ಇಫಿ ಚಿತ್ರೋತ್ಸವ: ದಿನೇಶ್ ಶೆಣೈಯವರ ‘ಮಧ್ಯಂತರ’ ನ. 27 ರಂದು ಪ್ರದರ್ಶನ


Team Udayavani, Nov 20, 2022, 2:38 PM IST

ಇಫಿ ಚಿತ್ರೋತ್ಸವ: ದಿನೇಶ್ ಶೆಣೈಯವರ ಮಧ್ಯಂತರ ನ. 27 ರಂದು ಪ್ರದರ್ಶನ

ಪಣಜಿ: ಮಧ್ಯಂತರ! ಒಂದು ಸಿನಿಮಾದ ಪೂರ್ವಾರ್ಧ ಮುಗಿದು ಉತ್ತರಾರ್ಧ ಆರಂಭವಾಗುವ ಮಧ್ಯೆ ಸಿಗುವ ಅಥವಾ ಥಿಯೇಟರ್ ನವರು ಬಿಡುವ ವಿರಾಮದ ಸಮಯ.

ಮಂಗಳೂರಿನ ದಿನೇಶ್ ಶೆಣೈಯವರು ಇದೇ ಹೆಸರಿನ ಒಂದು ಕಥೇತರ ಸಿನಿಮಾ (ನಾನ್ ಫೀಚರ್) ವನ್ನು ರೂಪಿಸಿದ್ದಾರೆ.

ವಿಶೇಷವೆಂದರೆ ಈ ಬಾರಿಯ ಗೋವಾ ಇಫಿ ಚಿತ್ರೋತ್ಸವದ ಭಾರತೀಯ ಸಿನಿಮಾ (ಇಂಡಿಯನ್ ಪನೋರಮಾ ) ವಿಭಾಗದ ಕಥೇತರ ವಿಭಾಗದಲ್ಲಿ ಅಯ್ಕೆಯಾಗಿ ನವೆಂಬರ್ 27 ರಂದು ಪ್ರದರ್ಶನವಾಗುತ್ತಿದೆ.

ಸಿನಿಮಾ ಮಾಧ್ಯಮದ ಮೇಲಿನ ಮೋಹದ ಕುರಿತು ಸಾಕಷ್ಟು ಚಿತ್ರಗಳು ದೇಶ ವಿದೇಶಗಳಲ್ಲಿ ಬಂದಿವೆ. ಸಿನಿಮಾ ಪ್ಯಾರಡಿಸೋದಿಂದ ಹಿಡಿದು ಇತ್ತೀಚಿನ ಗುಜರಾತಿ ಭಾಷೆಯ ಚಲ್ಲೋ ಶೋ ದವರಗೂ ಹಲವು ಸಿನಿಮಾಗಳು ಬಿತ್ತರಿಸಿರುವುದು ಸಿನಿಮಾ ಮಾಧ್ಯಮದ ಪ್ರಭಾವ ಮತ್ತು ಮೇಲಿನ ಪ್ರೀತಿಯನ್ನೇ. ಈ ಅನನ್ಯತೆಯೂ ಸಹ ಚಲನಚಿತ್ರ ಮಾಧ್ಯಮದಲ್ಲಿನ ಚಲನಶೀಲತೆ (ಪ್ರಯೋಗಶೀಲತೆ) ಯನ್ನು ಉಳಿಸಿವೆ ಎನ್ನಬಹುದು.

ಇಂಥದ್ದೇ ಒಂದು ಸಣ್ಣ ಎಳೆಯನ್ನು ಆಧರಿಸಿ ಹೊಸ ಜಗತ್ತನ್ನು ಅದರಲ್ಲೂ ಐದು ದಶಕಗಳ ಹಿಂದಿನ ಜಗತ್ತು ಹಾಗೂ ಸಂವೇದನೆಯನ್ನು ಹಿಡಿದಿಡಲು ಪ್ರಯತ್ನಿಸಿರುವ ಸಿನಿಮಾ ಮಧ್ಯಂತರ. ಇಬ್ಬರು ಹುಡುಗರು ಸಿನಿಮಾ ಮಾಧ್ಯಮದ ಬಗೆಗಿನ ಮೋಹಕ್ಕೆ ಬಿದ್ದು ಒಬ್ಬ ಸಾಮಾನ್ಯ ಪ್ರೇಕ್ಷಕರ ಸ್ಥಾನದಿಂದ ಸಿನಿಮಾಕರ್ತರಾಗುವ ಮಟ್ಟಿಗೆ ಬೆಳೆಯಲು ಯತ್ನಿಸುವುದೇ ಬಹಳ ದೊಡ್ಡದು. ಈ ಮಹಾತ್ವಕಾಂಕ್ಷೆ ಹಾಗೂ ಸಕಾರಾತ್ಮಕವಾದ ಛಲವನ್ನು ಕಡೆದುಕೊಡಲು ಪ್ರಯತ್ನಿಸಿದ್ದಾರೆ ದಿನೇಶ್ ತಮ್ಮ ಕಲಾಕೃತಿಯಲ್ಲಿ.

ಈ ಬಾರಿ ಭಾರತೀಯ ಪನೋರಮಾ ವಿಭಾಗದಡಿ ಮೂರು ಚಿತ್ರಗಳು ಅಯ್ಕೆಯಾಗಿವೆ. ಪೃಥ್ವಿ ಕೊಣನೂರು ಅವರ ಹದಿನೇಳೆಂಟು ಚಿತ್ರ ವಿಭಾಗದ ಉದ್ಘಾಟನಾ ಚಿತ್ರ. ಉಳಿದಂತೆ ನಾನು ಕುಸುಮ ಹಾಗೂ ಮಧ್ಯಂತರ ಪ್ರದರ್ಶನಗೊಳ್ಳುತ್ತಿರುವ ಇತರೆ ಕನ್ನಡ ಚಿತ್ರಗಳು.

ದಿನೇಶ್ ಶೆಣೈಯವರು ತಮ್ಮ ಸಿನಿಮಾದ ಬಗ್ಗೆ ಕರಪತ್ರದಲ್ಲಿ ವಿವರಿಸಿರುವಂತೆ, “ಇದು ಸಂಪೂರ್ಣ 16 ಎಂ.ಎಂ. ಕೆಮರಾದಲ್ಲಿ ರೂಪಿಸಿರುವ ಚಿತ್ರ. ಆದರ ಸಂಸ್ಕರಣೆಯಿಂದ ಹಿಡಿದು ಎಲ್ಲವನ್ನೂ ಹಳೆಯ ಮಾದರಿಯನ್ನೇ ಆನುಸರಿಸಬೇಕಾಯಿತು. ಇದೊಂದು ವಿಶಿಷ್ಟ ಹಂಬಲದ ಪಯಣ. ಒಟ್ಟು ಐದು ದಶಕಗಳ ಹಿಂದಿನ ಒಂದು ನಡಿಗೆ’.

ಬಹಳ ಮುಖ್ಯವಾಗಿ 70-80 ರ ದಶಕಗಳು ಹಲವು ಕಾರಣಗಳಿಗೆ ಪ್ರಮುಖವಾದವು. ಭಾರತೀಯ ಸಂದರ್ಭದಲ್ಲಿ ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕವಾಗಿ ಜನರ ಸಂವೇದನೆಯನ್ನು ರೂಪಿಸಿದ ದಶಕಗಳು. ಇಂದಿನ ಅಧುನಿಕ ಸಂದರ್ಭ ಆಥವಾ ತಾಂತ್ರಿಕ ಅವಿಷ್ಕಾರಗಳ ಜಗತ್ತಿನಲ್ಲಿ ಎಲ್ಲವೂ ಕ್ಷಣಾರ್ಧದಲ್ಲಿ ಸಾಧ್ಯವಾಗಿಸುವ ಹಾಗೂ ದಕ್ಕಿಸಿಕೊಳ್ಳುವ ಹೊತ್ತಿನಲ್ಲಿ ಹಳೆಯ ಕಾಲದ ಪಯಣದ ಆನುಭವ ಮತ್ತು ಸುಖ ವಿಭಿನ್ನವಾಗಿ ತೋರಬಹುದು. ಬಹುಶಃ ಅ ಜಾಡನ್ನು ಹಿಡಿಯುವ ಪ್ರಯತ್ನ ಈ ಮಧ್ಯಂತರದಲ್ಲಿದೆ ಎಂಬುದು ದಿನೇಶ್ ಶೆಣೈಯವರು ತಮ್ಮ ಸಿನಿಮಾದ ಬಗ್ಗೆ ನೀಡಲಾದ ಮಾಹಿತಿ ಪುಸ್ತಿಕೆ ವಿವರಿಸುತ್ತದೆ.

ದಿನೇಶ್ ಶೆಣೈಯವರಿಗೆ ಸಿನೆಛಾಯಾಗ್ರಹಣದಲ್ಲಿ ಸುನಿಲ್ ಬೋರ್ಕರ್ ಮತ್ತು ಸಂಕಲನದಲ್ಲಿ ಸುರೇಶ್ ಅರಸ್, ಕಲಾ ನಿರ್ದೇಶನದಲ್ಲಿ ವಿನೋದ್ ರಾಜ್ ಪುತ್ತೂರು ಸಹಕರಿಸಿದ್ದಾರೆ. ನಟ ವರ್ಗದಲ್ಲಿ ಅಜಯ್ ನೀನಾಸಂ, ರಮೇಶ್ ಪಂಡಿತ್, ಗಣೇಶ್ ಶೆಣೈ, ರಾಜಕುಮಾರ್ ಶ್ರೀನಿವಾಸನ್, ಶಿವು ನೀನಾಸಂ ಹಾಗೂ ಚಂದ್ರ ಮೋಹನ್ ಮತ್ತಿತರರಿದ್ದಾರೆ.

ಟಾಪ್ ನ್ಯೂಸ್

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

chef chidambara kannada movie

Chef Chidambara: ಅನಿರುದ್ಧ್ ಅಡುಗೆ ಶುರು

tdy-7

Bollywood: ರಿಮೇಕ್‌ ಆಗಿ ಮತ್ತೆ ತೆರೆಗೆ ಬರಲಿದೆ 70ರ ದಶಕದ ಮೂರು ಹಿಟ್‌ ಸಿನಿಮಾಗಳು

ನಮ್ಮೊಳಗೆ ಬೆಳೆಯುವಂಥ ಪಾತ್ರಗಳು ನನಗಿಷ್ಟ : ಗ್ರೀಷ್ಮಾ ಶ್ರೀಧರ್‌

ನಮ್ಮೊಳಗೆ ಬೆಳೆಯುವಂಥ ಪಾತ್ರಗಳು ನನಗಿಷ್ಟ : ಗ್ರೀಷ್ಮಾ ಶ್ರೀಧರ್‌

ಕಾಶ್ಮೀರ್ ಫೈಲ್ಸ್ ಅಸಭ್ಯ ಚಿತ್ರ ಎಂದು ನಡಾವ್ ಗೆ ನಾಚಿಕೆಯಾಗಬೇಕು…ಇಸ್ರೇಲ್ ರಾಯಭಾರಿ ಆಕ್ರೋಶ

ಕಾಶ್ಮೀರ್ ಫೈಲ್ಸ್ ಅಸಭ್ಯ ಚಿತ್ರ ಎಂದು ನಡಾವ್ ಗೆ ನಾಚಿಕೆಯಾಗಬೇಕು…ಇಸ್ರೇಲ್ ರಾಯಭಾರಿ ಆಕ್ರೋಶ

“ದಿ ಕಾಶ್ಮೀರ್ ಫೈಲ್ಸ್” ಇದೊಂದು ಅಸಭ್ಯ ಚಿತ್ರ: ಚಲನಚಿತ್ರೋತ್ಸವದ ತೀರ್ಪುಗಾರ ನಡಾವ್ ಲ್ಯಾಪಿಡ್ ಟೀಕೆ

“ದಿ ಕಾಶ್ಮೀರ್ ಫೈಲ್ಸ್” ಇದೊಂದು ಅಸಭ್ಯ ಚಿತ್ರ: IFFI ಚಿತ್ರೋತ್ಸವದಲ್ಲಿ ತೀರ್ಪುಗಾರ ನಡಾವ್ ಲ್ಯಾಪಿಡ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.