4.25 ಕೋಟಿ ರೂ. ವಿದ್ಯುತ್‌ ಬಿಲ್‌ ಬಾಕಿ

ಹಿರೇಮಳಗಾವಿ ಗ್ರಾಪಂನಿಂದ 71.18 ಲಕ್ಷ ರೂ., ಐಹೊಳೆ ಗ್ರಾಪಂನಿಂದ 23.01 ಲಕ್ಷ ರೂ. ವಿದ್ಯುತ್‌ ಬಾಕಿ

Team Udayavani, Nov 8, 2022, 6:02 PM IST

17

ಬಾಗಲಕೋಟೆ: ಜಿಲ್ಲೆಯಲ್ಲಿ ಹೆಸ್ಕಾಂಗೆ ಕೋಟಿ ಕೋಟಿ ಬಾಕಿ ಉಳಿಸಿಕೊಂಡ ತಾಲೂಕುಗಳಲ್ಲಿ ಜಿಲ್ಲೆಯ ಹುನಗುಂದ(ಇಳಕಲ್ಲ ಸಹಿತ)ತಾಲೂಕು ಕೊಂಚ ಕಡಿಮೆ ಬಾಕಿ ಉಳಿಸಿಕೊಂಡಿದೆ.

ಹೌದು. ಅವಿಭಜಿತ ಹುನಗುಂದ ತಾಲೂಕಿನಲ್ಲಿ ಒಟ್ಟು 34 ಗ್ರಾಮ ಪಂಚಾಯಿತಿಗಳಿವೆ. ತಾಲೂಕು ಪುನರ್‌ ವಿಂಗಡಣೆ ಹಾಗೂ ಗ್ರಾಪಂ ಪುನರ್‌ ವಿಂಗಡಣೆ ಬಳಿಕ ಹುನಗುಂದ ತಾಲೂಕು ವ್ಯಾಪ್ತಿಗೆ 19, ಇಳಕಲ್ಲ ತಾಲೂಕು ವ್ಯಾಪ್ತಿಗೆ 16 ಗ್ರಾಪಂ ಸೇರಿಸಲಾಗಿದೆ. ಕಂದಾಯ ಇಲಾಖೆಯ ಕಾರ್ಯ ಚಟುವಟಿಕೆಗಳಲ್ಲಿ ಜಿಲ್ಲೆಯ ತಾಲೂಕು ಪುನರ್‌ ವಿಂಗಡಣೆ ಅನುಷ್ಠಾನಗೊಂಡಿದ್ದು, ಕೆಲ ಇಲಾಖೆಗಳು, ಇಂದಿಗೂ ಹಳೆಯ ತಾಲೂಕುಗಳ ಹೆಸರನ್ನೇ ಉಲ್ಲೇಖೀಸುತ್ತವೆ.

ಹೆಸ್ಕಾಂಗೆ ಗ್ರಾಪಂಗಳಿಂದ ಬರಬೇಕಿರುವ ಬಾಕಿ ಲೆಕ್ಕದಲ್ಲಿ ಇಳಕಲ್ಲ-ಹುನಗುಂದ ಎರಡೂ ತಾಲೂಕು ಸೇರಿದ್ದು, ಒಟ್ಟು 10 ಗ್ರಾಪಂಗಳು, ತಲಾ 10ಲಕ್ಷಕ್ಕೂ ಅಧಿಕ ಮೊತ್ತದ ಬಾಕಿ ಉಳಿಸಿಕೊಂಡಿವೆ. ಅದರಲ್ಲಿ ಹಿರೇಮಳಗಾವಿ ಗ್ರಾಪಂ ವ್ಯಾಪ್ತಿಯಲ್ಲಿ ಒಟ್ಟು 27 ವಿದ್ಯುತ್‌ ಸ್ಥಾವರಗಳಿದ್ದು, ಅವುಗಳಿಂದ ಒಟ್ಟು 71.18 ಲಕ್ಷ ರೂ. ವಿದ್ಯುತ್‌ ಬಾಕಿ ಬರಬೇಕಿದೆ. ಇದು ಬಾಕಿ ಉಳಿಸಿಕೊಂಡ ತಾಲೂಕಿನಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಐಹೊಳೆ ಗ್ರಾಪಂನಲ್ಲಿ 21ವಿದ್ಯುತ್‌ ಸ್ಥಾವರಗಳಿದ್ದು, ಅವುಗಳಿಂದ 23.01ಲಕ್ಷ ರೂ. ಬಾಕಿ ಬರಬೇಕಿದೆ. 10 ಲಕ್ಷಕ್ಕೂ ಅಧಿಕ ಬಾಕಿ ಉಳಿಸಿಕೊಂಡ ತಾಲೂಕುಗಳಲ್ಲಿ ಇದು ಕೊನೆ ಸ್ಥಾನದಲ್ಲಿದೆ.

ಈ ಎರಡೂ ತಾಲೂಕಿನಲ್ಲಿ ತಲಾ 10ಲಕ್ಷಕ್ಕೂ ಅಧಿಕ ಬಾಕಿ ಉಳಿಸಿಕೊಂಡ ಗ್ರಾಪಂಗಳಲ್ಲಿ 275 ವಿದ್ಯುತ್‌ ಸ್ಥಾವರಗಳಿದ್ದು, ಅವುಗಳಿಂದ ಒಟ್ಟು 4.25 ಕೋಟಿ ಬಾಕಿ ಬರಬೇಕಿದೆ.

ನೀರು ಪೂರೈಕೆಯಿಂದಲೇ ಬಾಕಿ ಹೆಚ್ಚು: ಜಿಲ್ಲೆಯಲ್ಲಿ ವಿದ್ಯುತ್‌ ಬಾಕಿ ಉಳಿಸಿಕೊಂಡಿರುವ ಗ್ರಾಪಂಗಳು, ವಿದ್ಯುತ್‌ ಬೀದಿದೀಪ, ಕುಡಿಯುವ ನೀರು ಪೂರೈಕೆ ಯೋಜನೆಗೆ ಸಂಬಂಧಿಸಿದ ಬಾಕಿ ಇದೆ. ಇನ್ನು ಗೃಹ ಬಳಕೆ, ವಾಣಿಜ್ಯ ಬಳಕೆ ಬಾಕಿ ಪ್ರತ್ಯೇಕವಾಗಿದೆ. ಇಳಕಲ್ಲ-ಹುನಗುಂದ ತಾಲೂಕು ವ್ಯಾಪ್ತಿಯ ಅಷ್ಟೂ ಗ್ರಾಪಂ ವ್ಯಾಪ್ತಿಯಲ್ಲಿ ಒಟ್ಟು ಕುಡಿಯುವ ನೀರು ಪೂರೈಕೆ ಯೋಜನೆಗಳಿಗೆ 619 ಸ್ಥಾವರಗಳಿದ್ದು, ಅವುಗಳಿಂದ ಒಟ್ಟು 366.46 ಲಕ್ಷ ರೂ. ಬಾಕಿ ಇದೆ. ಅಲ್ಲದೇ ಇಲ್ಲಿಯವರೆಗೆ ಒಟ್ಟು 42.97 ಲಕ್ಷ ಬಡ್ಡಿ ಪಾವತಿಸಬೇಕಿದೆ. ಒಟ್ಟು ಕುಡಿಯುವ ನೀರು ಪೂರೈಕೆ ಯೋಜನೆಗಳಿಂದ ಒಟ್ಟು 43.89 ಲಕ್ಷ ಬಡ್ಡಿ, 422.25 ಲಕ್ಷ ವಿದ್ಯುತ್‌ ಬಾಕಿ ಪಾವತಿ ಬಾಕಿ ಇದೆ.

ಇನ್ನು ಬೀದಿದೀಪಗಳಿಗಾಗಿ 254 ವಿದ್ಯುತ್‌ ಸ್ಥಾವರಗಳಿದ್ದು, ಇವುಗಳಿಂದ 61.12 ಲಕ್ಷ ಬಾಕಿ ಇದ್ದು, 9.83 ಲಕ್ಷ ರೂ.ಬಡ್ಡಿ ಇದೆ. ಒಟ್ಟಾರೆ ಸೆಪ್ಟೆಂಬರ್‌ ಅಂತ್ಯದವರೆಗೆ 10.58 ಲಕ್ಷ ಹಾಗೂ 76.40 ಲಕ್ಷ ರೂ. ವಿದ್ಯುತ್‌ ಬಾಕಿ ಇದೆ.

ಶ್ರೀಶೈಲ ಕೆ. ಬಿರಾದಾರ

ಟಾಪ್ ನ್ಯೂಸ್

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

BCCI

T20 World Cup: ಇಂದು ಭಾರತ ತಂಡ ಪ್ರಕಟ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

1-wqqwqwqeqwe

Kodava Hockey: ಚೇಂದಂಡಕ್ಕೆ 3ನೇ ಪ್ರಶಸ್ತಿ

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

1-wwwewqe

IPL; ವಿಲ್‌ ಜಾಕ್ಸ್‌ ಭಾರೀ ಸಂಚಲನ: ಆರೇ ನಿಮಿಷದಲ್ಲಿ ಅರ್ಧ ಶತಕ!

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.