ಮಂಗಳೂರು ರಥಬೀದಿ: ಶ್ರೀ ಶಾರದಾ ಮಾತೆಯ ಶತಮಾನೋತ್ಸವ ಸಂಭ್ರಮ

ಶತಮಾನಕ್ಕೆ ಮೆರುಗು ತುಂಬಿದ ಚಿನ್ನದ ವೀಣೆ, ನವಿಲು, ಸೀರೆ

Team Udayavani, Sep 30, 2022, 12:52 PM IST

ಮಂಗಳೂರು ರಥಬೀದಿ: ಶ್ರೀ ಶಾರದಾ ಮಾತೆಯ ಶತಮಾನೋತ್ಸವ ಸಂಭ್ರಮ

ಮಂಗಳೂರು ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದ ಆಚಾರ್ಯ ಮಠದ ವಠಾರದಲ್ಲಿ ಜರಗುವ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವಕ್ಕೆ ಈಗ 100ರ ಅಂದರೆ ಶತಮಾನೋತ್ಸವದ ಸಂಭ್ರಮ. ದೇಶವಿದೇಶಗಳಿಂದ ಬಂದಿರುವ ಅಪಾರ ಭಕ್ತ ಜನಸಾಗರದ ಸಮ್ಮುಖದಲ್ಲಿ ಬಹು ಮಾಧ್ಯಮಗಳ ಮೂಲಕ ಜಗತ್ತಿನಾದ್ಯಂತ ಕೋಟ್ಯಾಂತರ ಮಂದಿ ಓದುತ್ತಿರುವ ವೀಕ್ಷಿಸುತ್ತಿರುವ ಈ ಮಹೋನ್ನತ ಉತ್ಸವ ಕಳೆದ ಸೆಪ್ಟೆಂಬರ್‌ 25ರಂದು ಹೊರೆಕಾಣಿಕೆ ಸಮರ್ಪಣೆಯ
ಮೂಲಕ ಆರಂಭವಾಗಿದೆ. ಅಕ್ಟೋಬರ್‌ 6ರಂದು ಸಂಪನ್ನಗೊಳ್ಳಲಿದೆ.

ಪರಮಪೂಜ್ಯ ಶ್ರೀ ಕಾಶೀಮಠಾಧೀಶ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಆರ್ಶೀವಚನ, ಮಾರ್ಗದರ್ಶನ ದಿವ್ಯ ಉಪಸ್ಥಿತಿ ಈ ಮಹೋತ್ಸವಕ್ಕೆ ಮತ್ತಷ್ಟು ಆಧ್ಯಾತ್ಮಿಕ ಮೆರುಗು ತುಂಬಿದೆ. ಮಂಗಳೂರು ಶ್ರೀ ಶಾರದಾ ಮಹೋತ್ಸವ ಶತಮಾನೋತ್ಸವ ಸಮಿತಿ ಮತ್ತು ಮಂಗಳೂರು ರಥಬೀದಿ ಶ್ರೀ ಶಾರದಾ ಮಹೋತ್ಸವ ಸಮಿತಿಯ ಸರ್ವರು, ಭಕ್ತಾಭಿಮಾನಿಗಳಾದ ಸ್ವಯಂ ಸೇವಕರು ಅಹರ್ನಿಶಿಯಾಗಿ ಇಲ್ಲಿ ಸೇವಾ ನಿರತರಾಗಿದ್ದಾರೆ.

ಜಗತ್ತಿಗೆ ಜ್ಞಾನದ ರೂಪದಲ್ಲಿ ಪ್ರತ್ಯಕ್ಷರಾಗಿರುವ ವೀಣೆ, ವೇದ ಮತ್ತು ಸ್ಫಟಿಕ ಜಪಮಾಲೆಗಳನ್ನು ತನ್ನ ಕೈಯಲ್ಲಿ ಹಿಡಿದಿರುವ; ವರ್ಣದಲ್ಲಿ ಶುಭ್ರವಾಗಿರುವ, ಪ್ರಥಮ ಮತ್ತು ಅಗ್ರಗಣ್ಯವಾದ ದೈವಿಕ ಶಕ್ತಿಯಾಗಿರುವ ಶ್ರೀ ಸರಸ್ವತಿ ದೇವಿಯು ನಮ್ಮನ್ನು ಸದಾ ಆಶೀರ್ವದಿಸಲಿ. ಶ್ರೀ ಶಾರದೆಯು ನಮ್ಮ ಅಜ್ಞಾನವನ್ನು ನಿವಾರಿಸಿ, ಬುದ್ಧಿಶಕ್ತಿ ದಯಪಾಲಿಸಿ ನಮ್ಮಮ್ಮ ಶಾರದೆ ನಮ್ಮೆಲ್ಲರ ಮನೆಯ ಬೆಳಕಾಗಲಿ ಎಂಬ ಪ್ರಾರ್ಥನೆಯೊಂದಿಗೆ ಶ್ರೀ ವೆಂಕಟರಮಣ ದೇವಸ್ಥಾನದ ಆಚಾರ್ಯರ ಮಠದ
ವಸಂತಮಂಟಪದಲ್ಲಿ ಕಳೆದ ಒಂದು ಶತಮಾನದಿಂದ ಆರಾಧಿಸಿಕೊಂಡು ಬರಲಾಗುತ್ತಿದೆ.

ಈಗ ಈ ಶತಮಾನದ ಸಂಭ್ರಮಾಚರಣೆ ನಮ್ಮೆಲ್ಲರ ಪಾಲಿನ ಸೌಭಾಗ್ಯ ಎನ್ನುತ್ತಾರೆ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಶ್ರೀ ಪಂಡಿತ್‌ ಎಂ.ನರಸಿಂಹ ಆಚಾರ್ಯ ಅವರು. ಶ್ರೀ ಶಾರದೋತ್ಸವವು ಧಾರ್ಮಿಕ, ಆಧ್ಯಾತ್ಮಿಕ ಆಚರಣೆಯೊಂದಿಗೆ ಸಾಮಾಜಿಕ, ಕಲೆ, ಸಂಘಟನೆ ಮತ್ತು ಸಾಂಸ್ಕೃತಿಕ ಮಹೋತ್ಸವವೇ ಆಗಿದೆ. ಇಲ್ಲಿನ ಸರಸ್ವತಿ ಕಲಾಮಂಟಪದಲ್ಲಿ ಪ್ರತೀ ದಿನ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ಗಳಲ್ಲಿ ನೂರಾರು ಮಂದಿ ಕಲಾವಿದರು ಭಾಗವಹಿಸುತ್ತಾರೆ.

ಶತಮಾನಕ್ಕೆ ಮೆರುಗು ತುಂಬಿದ ಚಿನ್ನದ ವೀಣೆ, ನವಿಲು, ಸೀರೆ
ಮಂಗಳೂರು ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದ ಆಚಾರ್ಯಮಠದ ವಠಾರದಲ್ಲಿ ನಡೆಯುತ್ತಿರುವ ಮಂಗಳೂರು ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವದ ಶತಮಾನೋತ್ಸವಕ್ಕೆ ಭಕ್ತರು ವಿಶೇಷವಾದ ಸ್ವರ್ಣ ರಜತ ಸಂಭ್ರಮ ತುಂಬಿದ್ದಾರೆ. ಸುಮಾರು ಆರು ಕಿಲೋ ಬೆಳ್ಳಿ ಮತ್ತು 500 ಗ್ರಾಂ ಚಿನ್ನದಿಂದ ಶಾರದೆಗೆ ಸ್ವರ್ಣವೀಣೆ ಸಮರ್ಪಣೆ ಆಗಿದೆ.

750 ಗ್ರಾಂ ಚಿನ್ನದ ನವಿಲನ್ನು ನೀಡಲಾಗಿದೆ. 16 ಪವನ್‌ಚಿನ್ನದ ಕೈಕಡಗವನ್ನು ಓರ್ವಭಕ್ತ ಕುಟುಂಬ ಸಮರ್ಪಿಸಿದ್ದಾರೆ. 35 ಕಿ.ಲೋ. ಬೆಳ್ಳಿಯಿಂದ ರಜತಸಿಂಹಾಸನ, ಪೀಠಪ್ರಭಾವಳಿ; 21 ಪವನ್‌ ಚಿನ್ನದಿಂದ ಸ್ವರ್ಣ ಆರತಿ, ಈ ಬಾರಿಯ ವಿಶೇಷವಾಗಿ 8 ಲಕ್ಷ ರೂ. ಮೌಲ್ಯದ ಸ್ವರ್ಣಜರಿ ಮತ್ತು 1800 ಸ್ವರ್ಣ ಹೂವಿನಿಂದ ತಯಾರಿಸಲಾದ ಸೀರೆಯನ್ನು ಶೋಭಾಯಾತ್ರೆಯ ದಿನದಂದು ಶ್ರೀ ಶಾರದೆಗೆ ಉಡಿಸಲಾಗುತ್ತದೆ. ಶ್ರೀ ಶಾರದಾ ಮಹೋತ್ಸವಕ್ಕೆ ಈ ಬಾರಿ ಆಚಾರ್ಯ ಮಠದಲ್ಲಿ ನೂತನ ವಸಂತ ಮಂಟಪವನ್ನು ನಿರ್ಮಿಸಲಾಗಿದೆ.

ಬರಹ:
ಮನೋಹರ ಪ್ರಸಾದ್‌
ವಿಶ್ರಾಂತ ಸಹಾಯಕ
ಸಂಪಾದಕರು
ಉದಯವಾಣಿ

ಟಾಪ್ ನ್ಯೂಸ್

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.