ಬೆಂಗಳೂರಿಂದ ವಿಜಯವಾಡಕ್ಕೆ ಇನ್ನು 5 ಗಂಟೆ ಪ್ರಯಾಣ
Team Udayavani, Sep 30, 2022, 7:30 AM IST
ನವದೆಹಲಿ: ಇನ್ನು ಮುಂದೆ ಬೆಂಗಳೂರಿನಿಂದ ಆಂಧ್ರಪ್ರದೇಶದ ವಿಜಯವಾಡಕ್ಕೆ ಐದು ಗಂಟೆಗಳ ಅವಧಿಯಲ್ಲಿ ಪ್ರಯಾಣಿಸಲು ಸಾಧ್ಯ! ಕರ್ನಾಟಕದ ರಾಜಧಾನಿಯಿಂದ ಕಡಪಾ ಮೂಲಕ ವಿಜಯವಾಡದವರೆಗೆ 342 ಕಿಮೀ ದೂರಕ್ಕೆ ಗ್ರೀನ್ಫೀಲ್ಡ್ ಹೆದ್ದಾರಿಯನ್ನು 13,600 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ.
ಆ ಕಾಮಗಾರಿ ಮುಕ್ತಾಯದ ಬಳಿಕ ಎರಡೂ ನಗರಗಳ ನಡುವೆ ಸದ್ಯ ಇರುವ 11 ಗಂಟೆಯ ಪ್ರಯಾಣದ ಅವಧಿ ಐದು ಗಂಟೆಗೆ ಇಳಿಯಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಗುರುವಾರ ಟ್ವೀಟ್ ಮಾಡಿದ್ದಾರೆ. ಜತೆಗೆ 75 ಕಿಮೀ ದೂರವೂ ಕಡಿಮೆಯಾಗಲಿದೆ ಎಂದು ಸಚಿವ ಗಡ್ಕರಿ ಬರೆದುಕೊಂಡಿದ್ದಾರೆ. ಇದರಿಂದ ಪ್ರಯಾಣದ ಅವಧಿಯಲ್ಲಿ 6 ಗಂಟೆ ಉಳಿತಾಯ ಆಗಲಿದೆ.
ಕರ್ನಾಟಕ ಮತ್ತು ಆಂಧ್ರಪ್ರದೇಶಗಳಿಗೆ ಈ ಹೆದ್ದಾರಿಯಿಂದ ಭಾರಿ ಪ್ರಯೋಜನ ಆಗಲಿದ್ದು, ವ್ಯಾಪಾರ ಮತ್ತು ವಾಣಿಜ್ಯಿಕ ವಹಿವಾಟುಗಳು ಹೆಚ್ಚಲಿವೆ. 2025-26ನೇ ವಿತ್ತೀಯ ವರ್ಷದ ವೇಳೆಗೆ ಕಾಮಗಾರಿ ಮುಕ್ತಾಯಗೊಳ್ಳುವ ನಿರೀಕ್ಷೆ ಇದೆ. ಗುಂಟೂರು, ಕಡಪಾ, ಕೋಪಾರ್ತಿಯಲ್ಲಿ ಉದ್ಯಮ ಮತ್ತು ಕೈಗಾರಿಕಾ ಚಟುವಟಿಕೆಗಳು ಹೆಚ್ಚಲಿವೆ.
ಮುಂದಿನ ಮೂರು ವರ್ಷಗಳಲ್ಲಿ ದೇಶದಲ್ಲಿ 26 ಹೊಸ ಗ್ರೀನ್ಫೀಲ್ಡ್ ಹೆದ್ದಾರಿಗಳು ನಿರ್ಮಾಣವಾಗಲಿವೆ ಎಂದು ಅವರು ಹೇಳಿದ್ದಾರೆ. ಬೆಂಗಳೂರು ಮತ್ತು ಚೆನ್ನೈ ನಡುವೆ ಇಂಥದ್ದೇ ಹೆದ್ದಾರಿ ನಿರ್ಮಾಣ ಮಾಡುವ ಬಗ್ಗೆ ಕೇಂದ್ರ ಸಚಿವರು ಈಗಾಗವೇ ಘೋಷಣೆ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್ಡಿಎ ಗ್ಯಾರಂಟಿ
Election; ಮೊಹಬ್ಬತ್ ಕೀ ದುಕಾನ್ನಲ್ಲಿ ಫೇಕ್ ವೀಡಿಯೋಗಳು ಮಾರಾಟ: ಮೋದಿ
Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್ ಗರಂ
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ
Andhra Pradesh; ಸಿಎಂ ಜಗನ್ ಪಕ್ಷಕ್ಕೆ ರೈತರು,ಟೆೃಲರ್, ಗೃಹಿಣಿಯರೇ ಸ್ಟಾರ್ ಪ್ರಚಾರಕರು!