ಬಾಹುಬಲಿ ಬಂದ ಮೇಲೆ ಎಲ್ಲ ಬದಲಾಯ್ತು…
Team Udayavani, Nov 6, 2022, 1:46 PM IST
ಮುಂಬೈ: “ಈ ಹಿಂದೆ ದಕ್ಷಿಣ ಭಾರತದ ಸಿನಿಮಾಗಳ ಬಗ್ಗೆ ಉತ್ತರ ಭಾರತದ ಮಂದಿ ನಗುತ್ತಿದ್ದರು. ಆದರೆ ಈಗ ಕಾಲ ಬದಲಾಗಿದ್ದು, ಉತ್ತರದವರ ಅಭಿಪ್ರಾಯವೂ ಬೇರೆಯೇ ಆಗಿದೆ’ ಇದು ಕನ್ನಡದ ಹೆಸರಾಂತ ನಟ ಯಶ್ ಅವರ ಅಭಿಪ್ರಾಯ.
ಇಂಡಿಯಾ ಟುಡೇ ಕಾನ್ಕ್ಲೇವ್ನಲ್ಲಿ ಮಾತನಾಡಿದ ಅವರು, 10 ವರ್ಷಗಳ ಹಿಂದೆ ಉತ್ತರ ಭಾರತದವರು ನಮ್ಮ ಚಿತ್ರಗಳ ಆ್ಯಕ್ಷನ್ ಬಗ್ಗೆಯೂ ಆಡಿಕೊಳ್ಳುತ್ತಿದ್ದರು. ಇದಕ್ಕೆಲ್ಲಾ ಕಾರಣ, ಆಗಿನ ಡಬ್ಬಿಂಗ್. ಇಲ್ಲಿನ ಚಿತ್ರಗಳು ಕಡಿಮೆ ಹಣಕ್ಕೆ ಮಾರಾಟವಾಗುತ್ತಿದ್ದವು. ಹೀಗಾಗಿಯೇ ಕೆಟ್ಟ ಡಬ್ಬಿಂಗ್, ಕೆಟ್ಟ ಹೆಸರುಗಳಿಂದಾಗಿ ಇಲ್ಲಿನ ಚಿತ್ರಗಳು ಓಡುತ್ತಲೇ ಇರಲಿಲ್ಲ. ಆದರೆ, ಈ ಧೋರಣೆ ಬದಲಾಗಲು ಬಾಹುಬಲಿ ಕಾರಣ. ಇದರ ಸಂಪೂರ್ಣ ಶ್ರೇಯಸ್ಸು ರಾಜಮೌಳಿ ಸರ್ಗೆ ಸಲ್ಲಬೇಕು. ಇದಾದ ಬಳಿಕ ದಕ್ಷಿಣ ಭಾರತದ ಸಿನಿಮಾಗಳನ್ನು ನೋಡಲು ಶುರು ಮಾಡಿದರು ಎಂದರು.
ಇದನ್ನೂ ಓದಿ: ಕಪೂರ್ ಕುಟುಂಬದಲ್ಲಿ ಸಂಭ್ರಮ: ತಂದೆ – ತಾಯಿಯಾದ ರಣ್ಬೀರ್ – ಆಲಿಯಾ
ಸದ್ಯಕ್ಕಿಲ್ಲ ಕೆಜಿಎಫ್ 3: ನನ್ನ ಮುಂದಿನ ಚಿತ್ರದ ಬಗ್ಗೆ ಎಲ್ಲರಿಗೂ ನಿರೀಕ್ಷೆಗಳಿವೆ. ಸದ್ಯದಲ್ಲೇ ಈ ಬಗ್ಗೆ ಘೋಷಿಸಲಿದ್ದೇನೆ. ಅಲ್ಲದೆ, ಕೆಜಿಎಫ್ 1 ಮತ್ತು 2 ಮಾಡಲು 6-7 ವರ್ಷ ತೆಗೆದುಕೊಂಡೆವು. ಕೆಜಿಎಫ್ 3ರ ಬಗ್ಗೆ ಯೋಜನೆಯಿದೆ. ಆದರೆ ಸದ್ಯಕ್ಕೆ ಇಲ್ಲ ಎಂದರು.
ಕಾಂತಾರ ಬಗ್ಗೆ ಮಾತನಾಡಿದ ಅವರು, ಇದೂ ನಮ್ಮ ಸಿನಿಮಾವೇ ಎಂದರು. ಅಂದರೆ, ಇಲ್ಲಿ ಆಗುವ ಎಲ್ಲ ಸಿನಿಮಾಗಳು ನಮ್ಮವೇ ಎಂದು ಪರಿಗಣಿಸಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್ ಖಾನ್
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
MUST WATCH
ಹೊಸ ಸೇರ್ಪಡೆ
Kantara-Chapter 1: 600 ಮಂದಿ ಬಡಗಿಗಳು, ಕಳರಿಪಯಟ್ಟು ಕಲಾವಿದರು; ಬೃಹತ್ ಸೆಟ್ ನಿರ್ಮಾಣ
Bengaluru: ವಿವಾಹಕ್ಕೆ ಒಪ್ಪದ ಮಹಿಳೆ ಮನೆಗೆ ಬೆಂಕಿ ಹಚ್ಚಿದ
Lok Sabha Polls: ಕಾಗೆ ಮಾತು ಕಾಂಗ್ರೆಸ್ನ ಮನಸ್ಥಿತಿ: ಬಿ.ವೈ.ರಾಘವೇಂದ್ರ
Helicopter Crash: ಹೆಲಿಕಾಪ್ಟರ್ ಪತನ… ಕೂದಲೆಳೆಯ ಅಂತರದಲ್ಲಿ ಪಾರಾದ ಶಿವಸೇನಾ ಉಪನಾಯಕಿ
Kangaroo; ಥ್ರಿಲ್ಲರ್ ಹಾದಿಯಲ್ಲಿ ಆದಿತ್ಯ ಹೆಜ್ಜೆ ಗುರುತು