ಉತ್ತರಾಖಂಡ; ಚಿರತೆ ಭಯಕ್ಕೆ ಊರೇ ಖಾಲಿ ಮಾಡಿದ ಕುಟುಂಬ
Team Udayavani, Sep 3, 2022, 6:45 AM IST
ಡೆಹ್ರಾಡೂನ್: ಚಿರತೆಯ ಭಯದಿಂದಾಗಿ ಉತ್ತರಾಖಂಡದ ಪೌರಿ ಜಿಲ್ಲೆಯ ದುಗಡ್ಡ ಮತ್ತು ಪೋಕ್ರಾ ಬ್ಲಾಕ್ಗಳು ಸಂಪೂರ್ಣವಾಗಿ ಖಾಲಿಯಾಗಿವೆ.
ಸುಮಾರು 16ಕಿ.ಮೀ. ದೂರದಲ್ಲಿರುವ ನಗರದಲ್ಲಿ ಈ ಎಲ್ಲ ಕುಟುಂಬಗಳು ಬಾಡಿಗೆ ಮನೆ ಮಾಡಿಕೊಂಡು ಜೀವಿಸಲಾರಂಭಿಸಿವೆ.
ಕಳೆದ ವರ್ಷ ಏಪ್ರಿಲ್ನಲ್ಲಿ ಮನೆ ಅಂಗಳದಲ್ಲಿ ಆಡುತ್ತಿದ್ದ ಐದು ವರ್ಷದ ಬಾಲಕಿಯನ್ನು ಚಿರತೆ ಹೊತ್ತುಕೊಂಡು ಹೋಗಿತ್ತು.
ಹಾಗೆಯೇ ಕಳೆದ ತಿಂಗಳು ಮಗುವನ್ನು ಶಾಲೆಗೆ ಬಿಟ್ಟು ಮನೆಗೆ ಬರುತ್ತಿದ್ದ ಮಹಿಳೆಯನ್ನೇ ಚಿರತೆ ಎಳೆದುಕೊಂಡು ಹೋಗಿತ್ತು.
ಈ ಎರಡು ಘಟನೆಗಳು ಜನರಲ್ಲಿ ಭಯ ಹುಟ್ಟಿಸಿದೆ. ಆ ಹಿನ್ನೆಲೆ ಪ್ರತಿಯೊಬ್ಬರೂ ಮನೆ ಖಾಲಿ ಮಾಡಿ ಬೇರೆಡೆಗೆ ಸ್ಥಳಾಂತರವಾಗುತ್ತಿದ್ದಾರೆ.
ಸುತ್ತಮುತ್ತಲಿನ ಹಳ್ಳಿಗಳ ಜನರೂ ಮನೆಯಿಂದ ಹೊರಬರಲು ಭಯ ಪಡುತ್ತಿದ್ದಾರೆ ಎನ್ನಲಾಗಿದೆ.