ಕುಳಾಲು: ಮಳೆಗೆ ಕುಸಿದ ಶಾಲೆಯ ಛಾವಣಿ
Team Udayavani, Nov 7, 2022, 2:34 PM IST
ವಿಟ್ಲ: ಕೊಳ್ನಾಡು ಗ್ರಾಮದ ಕುಳಾಲು ದ.ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಹಂಚಿನ ಮಾಡು ಶುಕ್ರವಾರ ಸುರಿದ ಮಳೆಯ ಪರಿಣಾಮ ಕುಸಿದು ಬಿದ್ದು ಭಾರೀ ಹಾನಿ ಸಂಭವಿಸಿದೆ.
ಕಟ್ಟಡ ಜೀರ್ಣವಾಗಿರುವ ಕಾರಣ ಅಪಾಯ ಸಂಭವಿಸಬಹುದು ಎಂಬ ದೂರ ಗ್ರಹಿಕೆಯಿಂದ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಮತ್ತು ಕೊಳ್ನಾಡು ಗ್ರಾ.ಪಂ. ಉಪಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಅವರು ಚರ್ಚಿಸಿ, ಕೇವಲ 5 ದಿನಗಳ ಹಿಂದೆ ವಿದ್ಯಾರ್ಥಿಗಳನ್ನು ಮತ್ತೂಂದು ಕಟ್ಟಡಕ್ಕೆ ಸ್ಥಳಾಂತರಿಸಿದ್ದರು.
ಶಿಕ್ಷಣ ಇಲಾಖೆಯ ನಿರ್ಲಕ್ಷ್ಯ ಆರೋಪ
ಈ ಶಾಲೆಗೆ 92 ವರ್ಷಗಳಾಗಿದ್ದು 6 ಕೊಠಡಿಗಳಿವೆ. 1ರಿಂದ 8ನೇ ತರಗತಿವರೆಗೆ ಒಟ್ಟು 93 ಮಕ್ಕಳಿದ್ದಾರೆ. 6 ಶಿಕ್ಷಕರ ಅಗತ್ಯ ವಿದ್ದು 4 ಮಂದಿ ಇದ್ದು ಇನ್ನೆರಡು ಹುದ್ದೆಗಳು ಖಾಲಿಯಾಗಿವೆ.
ಅತಿಥಿ ಶಿಕ್ಷಕರನ್ನು ಶ್ರೀ ವಾರಾಹೀ ಯುವಕ ಮಂಡಲ ಮತ್ತು ಮಕ್ಕಳ ಹೆತ್ತವರು ನೇಮಿಸಿದ್ದಾರೆ. ದುಬಾೖಯ ಉದ್ಯಮಿ ರಾಜಶೇಖರ ಚೌಟ ಮತ್ತು ಇತರರು ಸೇರಿ ಖರೀದಿಸಿದ ಬಸ್ನಲ್ಲಿ ವಿದ್ಯಾರ್ಥಿಗಳು ಓಡಾಡುತ್ತಿದ್ದಾರೆ. ಹೆತ್ತವರು, ದಾನಿಗಳು ಕೈಜೋಡಿಸಿದ್ದರೂ ಈ ಶಾಲೆಗೆ ಇಲಾಖೆಯ ಸ್ಪಂದನವಿಲ್ಲ ಎಂದು ಇಲ್ಲಿನ ಹೆತ್ತವರು ದೂರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ