ನಾಗರಿಕತೆಯ ನಡುವೆಯೂ ಗ್ರಾಮೀಣ ಸಂಸ್ಕೃತಿ ಉಳಿವಿಗೆ ಪಾಂಡವರು ಸಾಕ್ಷಿ

ಸಂಪ್ರದಾಯ, ಪರಂಪರೆಯನ್ನು ಬಿಂಬಿಸುವ ಹಬ್ಬ ದೀಪಾವಳಿ

Team Udayavani, Oct 25, 2022, 5:41 PM IST

ನಾಗರಿಕತೆಯ ನಡುವೆಯೂ ಗ್ರಾಮೀಣ ಸಂಸ್ಕೃತಿ ಉಳಿವಿಗೆ ಪಾಂಡವರು ಸಾಕ್ಷಿ

ರಬಕವಿ-ಬನಹಟ್ಟಿ: ಗ್ರಾಮೀಣ ಪ್ರದೇಶಗಳು ನಮ್ಮ ಸಂಸ್ಕೃತಿಯ ಮೂಲ ನೆಲೆಗಳು. ನಮ್ಮ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಭಾಷೆ ಮತ್ತು ವೇಷ ಭೂಷಣ ಇಂದು ಉಳಿದಿರುವುದು ಹಳ್ಳಿಗಾಡಿನಲ್ಲಿ ಮಾತ್ರ.

ಅಂತೆಯೇ ಗ್ರಾಮೀಣ ಪ್ರದೇಶದಲ್ಲಿ ಆಚರಿಸಲ್ಪಡುವ ಹಬ್ಬಗಳು ಕೂಡಾ ವಿಶಿಷ್ಟತೆ ಹಾಗೂ ಸಂಪ್ರದಾಯಬದ್ಧವಾದವುಗಳು ಅವುಗಳ ಆಚರಣೆಗೆ ವಿಶೇಷವಾದ ಅರ್ಥವಿರುತ್ತದೆ. ಇತ್ತಿಚೀಗೆ ಆಧುನಿಕತೆಯಿಂದ ನಗರ ಪ್ರದೇಶಗಳಲ್ಲಿ ಆಚರಿಸುವ ಹಬ್ಬಗಳಿಗೆ ಹೈಟೆಕ್ ಟಚ್ ಬಂದಿರಬಹುದು ಆದರೆ ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬಗಳು ತಮ್ಮ ಮೂಲ ಸೊಗಡನ್ನು ಉಳಿಸಿಕೊಂಡು ಬಂದಿರುವುದು ಹೆಮ್ಮೆಯ ಸಂಗತಿಯೇ ಸರಿ.

ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಹಬ್ಬವೂ ಒಂದಿಲ್ಲೊಂದು ವೈಶಿಷ್ಟ್ಯಯತೆಯನ್ನು ಒಳಗೊಂಡು ಸೌಹಾರ್ದದಿಂದ ಆಚರಿಸುತ್ತಾ, ನಮ್ಮ ಪೂರ್ವಜರು ಹಾಕಿ ಕೊಟ್ಟ ಸಂಪ್ರದಾಯ, ಪರಂಪರೆಯನ್ನು ಗ್ರಾಮೀಣ ಜನತೆ ಈಗಲೂ ಪಾಲಿಸುತ್ತಾ ಬಂದಿದ್ದಾರೆ. ಅಂತೆಯೇ ದೀಪಾವಳಿಯ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹಾಕುವ ಪಾಂಡವರು(ಪಾಂಡ್ರವ್ವ)ಗಳು ನಾಗರೀಕತೆ ಬೆಳೆದಂತೆ ಕಡಿಮೆಯಾಗುತ್ತಾ ಬರುತ್ತಿದೆ. ಇದು ಹಳ್ಳಿಗಳಲ್ಲಿ ಮಾತ್ರ ಹೆಚ್ಚಾಗಿ ಕಾಣಸಿಗುತ್ತದೆ. ದೀಪಾವಳಿ ಹಬ್ಬಕ್ಕೂ ಪೂರ್ವ ಮೊದಲೆರಡು ದಿನ ಮಹಿಳೆಯರು ಕೈ ಬುಟ್ಟಿಯನ್ನು ತೆಗೆದುಕೊಂಡು ಹೋಗಿ ಆಕಳ ಸಗಣಿಯನ್ನು ತುಂಬಿಕೊಂಡು ಬಂದು, ಅದನ್ನು ಮನೆಯಲ್ಲಿಟ್ಟು ನಂತರ ಹಬ್ಬದ ಮೊದಲದಿನ ನರಕ ಚತುರ್ದಶಿಯಂದು 5 ಪಾಂಡವರನ್ನು, ಅಮವಾಸ್ಯೆಯಂದು 9 ಹಾಗೂ ದೀಪಾವಳಿಯ ಪಾಡ್ಯೆಯಂದು 11 ಪಾಂಡವರನ್ನು ಸಗಣಿಯಿಂದ ಆಕಾರ ಮಾಡಿ, ಮನೆಯ ಪಡಸಾಲೆಯ ಒಂದು ಕಡೆಗೆ ಪ್ರತಿಷ್ಠಾಪಿಸಿ ನಂತರ ಅವುಗಳನ್ನು ಪೂಜಿಸಿ ಕಣಗಲದ ಹಳದಿ ಹೂಗಳನ್ನು ತಂದು ಪೂಜಿಸುತ್ತಾರೆ. ಮತ್ತು ಮೂರು ದಿವಸಗಳ ಕಾಲ ಮನೆಯಲ್ಲಿ ಮಾಡಿದ ಸಿಹಿ ಅಡುಗೆಯನ್ನು ನೈವೇದ್ಯ ಮಾಡುತ್ತಾರೆ. ನಂತರ ಪಾಡ್ಯೆಯ ದಿವಸ ಎಲ್ಲ ಪಾಂಡವರನ್ನು ಮತ್ತೊಮ್ಮೆ ಪೂಜಿಸಿ, ನೈವೇದ್ಯ ಮಾಡಿ ಸೂರ್ಯ ಮುಳಗುವ ಮುಂಚೆ ಮನೆಯ ಮಾಳಿಗೆಯ ಮೇಲಿಡುತ್ತಾರೆ. ಕೆಲವರು ಕಡೆ ಪಾಡ್ಯೆಯ ದಿನ ಕೂಡಾ ಪಾಂಡವರನ್ನು ಹಾಕಿ ಪೂಜಿಸುತ್ತಾರೆ.

ಹಬ್ಬಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಭಿನ್ನವಾಗಿ ಆಚರಿಸಲ್ಪಡುತ್ತವೆ. ಇಂದು ಹಳ್ಳಿಗಳಲ್ಲಿ ಹಾಕುವ ಪಾಂಡವರು ಇಂದು ನಮ್ಮ ಗ್ರಾಮೀಣ ಹೆಣ್ಣು ಮಕ್ಕಳ ಭಾಷೆಯಲ್ಲಿ ಅದು ಪಾಂಡ್ರವ್ವ ಎಂದು ರೂಢಿಯಾಗಿದೆ.

ಹಿನ್ನಲೆ: ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಶಗಣಿಯಿಂದ ಈ ಪಾಂಡವರನ್ನು ಮಾಡಲು ಕಾರಣವೆಂದರೆ, ಇದು ಅತ್ಯಂತ ಶಕ್ತಿಯುತವಾದ ಗೊಬ್ಬರ ಅದಕ್ಕೆ ಅದನ್ನು ಸಾಂಕೇತಿಕವಾಗಿ ಪೂಜಿಸುವುದರ ಸಲುವಾಗಿ ಪಾಂಡವರನ್ನು ಮಾಡಲಾಗುತ್ತದೆ ಎಂಬ ಪ್ರತೀತಿ ಇದೆ.

ಪಾಂಡವರು ಎಂದರೆ:  ಗ್ರಾಮೀಣ ಭಾಗದಲ್ಲಿ ಗ್ರಾಮದ ಪ್ರಮುಖರು ಪಂಚರು ಮತ್ತು ಯಾವುದೇ ಕಾರ್ಯ ಮಾಡಬೇಕಾದರು ಈ ಪಂಚರು ಬೇಕೆ ಬೇಕು. ನಂತರ ಯಾವುದೇ ಬೆಳೆಯನ್ನು ಕೊಯ್ಲು ಮಾಡಬೇಕೆಂದರೂ ಪಂಚ ಮುತೈದೆಯರಿಗೆ ಉಡಿ ತುಂಬುತ್ತಾರೆ. ರಾಶಿ ಮಾಡುವ ಸಂದರ್ಭದಲ್ಲಿ ಐದು ಜನರಿಗೆ ದವಸ-ಧಾನ್ಯಗಳನ್ನು ದಾನವಾಗಿ ನೀಡುತ್ತಾರೆ.

ಕೆಲವು ಭಾಗದಲ್ಲಿ ಸಗಣಿಯಿಂದ ಕೋಟೆಯನ್ನು ಮಾಡಿ ಅದರಲ್ಲಿ ಐದು ಜನ ಪಂಚರನ್ನು ಪ್ರತಿಷ್ಠಾಪಿಸುತ್ತಾರೆ. ಇದು ಪಂಚರ ಪೂಜೆ ಹಾಗೂ ರಕ್ಷಣೆಯ ಸಂಖೇತ. ಜನರು ಪಂಚರ ರಕ್ಷಣೆಯನ್ನು ಮಾಡಿದರೆ  ಪಂಚರು ಜನರ ರಕ್ಷಣೆ ಮಾಡುತ್ತಾರೆ ಎಂಬುದು ವಿಶ್ವಾಸ. ಇನ್ನೂ ಪಂಚರು ಅಂದರೆ ಐದು ಜನ. ಪಾಂಡವರು ಕೂಡಾ ಐದು ಜನ ಆದ್ದರಿಂದ ಸಾಮಾನ್ಯವಾಗಿ ಯಾವುದೇ ಪ್ರದೇಶದಲ್ಲಿ ಐದು ಜನ ಇದ್ದರೇ ಅವರನ್ನು ಪಂಚ ಪಾಂಡವರು ಎಂದು ಕರೆಯುತ್ತಾರೆ ಇದೇ ಕಾರಣಕ್ಕೆ ಇದಕ್ಕೆ ಪಾಂಡವರು(ಪಾಂಡ್ರವ್ವ) ಹೆಸರೂ ಬಂದಿರಬಹುದು.

ಕೆಲವು ಕಡೆ ದೀಪಾವಳಿಯ ಸಂದರ್ಭದಲ್ಲಿ ಹಿರಿಯರನ್ನು ಗೌರವಿಸುವುದುಂಟು ಆದ್ದರಿಂದ ಪಂಚರನ್ನು ಪೂಜಿಸುವುದರ ಸಲುವಾಗಿ ಸಗಣಿಯಿಂದ ಮೂರ್ತಿಗಳನ್ನು ಮಾಡಿ ದೀಪಾವಳಿಯ ಸಂದರ್ಭದಲ್ಲಿ ಅವರನ್ನು ಗೌರವಿಸಲಾಗುತ್ತದೆ.

ಇಂತಹ ಇತಿಹಾಸವಿರುವ ಪಾಂಡವರು(ಪಾಂಡ್ರವ್ವ)ಗಳು ಆಧುನಿಕತೆಗೆ ತಕ್ಕಂತೆ ಮಾಯವಾಗುತ್ತಿದ್ದು, ಇದರ ಆಚರಣೆ ಪ್ರದೇಶದಿಂದ ಪ್ರದೇಶಕ್ಕೆ ಬಿನ್ನವಾಗಿರುವುದು ವಿಶೇಷ. ಅಲ್ಲದೇ ಇಂತಹ ವಿಶೇಷತೆಗಳು ನಮಗೆ ಹೆಚ್ಚಾಗಿ ಕಂಡು ಬರುವುದು ಗ್ರಾಮೀಣ ಪ್ರದೇಶದ ಸಾಂಪ್ರದಾಯಸ್ತ ಕುಟುಂಬಗಳಲ್ಲಿ ಮಾತ್ರ. ಇಂತಹ ಹಬ್ಬಗಳನ್ನು ಸಂಪ್ರದಾಯಬದ್ಧವಾಗಿ ಆಚರಣೆ ಮಾಡಿದರೆ ಮಾತ್ರ ನಮ್ಮ ಸಂಸ್ಕೃತಿ ಉಳಿಯಲು ಸಾಧ್ಯ. ಇಂತಹ ಸಂಸ್ಕೃತಿಯ ಉಳಿವಿಗಾದರೂ ನಾವು ಹಬ್ಬಗಳ ಆಚರಣೆ ಮಾಡಲೇಬೇಕು.

‘ಇದು ಪ್ರಜೆಗಳು ಪಾಂಡವರಿಗೆ ಆಶ್ರಯ ಕೊಡುವಂತಹ ಆಚರಣೆಯಾಗಿದೆ. ಜನರು ಮೂಢನಂಬಿಕೆಗಳನ್ನು ಕೈಬಿಡಬೇಕು. ಆದರೆ ಮೂಲ ನಂಬಿಕೆಗಳನ್ನಲ್ಲ. ಏಕೆಂದರೆ ಅವು ನಮ್ಮ ಪರಂಪರೆ ಹಾಗೂ ಸಂಸ್ಕೃತಿಗೆ ಸಾಕ್ಷಿಯಾಗಿವೆ. ಮೂಲ ನಂಬಿಕೆಗಳಲ್ಲಿ ಅನೇಕ ಬಗೆಯ ಐತಿಹ್ಯಗಳು ಹುದುಗಿವೆ. ಈ ಐತಿಹ್ಯಗಳೇ ನಮ್ಮ ಇತಿಹಾಸವನ್ನು ಕಟ್ಟಿಕೊಡಲು ಸಹಾಯ ಮಾಡುವ ಅಂಶಗಳಾಗಿವೆ. ಇಂತಹ ಹಬ್ಬ ಪಾರಂಪಾರಿಕ ಆಚರಣೆಯಲ್ಲಿ ಅನೇಕ ಅರ್ಥಗಳು ಹುದುಗಿವೆ’– ಸಿದ್ಧರಾಜ ಪೂಜಾರಿ, ಹಿರಿಯ ಸಾಹಿತಿಗಳು, ವಿಮರ್ಶಕರು, ರಬಕವಿ-ಬನಹಟ್ಟಿ

-ಕಿರಣ ಶ್ರೀಶೈಲ ಆಳಗಿ 

ಟಾಪ್ ನ್ಯೂಸ್

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

16

Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್‌ ಮೈಂಡ್; ಗೋಲ್ಡಿ ಬ್ರಾರ್‌ ಶೂಟೌಟ್ – ವರದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ

ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.