ಸಾಗರ: ಚಾಕು ಇರಿತಕ್ಕೊಳಗಾದ ಯುವಕ ಚಿಕಿತ್ಸೆ ಫಲಿಸದೆ ಸಾವು
Team Udayavani, Nov 19, 2022, 10:54 PM IST
ಸಾಗರ: ನಗರದ ಬಿಹೆಚ್ ರಸ್ತೆಯ ಬಳಿ ಕಳೆದ ಅ. 23 ರಂದು ನಡೆದಿದ್ದ ಚಾಕು ಇರಿತದಲ್ಲಿ ಗಾಯಗೊಂಡಿದ್ದ ಯುವಕ ಶನಿವಾರ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಜನ್ನತ್ ನಗರದ ವಾಸಿ 28 ವರ್ಷದ ಇರ್ಫಾನ್ ಎಂಬುವವನು ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ 20 ವರ್ಷದ ಶಕೀಲ್ನ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದನು. ಗಾಯಗೊಂಡ ಶಕೀಲ್ನನ್ನು ಸಾಗರ ಉಪವಿಭಾಗಿಯ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಬಳಿಕ ಮಂಗಳೂರಿಗೆ ಕರೆತರಲಾಗಿತ್ತು.
ಚಿಕಿತ್ಸೆ ಫಲಿಸದೆ ಶಕೀಲ್ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು. ಪೊಲೀಸರು ಆರೋಪಿ ಇರ್ಫಾನ್ ನನ್ನು ಘಟನೆ ನಡೆದ ದಿನವೇ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.