬಂದ?
ಭಾಗಮ್ಮಳ ಮಗ ನಾಗಪ್ಪ ಕಳೆದ ವರ್ಷ ಮೃತಪಟ್ಟಿದ್ದು, ಅವನ ಅಂತ್ಯಕ್ರಿಯೆಯನ್ನು ಅದೇ ತೋಟದಲ್ಲಿ ನೆರವೇರಿಸಲಾಗಿತ್ತು. ಆತನೇ ನಾಗರಹಾವಿನ ರೂಪದಲ್ಲಿ ಬಂದಿದ್ದಾನೆ ಎಂದು ಕುಟುಂಬದವರು ಹೇಳುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
MUST WATCH
ಹೊಸ ಸೇರ್ಪಡೆ
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ