ವಿದೇಶಿ ಉದ್ಯೋಗದ ಬಗ್ಗೆ ಎಚ್ಚರ ಇರಲಿ: ಕೇಂದ್ರ ಸರ್ಕಾರ
Team Udayavani, Sep 25, 2022, 7:45 AM IST
ನವದೆಹಲಿ: ಥಾಯ್ಲೆಂಡ್, ಮಾಯೆನ್ಮಾರ್ನಂತಹ ದೇಶಗಳಿಗೆ ಉದ್ಯೋಗವನ್ನರಿಸಿಕೊಂಡು ಹೋಗುವ ಮುನ್ನ ಉದ್ಯೋಗದಾತರ ಅರ್ಹತೆಯನ್ನು ಮೊದಲು ಪರಿಶೀಲಿಸಿಕೊಳ್ಳಿ… ಹೀಗೆಂದು ಕೇಂದ್ರ ಸರ್ಕಾರ ಭಾರತೀಯರಿಗೆ ಎಚ್ಚರಿಕೆ ನೀಡಿದೆ.
ಇತ್ತೀಚೆಗೆ ಮಾಯೆನ್ಮಾರ್, ಥಾಯ್ಲೆಂಡ್ನಲ್ಲಿ ಉತ್ತಮ ಕೆಲಸ ಕೊಡುತ್ತೇವೆಂದು ವಂಚಿಸಿದ ಪ್ರಕರಣ ಕೇಂದ್ರ ಸರ್ಕಾರದ ಗಮನಕ್ಕೆ ಬಂದಿದೆ.
ಐಟಿ ಕೌಶಲ್ಯ ಹೊಂದಿರುವವರನ್ನೇ ಗುರಿಯಾಗಿಸಿಕೊಂಡುವ ವಿದೇಶಿ ಮಾಫಿಯಾಗಳು ಕಾರ್ಯಾಚರಣೆ ಮಾಡುತ್ತಿವೆ. ಮಯೆನ್ಮಾರ್ನಲ್ಲಿ ಸಂಕಷ್ಟ ಸ್ಥಿತಿಯಲ್ಲಿದ್ದ 60 ಮಂದಿಯ ಪೈಕಿ 30 ಮಂದಿಯನ್ನು ಭಾರತೀಯ ರಾಯಭಾರ ಕಚೇರಿ ರಕ್ಷಿಸಿತ್ತು ಎಂದು ಕೇಂದ್ರ ಸರ್ಕಾರ ಹೇಳಿದೆ.