ಬಿಎಂಟಿಸಿ & ಕೆಎಸ್ಆರ್ಟಿಸಿ; ಬಸ್ ಪೂಜೆಗೆ ಕೇವಲ 100 ರೂ.: ಸಿಬಂದಿಗೆ ನಿರಾಸೆ
ಒಂದು ನಿಂಬೆಹಣ್ಣಿನ ಬೆಲೆ 10 ರೂ....
Team Udayavani, Oct 3, 2022, 9:19 PM IST
ಬೆಂಗಳೂರು: ಬಸ್ಗಳ ಪೂಜೆಗೆ ತಲಾ ನೂರು ರೂ. ನೀಡಿರುವುದು ಸಾರಿಗೆ ಚಾಲನಾ ಸಿಬಂದಿಗೆ ನಿರಾಸೆ ಮೂಡಿಸಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಹಾಗೂ ಕೆಎಸ್ಆರ್ಟಿಸಿಯು ಆಯುಧ ಪೂಜೆ ಪ್ರಯುಕ್ತ ನಡೆಸುವ ಬಸ್ಗಳ ಪೂಜೆ ಮತ್ತು ಅಲಂಕಾರ ವೆಚ್ಚಕ್ಕೆ ಈ ಬಾರಿಯೂ ಪ್ರತಿ ಬಸ್ಗೆ ಕೇವಲ 100 ರೂ. ನೀಡಲಾಗಿದೆ.
ಮಾರುಕಟ್ಟೆಗಳಲ್ಲಿ ಹೂ-ಹಣ್ಣಿನ ಬೆಲೆ ಗಗನಕ್ಕೇರಿದೆ. ಒಂದು ನಿಂಬೆಹಣ್ಣಿನ ಬೆಲೆ 10 ರೂ. ಆಗಿದೆ. ವಾಹನಕ್ಕೆ ಹಾಕುವ ಹೂವಿನ ಹಾರಕ್ಕೆ ಕನಿಷ್ಠ 300-400 ರೂ. ಬೇಕಾಗುತ್ತದೆ. ಬಾಳೆ ಕಂಬ, ಬೂದಗುಂಬಳ ಸೇರಿ ಇತರೆ ಪೂಜೆ ಸಾಮಗ್ರಿಗಳಿಗೆ 200 ರಿಂದ 300 ರೂ. ಖರ್ಚಾಗುತ್ತದೆ. ಬಿಎಂಟಿಸಿ ನೀಡುವ ಬಿಡಿಗಾಸಿಗೆ ಅರ್ಧಮಾರು ಹೂವು ಕೂಡ ಬರುವುದಿಲ್ಲ. ಸಾವಿರಾರು ರೂ. ನೀಡಿ ಎನ್ನುವುದಿಲ್ಲ, ಕನಿಷ್ಠ ಅಲಂಕಾರಕ್ಕಾಗುವಷ್ಟಾದರೂ ಹೆಚ್ಚಳ ಮಾಡಬೇಕು ಎಂದು ಚಾಲಕರೊಬ್ಬರು ಆಗ್ರಹಿಸಿದರು.
ಡಿಪೋಗೆ 10 ಸಾವಿರ: ಕೆಎಸ್ಆರ್ಟಿಸಿಯಲ್ಲಿಯೂ ತಲಾ ಒಂದು ಬಸ್ ಪೂಜೆಗೆ 100 ರೂ.ಗಳಂತೆ ಡಿಪೋಗಳಿಗೆ ಪೂಜೆ ಖರ್ಚಿಗೆ ಹಣವನ್ನು ವರ್ಗಾಯಿಸಲಾಗಿದೆ. 100 ಬಸ್ಗಳಿರುವ ಪ್ರತಿ ಡಿಪೋಗೆ 10 ಸಾವಿರ ರೂ. ಬಿಡುಗಡೆ ಮಾಡಲಾಗಿದೆ. ಡಿಪೋದ ಎಲ್ಲ ವಾಹನಗಳಿಗೂ ಒಟ್ಟಾಗಿ ಪೂಜೆ ಸಲ್ಲಿಸಲಾಗುತ್ತದೆ. ಬೆಂಗಳೂರು ಹೊರತುಪಡಿಸಿ, ಇತರೆ ಭಾಗಗಳಲ್ಲಿ ಹೂವಿನ ದರ ಕಡಿಮೆ ಇದ್ದು, ಡಿಪೋಗೆ ನೀಡುವ 10 ಸಾವಿರ ರೂ. ಸಾಕಾಗುತ್ತದೆ ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಈ ಮಧ್ಯೆ ಬಿಎಂಟಿಸಿ ಚಾಲಕರು ತಮ್ಮ ಬಸ್ಗಳನ್ನು ಅದ್ಧೂರಿಯಾಗಿ ಸಿಂಗರಿಸಿದ್ದಾರೆ. ಜಯನಗರ, ಬನಶಂಕರಿ, ರಾಜರಾಜೇಶ್ವರಿ ಡಿಪೋಗಳಲ್ಲಿ ಬಸ್ಗಳಿಗೆ ವಿಶೇಷ ಅಲಂಕಾರ ಮಾಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಂಸದ ಶ್ರೀನಿವಾಸ್ ಪ್ರಸಾದ್ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ
MUST WATCH
ಹೊಸ ಸೇರ್ಪಡೆ
Kerala ವಯನಾಡಲ್ಲಿ ರಾಹುಲ್ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ
ಸಂಸದ ಶ್ರೀನಿವಾಸ್ ಪ್ರಸಾದ್ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ