ದೈವಾರಾಧನೆ ಜನರ ನಂಬಿಕೆ; ಹಗುರ ಮಾತು ಬೇಡ : ಸಚಿವೆ ಶೋಭಾ ಕರಂದ್ಲಾಜೆ
Team Udayavani, Oct 22, 2022, 2:11 PM IST
ಹುಬ್ಬಳ್ಳಿ: ಭೂತಾರಾಧನೆ, ದೈವಾರಾಧನೆ ಕರಾವಳಿ ಜನರ ನಂಬಿಕೆ, ಪದ್ಧತಿಯಾಗಿದ್ದು ನಮ್ಮ ಭಾವನೆ, ಪದ್ಧತಿ ಬಗ್ಗೆ ಯಾರು ಹಗುರವಾಗಿ ಮಾತನಾಡಬಾರದು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಶನಿವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂತಾರ’ ಸಿನೆಮಾ ಬಗ್ಗೆ ಏನಾದರೂ ವಿಮರ್ಶೆ ಮಾಡಲಿ ಆದರೆ, ಕರಾವಳಿ, ಕೇರಳದಲ್ಲಿ ಆಚರಣೆ ಮಾಡುವ ಭೂತಾರಾಧನೆ, ದೈವಾರಾಧನೆ ಪ್ರಶ್ನಿಸುವ, ಹಗುರವಾಗಿ ಮಾತನಡುವುದು ಸರಿಯಲ್ಲ ಎಂದರು.
ರಾಹುಲ್ ಗಾಂಧಿ ಅವರ ‘ಭಾರತ ಜೋಡೋ’ ಯಾತ್ರೆ ದೇಶದಲ್ಲಿ ಅಲ್ಲ, ಕಾಂಗ್ರೆಸ್ ಕಾರಣದಿಂದಾಗಿ ದೇಶದ ಭಾಗ ಪಾಕಿಸ್ಥಾನ, ಚೀನಾದ ಪಾಲಾಗಿದೆಯೋ ಅಲ್ಲಿ ಹೋಗಿ ಯಾತ್ರೆ ಮಾಡಲಿ. ದೇಶ ವಿಭಜನೆಗೂ ಕಾಂಗ್ರೆಸ್ ನೀತಿ ಕಾರಣ ಎಂದು ಆರೋಪಿಸಿದರು.
ಚಿತ್ರ ನಟ ಚೇತನ್ ಅಹಿಂಸಾ ‘ದೈವಾರಾಧನೆ ಹಿಂದೂ ಸಂಸ್ಕೃತಿಯ ಭಾಗವಲ್ಲ’ ಎಂದು ಹೇಳಿಕೆ ನೀಡಿ ಭಾರಿ ಚರ್ಚೆಗೆ ಅವಕಾಶ ಮಾಡಿದ್ದರು. ಈ ಬಗ್ಗೆ ವ್ಯಾಪಕ ವಿರೋಧವೂ ವ್ಯಕ್ತವಾಗಿತ್ತು. ಈ ಕುರಿತು ಸಚಿವೆ ಶೋಭಾ ಪ್ರತಿಕ್ರಿಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pramod Muthalik: ಹುಣಸೂರು ಮತ್ತೊಂದು ಭಟ್ಕಳ್ಳ ಆಗಲಿದೆ… ಪ್ರಮೋದ್ ಮುತಾಲಿಕ್ ಎಚ್ಚರಿಕೆ
ಪ್ರಜ್ವಲ್ಗೆ ಇನ್ನೊಂದು ಅತ್ಯಾಚಾರ ಕೇಸ್ ಕುಣಿಕೆ ; ಕಠಿನ ವಿಧಿಗಳುಳ್ಳ 3ನೇ ಎಫ್ಐಆರ್ ದಾಖಲು
3 ದಿನ ರೇವಣ್ಣ ಭೇಟಿಗಿಲ್ಲ ಅವಕಾಶ; ಮಾಜಿ ಸಚಿವರಿಗೆ ಈಗ ಬೆನ್ನು ನೋವು
ಪತ್ರಕರ್ತರ ಜತೆ ದೇವರಾಜೇಗೌಡ ಮಾತನಾಡಿದ ಆಡಿಯೋ ಬಹಿರಂಗ
ನೀತಿ ಸಂಹಿತೆ ಸಡಿಲಿಕೆ: ಆಯೋಗಕ್ಕೆ ಪತ್ರ ಬರೆದು ರಾಜ್ಯ ಸರಕಾರ ಮನವಿ
MUST WATCH
ಹೊಸ ಸೇರ್ಪಡೆ
UV Fusion: ಅವರು ಹಾಗೆ, ಇವರು ಹೀಗೆ, ನಾವು ಹೇಗೆ?
Crime Followup: ಸೂರ್ಲಬ್ಬಿ ವಿದ್ಯಾರ್ಥಿನಿ ಕೊಲೆ ಪ್ರಕರಣದ ಆರೋಪಿ ಪೊಲೀಸ್ ವಶ
Pramod Muthalik: ಹುಣಸೂರು ಮತ್ತೊಂದು ಭಟ್ಕಳ್ಳ ಆಗಲಿದೆ… ಪ್ರಮೋದ್ ಮುತಾಲಿಕ್ ಎಚ್ಚರಿಕೆ
Housing Fraud Case: ಇಡಿ ದಾಳಿ… ಬಿಲ್ಡರ್ ಗೆ ಸೇರಿದ 52 ಕೋಟಿ ಮೌಲ್ಯದ ಆಸ್ತಿ ಜಪ್ತಿ
UV Fusion: ಮೂಕಪ್ರಾಣಿಗಳ ವೇದನೆಗೆ ದನಿಯಾಗುವಿರಾ!