ಠಾಣೆಗೆ ಹೋಗಿ ಅಮ್ಮನ ವಿರುದ್ಧ ದೂರು ಕೊಟ್ಟ 3 ವರ್ಷದ ಬಾಲಕ!ವಿಡಿಯೋ ನೋಡಿ ಸಚಿವರಿಂದ ಉಡುಗೊರೆ
ವಿಡಿಯೋ ವೈರಲ್ ಆದ ನಂತರ ಗೃಹ ಸಚಿವ ನರೋತ್ತಮ್ ಮಿಶ್ರಾ ಬಾಲಕನಿಗೆ ಕರೆ ಮಾಡಿದ್ದರು,
Team Udayavani, Oct 19, 2022, 1:42 PM IST
ಭೋಪಾಲ್: ಚಾಕಲೆಟ್ ಮತ್ತು ಕ್ಯಾಂಡಿಯನ್ನು ಕಸಿದುಕೊಂಡ ಸಿಟ್ಟಿನಿಂದ 3 ವರ್ಷದ ಬಾಲಕ ಠಾಣೆಗೆ ಹೋಗಿ ಅಮ್ಮನ ವಿರುದ್ಧ ದೂರು ನೀಡಿದ್ದ ಘಟನೆಯ ವಿಡಿಯೋ ವೈರಲ್ ಆಗಿತ್ತು. ಇದೀಗ ಪುಟಾಣಿಗೆ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ ಮಿಶ್ರಾ ಅವರು ದೀಪಾವಳಿ ಉಡುಗೊರೆಯಾಗಿ ಪುಟ್ಟ ಸೈಕಲ್ ಆನ್ನು ಕಳುಹಿಸಿಕೊಟ್ಟಿದ್ದಾರೆ.
ಇದನ್ನೂ ಓದಿ:7ನೇ ತರಗತಿ ಪ್ರಶ್ನೆ ಪತ್ರಿಕೆಯಲ್ಲಿ ʼಕಾಶ್ಮೀರ ಪ್ರತ್ಯೇಕ ದೇಶʼವೆಂದು ಉಲ್ಲೇಖ: ಬಿಜೆಪಿ ಕಿಡಿ
ತನ್ನ ಚಾಕಲೆಟ್ ಅನ್ನು ತಾಯಿ ಕಸಿದುಕೊಂಡಿದ್ದಕ್ಕೆ ಕೋಪಗೊಂಡಿದ್ದ ಹಂಝಾ ಎಂಬ ಪುಟಾಣಿ ಬಾಲಕ ತಾನು ಮಮ್ಮಿ(ಅಮ್ಮ) ವಿರುದ್ಧ ದೂರು ನೀಡಬೇಕು, ಪೊಲೀಸ್ ಠಾಣೆಗೆ ಕರೆದೊಯ್ಯಬೇಕು ಎಂದು ಕೇಳಿಕೊಂಡಿದ್ದ. ನಂತರ ಆತನನ್ನು ಠಾಣೆಗೆ ಕರೆತಂದಾಗ ಮಹಿಳಾ ಪೊಲೀಸ್ ಕಾನ್ಸ್ ಟೇಬಲ್ ಪೇಪರ್ ನಲ್ಲಿ ಬಾಲಕನ ದೂರನ್ನು ದಾಖಲಿಸಿಕೊಂಡಿದ್ದು, ತಾಯಿಯ ಹೆಸರೇನು ಎಂದು ಪ್ರಶ್ನಿಸಿದಾಗ “ಮಮ್ಮಿ” ಅಂತ ಉತ್ತರಿಸಿದ್ದು ವಿಡಿಯೋದಲ್ಲಿ ಸೆರೆಯಾಗಿತ್ತು.
एक तीन साल के बच्चे ने पुलिस स्टेशन जाकर अपनी मम्मी की शिकायत की है कि उसकी मम्मी उसे कैंडी नही देती॥ मासूम बच्चे का वीडियो देखिए #Burhanpur #viralvideo #MadhyaPradesh pic.twitter.com/YhqWV8ClwG
— anjali chaudhary (@iamanjalisingh3) October 18, 2022
ಕೊನೆಗೆ ಪೇಪರ್ ಪೀಸ್ ನಲ್ಲಿ ಸಹಿ ಹಾಕು ಎಂದಿದ್ದಕ್ಕೆ ಎರಡು ಗೆರೆ ಎಳೆದಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಗೃಹ ಸಚಿವ ನರೋತ್ತಮ್ ಮಿಶ್ರಾ ಹಂಝಾ ಪೋಷಕರಿಗೆ ಕರೆ ಮಾಡಿ ಬಾಲಕನಜೊತೆ ಮಾತನಾಡಿ ದೀಪಾವಳಿ ಉಡುಗೊರೆಯಾಗಿ ಚಾಕಲೆಟ್ ಮತ್ತು ಸೈಕಲ್ ಉಡುಗೊರೆಯಾಗಿ ನೀಡುವುದಾಗಿ ಹೇಳಿದ್ದರು.
ಕೊಟ್ಟ ಮಾತಿನಂತೆ ಸಚಿವ ಮಿಶ್ರಾ ಅವರು ಇಂದು ಬಾಲಕನಿಗೆ ಚಾಕಲೆಟ್ ಮತ್ತು ಸೈಕಲ್ ಅನ್ನು ಕಳುಹಿಸಿಕೊಟ್ಟಿದ್ದು, ಹೊಸ ವಿಡಿಯೋದಲ್ಲಿ ಬಾಲಕ ಪುಟ್ಟ ಸೈಕಲ್ ಅನ್ನು ತುಳಿಯಲು ಪ್ರಯತ್ನಿಸುತ್ತಿರುವುದು ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ