ಟಿ20 ವಿಶ್ವಕಪ್ 2022: ರಿಷಭ್ ಪಂತ್ ಭರವಸೆಗೆ ಹೊಡೆತ ನೀಡಿದ ಅಕ್ಷರ್ ಪಟೇಲ್ ಹೇಳಿಕೆ
Team Udayavani, Oct 28, 2022, 3:49 PM IST
ಸಿಡ್ನಿ: ರವೀಂದ್ರ ಜಡೇಜಾ ಗಾಯಗೊಂಡ ಕಾರಣ ಅವರಿಂದ ತೆರವಾದ ಸ್ಥಾನದಲ್ಲಿ ಆಡುತ್ತಿರುವ ಅಕ್ಷರ್ ಪಟೇಲ್ ಅವರಿಗೆ ಮಾನಸಿಕವಾಗಿ ಸಿದ್ಧರಾಗಿರಬೇಕು ಎಂದು ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಹೇಳಿದೆ. ಇದು ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಭರವಸೆಗೆ ಮತ್ತಷ್ಟು ಹೊಡೆತ ನೀಡಿದೆ.
ಅಗತ್ಯವಿದ್ದ ಜಾಗದಲ್ಲಿ ಮತ್ತು ಟಾಪ್ ಸಿಕ್ಸ್ನಲ್ಲಿ ಬ್ಯಾಟ್ ಮಾಡಲು ಅಕ್ಷರ್ ಪಟೇಲ್ ಗೆ ಸೂಚಿಸಲಾಗಿದೆ. ಭಾರತದ ಬ್ಯಾಟಿಂಗ್ ಕ್ರಮಾಂಕದ ಬಲಗೈ ಆಟಗಾರರನ್ನು ಒಳಗೊಂಡಿರುವ ಕಾರಣ ಅಕ್ಷರ್ ಗೆ ಹೆಚ್ಚಿನ ಬ್ಯಾಟಿಂಗ್ ಜವಾಬ್ದಾರಿ ನೀಡಲು ತಂಡ ಯೋಚಿಸಿದೆ.
ಅಕ್ಷರ್ ಅವರನ್ನು ಪಾಕಿಸ್ತಾನದ ವಿರುದ್ಧ ಐದನೇ ಕ್ರಮಾಂಕದಲ್ಲಿ ಕಳುಹಿಸಲಾಯಿತು. ಆದರೆ ಅವರು ಬೇಗನೇ ರನೌಟಾದ ಕಾರಣ ಈ ಕ್ರಮವು ಫಲ ನೀಡಲಿಲ್ಲ. ಪಾಕಿಸ್ತಾನ ತಂಡವು ಎಡಗೈ ಸ್ಪಿನ್ನರ್ ನವಾಜ್ ಮತ್ತು ಲೆಗ್ ಸ್ಪಿನ್ನರ್ ಶಾದಾಬ್ ಅವರನ್ನು ಹೊಂದಿದ್ದರು, ಆದ್ದರಿಂದ ಎಡಗೈ ಆಟಗಾರನನ್ನು ಕಳುಹಿಸುವುದು ಯೋಜನೆಯಾಗಿತ್ತು. ಅದಕ್ಕೆ ನನಗೆ ಹಾರ್ದಿಕ್ ಗಿಂತ ಮೊದಲು ಆಡಲು ಹೇಳಿದರು” ಎಂದು ಅಕ್ಷರ್ ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಇದನ್ನೂ ಓದಿ:ತಲ್ಲೂರು: ಹೃದಯಾಘಾತದಿಂದ 13 ವರ್ಷದ ಬಾಲಕಿ ಸಾವು; ನೇತ್ರದಾನ
“ನಮ್ಮ ಅಗ್ರ ಆರು ಮಂದಿ ಬಲಗೈ ಆಟಗಾರರು ಆಗಿರುವುದರಿಂದ, ಅಗತ್ಯವಿದ್ದರೆ ನನಗೆ ಮಧ್ಯಮ ಓವರ್ಗಳಲ್ಲಿ ಬಡ್ತಿ ನೀಡಲಾಗುವುದು, ಅದಕ್ಕೆ ನಾನು ಸಿದ್ಧರಾಗಿರಬೇಕು ಎಂದು ಮ್ಯಾನೇಜ್ ಮೆಂಟ್ ನನಗೆ ತಿಳಿಸಿದೆ” ಎಂದು ಗುಜರಾತ್ ಆಲ್ ರೌಂಡರ್ ಹೇಳಿದರು.
ಪ್ರಮುಖ ಕೀಪರ್ ಆಗಿ ಸದ್ಯ ಪಂತ್ ಗಿಂತ ಮೊದಲು ದಿನೇಶ್ ಕಾರ್ತಿಕ್ ಅವರೇ ಅವಕಾಶ ಪಡೆಯುತ್ತಿದ್ದಾರೆ. ಲೆಫ್ಟ್ ಹ್ಯಾಂಡ್ ಬ್ಯಾಟರ್ ವಿಚಾರವಾಗಿ ಪಂತ್ ಅವಕಾಶ ಪಡೆಯಬಹುದು ಎಂಬ ಲೆಕ್ಕಾಚಾರವಿತ್ತು. ಆದರೆ ಇದೀಗ ತಂಡದ ಮ್ಯಾನೇಜ್ ಮೆಂಟ್ ಅಕ್ಷರ್ ಗೆ ಅವಕಾಶ ನೀಡಲು ಯೋಚಿಸಿದ ಕಾರಣ ಪಂತ್ ಸದ್ಯ ಅವಕಾಶ ಸಿಗುವುದು ಅನುಮಾನ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Must win ಡೆಲ್ಲಿ ಪ್ಲೇ ಆಫ್ ಆಸೆ ಜೀವಂತ: ರಾಜಸ್ಥಾನ್ ರಾಯಲ್ಸ್ ಸವಾಲು
CSK; ಬಸ್ ಕಂಡಕ್ಟರ್ಗಳಿಗೆ ಚೆನ್ನೈ ಕಿಂಗ್ಸ್ನಿಂದ 8 ಸಾವಿರ ಅಗತ್ಯ ಗಿಫ್ಟ್ !
Central government ಒಪ್ಪಿದರೆ ಪಾಕ್ಗೆ ಭಾರತ ಕ್ರಿಕೆಟ್ ತಂಡ: ರಾಜೀವ್ ಶುಕ್ಲ
T20 ಸರಣಿ; ಬಾಂಗ್ಲಾ ಎದುರು ಭಾರತ ವನಿತೆಯರಿಗೆ 56 ರನ್ ಗೆಲುವು: 4-0 ಮುನ್ನಡೆ
Pakistan ಟಿ20 ವಿಶ್ವಕಪ್ ಗೆದ್ದರೆ ಪ್ರತಿ ಆಟಗಾರರಿಗೆ 1 ಲಕ್ಷ ಡಾಲರ್ ಬಹುಮಾನ
MUST WATCH
ಹೊಸ ಸೇರ್ಪಡೆ
Arrested: ಸಲ್ಮಾನ್ ಖಾನ್ ನಿವಾಸದ ಮೇಲೆ ಗುಂಡಿನ ದಾಳಿ: ಐದನೇ ಆರೋಪಿ ಬಂಧನ
Lok Sabha Election: ಕೊಪ್ಪಳ, ರಾಯಚೂರಿನಲ್ಲಿ ಮತದಾನದಿಂದ ದೂರ ಉಳಿದ ಮತದಾರರು…
ಕುಸಿದು ಬಿದ್ದ ಚುನಾವಣಾ ಸಿಬ್ಬಂದಿ: ಮತದಾನ ಮಾಡಲು ಬಂದ ಡಾ.ನಿತಿನ್ಚಂದ್ರ ಅವರಿಂದ ಚಿಕಿತ್ಸೆ
Vijayapura: ಹಿರೂರಲ್ಲಿ ಕೈಕೊಟ್ಟ ಮತಯಂತ್ರ, ಒಂದು ಗಂಟೆ ತಡವಾಗಿ ಮತದಾನ ಆರಂಭ
Raichur: ಗುಳೆ ಹೋದ ಜನ; ಮತದಾರರಿಲ್ಲದೆ ಮತಗಟ್ಟೆ ಖಾಲಿ ಖಾಲಿ…