ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿ ಬಿದ್ದ ಟಂ ಟಂ ವಾಹನ: ಬಾಲಕ ದುರ್ಮರಣ
Team Udayavani, Nov 14, 2022, 4:14 PM IST
ಯಡ್ರಾಮಿ: ಪಟ್ಟಣದ ಹೊರವಲಯದಲ್ಲಿರುವ ಚಿಗರಳ್ಳಿಗೆ ಹೋಗುವ ಮುಖ್ಯ ರಸ್ತೆಗೆ ಅಡ್ಡಲಾಗಿ ಹಾದು ಹೋಗಿರುವ ಕ್ಯಾನಲ್ ಗೆ ಕೂಲಿ ಕಾರ್ಮಿಕರ ಹೊತ್ತೊಯ್ಯುತ್ತಿದ್ದ ಟಂ ಟಂ ವಾಹನ ಕಾಲುವೆಗೆ ಬಿದ್ದು ಪಟ್ಟಣದ ಬಾಲಕ ದುರ್ಮರಣಕ್ಕೀಡಾದ ಘಟನೆ ನಡೆದಿದೆ.
ಯಡ್ರಾಮಿ ನಿವಾಸಿ, ಬಿಸಿಲು ನಾಡಿನ ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಶಫೀವುಲ್ಲಾ ದಖನಿ ಅವರ ಕಿರಿಯ ಪುತ್ರ ಆದೀಲಷಾಹಿ (14) ದುರ್ಮರಣಕ್ಕೀಡಾದ ಬಾಲಕ.
ರವಿವಾರ ಶಾಲೆಗೆ ರಜೆ ಇದ್ದ ಕಾರಣ ಓಣಿಯಲ್ಲಿನ ಮಹಿಳೆಯರ ಜತೆಗೆ ಹತ್ತಿ ಬಿಡಿಸಲು ಹೋಗಿದ್ದಾನೆ. ಹತ್ತಿ ಬಿಡಿಸಿಕೊಂಡು 8 ಜನ ಕೂಲಿ ಮಹಿಳೆಯರ ಜತೆಗೆ ಬಾಲಕ ಆದಿಲ್ ಷಾಹಿ ಟಂ ಟಂ ವಾಹನದಲ್ಲಿ ಕುಳಿತಿದ್ದಾನೆ. ನಾಲ್ಕೈದು ಹತ್ತಿ ತುಂಬಿದ ಚೀಲಗಳುನ್ನು ಹೊತ್ತು ಮನೆಗೆ ತರುತ್ತಿರುವ ಟಂ ಟಂ ರವಿವಾರ ಸಾಯಂಕಾಲ ಪಲ್ಟಿಯಾಗಿ ಪಕ್ಕದಲ್ಲಿರುವ ಕಾಲುವೆಗೆ ಬಿದ್ದಿದೆ. ಅದೇ ದಾರಿಯಲ್ಲಿ ಹೋಗುತ್ತಿರುವ ಕಬ್ಬಿನ ಟ್ರ್ಯಾಕ್ಟರ್ ಚಾಲಕರ ಸಮಯಪ್ರಜ್ಞೆಯಿಂದ ತಮ್ಮಲ್ಲಿರುವ, ಕಬ್ಬಿಗೆ ಬಿಗಿಯುವ ಹಗ್ಗಗಳನ್ನು ತಕ್ಷಣ ಕಾಲುವೆಗೆ ಎಸೆದು 8ಜನ ಕೂಲಿ ಮಹಿಳೆಯರನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
ಇದನ್ನೂ ಓದಿ: ಗೋವಾ ರಾಜ್ಯದ ಅಭಿವೃದ್ಧಿಯಲ್ಲಿ ಕನ್ನಡಿಗರ ಕೊಡುಗೆ ಹೆಚ್ಚಿದೆ : ಶಾಸಕ ದಾಜಿ ಸಾಲ್ಕರ್
ಆದರೆ ದುರ್ದೈವಿ ಆದಿಲ್ ಷಾಹಿ ನೀರಲ್ಲಿ ಬಿದ್ದ ನಂತರ ಮುಳುಗಿದವ ಮೇಲೆ ಏಳಲೇ ಇಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ರವಿವಾರ ಸಂಜೆಯಿಂದಲೇ ಬಾಲಕನ ಪತ್ತೆಗಾಗಿ ಕಾಲುವೆಗೆ ಇಳಿದ ಯುವಕರ ತಂಡ ರಾತ್ರಿಯಿಡೀ ಹುಡುಕಿದರೂ ಬಾಲಕ ಪತ್ತೆಯಾಗಿರಲಿಲ್ಲ.
ಸೋಮವಾರ ಬೆಳಿಗ್ಗೆ 11ರ ಸುಮಾರಿಗೆ ಮೃತ ಬಾಲಕನ ದೇಹ ಪತ್ತೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ ವ್ಯಂಗ್ಯ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ
MUST WATCH
ಹೊಸ ಸೇರ್ಪಡೆ
UV Fusion: ಜೀವನವನ್ನು ಪ್ರೀತಿಸೋಣ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್