ಪಾಕಿಸ್ತಾನ-ಮಯನ್ಮಾರ್‌ ಮೈತ್ರಿ ಬಂಧಕ್ಕೆ ಚೀನಾ ಮಧ್ಯಸ್ಥಿಕೆ


Team Udayavani, Nov 22, 2022, 6:40 AM IST

ಪಾಕಿಸ್ತಾನ-ಮಯನ್ಮಾರ್‌ ಮೈತ್ರಿ ಬಂಧಕ್ಕೆ ಚೀನಾ ಮಧ್ಯಸ್ಥಿಕೆ

ನವದೆಹಲಿ: ಭಾರತದ ವಿರುದ್ಧ ಯಾವತ್ತೂ ಕುತ್ಸಿತ ಚಿಂತನೆಯನ್ನೇ ಪ್ರದರ್ಶನ ಮಾಡುವ ಪಾಕಿಸ್ತಾನಕ್ಕೆ ಚೀನಾ ನೆರವು ನೀಡುತ್ತಾ ಬರುತ್ತಿದೆ ಎನ್ನುವುದು ಹಳೆಯ ಸತ್ಯ. ಇದೀಗ ಮಯನ್ಮಾರ್‌ನಲ್ಲಿ ಇರುವ ಸೇನಾಡಳಿತ ಮತ್ತು ಪಾಕಿಸ್ತಾನ ಸೇನೆಯ ನಡುವೆ ಮೈತ್ರಿಬಂಧಕ್ಕೆ ಮಧ್ಯಸ್ಥಿಕೆ ವಹಿಸಿದೆ ಎಂಬ ಆತಂಕಕಾರಿ ಅಂಶ ಬಯಲಾಗಿದೆ. ಜತೆಗೆ ಶಸ್ತ್ರಾಸ್ತ್ರ ಪೂರೈಕೆ, ತರಬೇತಿಯ ಬಗ್ಗೆಯೂ 2 ದೇಶಗಳ ನಡುವೆ “ಬಾಂಧವ್ಯ’ ಏರ್ಪಟ್ಟಿದೆ.

ಭಾರತಕ್ಕಂತೂ ಮುಂದಿನ ದಿನಗಳಲ್ಲಿ ಹೊಸ ಮೈತ್ರಿಕೂಟ ತಲೆನೋವಾಗಿ ಪರಿಣಮಿಸಲಿದೆ ಎಂದು ಹೇಳಲಾಗುತ್ತಿದೆ. ಚೀನಾದ ಚಿತಾವಣೆ ಪ್ರಕಾರ ಕಳೆದ ತಿಂಗಳು ಪಾಕ್‌ ಸೇನೆಯ ಉನ್ನತ ಮಟ್ಟದ ಸೇನಾ ನಿಯೋಗವು ಮ್ಯಾನ್ಮಾರ್‌ಗೆ ಭೇಟಿ ನೀಡಿದೆ. ಯಾಂಗೋನ್‌ ಸಮೀಪದ ರಕ್ಷಣಾ ಕೈಗಾರಿಕಾ ಸಂಕೀರ್ಣದ ಪರಿಶೀಲನೆ ನಡೆಸಿತ್ತು. ಜತೆಗೆ, ಇಸ್ಲಾಮಾಬಾದ್‌ನಿಂದ ಮ್ಯಾನ್ಮಾರ್‌ ಖರೀದಿಸಿರುವ ಜೆಎಫ್-17 ಬ್ಲಾಕ್‌ 2 ವಿಮಾನದ ಕುರಿತಾದ ಕಾರ್ಯಾಗಾರದಲ್ಲೂ ಪಾಲ್ಗೊಂಡಿತ್ತು. ಪಾಕ್‌ನ ಇನ್ನೊಂದು ತಂಡ ಕೂಡ ಮ್ಯಾನ್ಮಾರ್‌ಗೆ ತೆರಳಿ, ಶಸ್ತ್ರಾಸ್ತ್ರಗಳ ತಯಾರಿಕೆಗೆ ಸಂಬಂಧಿಸಿದ ತಾಂತ್ರಿಕ ಸಹಕಾರ ಒದಗಿಸುವ ಕೆಲಸ ಮಾಡಿತ್ತು.

ಗಮನಾರ್ಹ ವಿಚಾರವೆಂದರೆ, ಪೂರ್ವದಲ್ಲಿನ ಭಾರತದ ನೆರೆರಾಷ್ಟ್ರವಾಗಿರುವ ಮ್ಯಾನ್ಮಾರ್‌ನೊಂದಿಗೆ ಪಾಕಿಸ್ತಾನವು ಸೇನಾ ಕೈಗಾರಿಕಾ ಪಾಲುದಾರಿಕೆ ಹೊಂದುತ್ತಿರುವುದಕ್ಕೆ ಮೂಲ ಪ್ರೇರಣೆಯೇ ಚೀನಾ. ಒಂದೆಡೆ ಪಾಕಿಸ್ತಾನವು ಯುದ್ಧ ಸಾಮಾಗ್ರಿಗಳ ಅಭಿವೃದ್ಧಿಯಲ್ಲಿ ಚೀನಾದೊಂದಿಗೆ ಆಳವಾದ ಬಾಂಧವ್ಯ ಹೊಂದಲು ಪ್ರಯತ್ನಿಸುತ್ತಿದೆ. ಮತ್ತೂಂದೆಡೆ, ತನ್ನ ದೇಶೀಯ ಶಸ್ತ್ರಾಸ್ತ್ರ ಉದ್ದಿಮೆಯನ್ನು ಬೆಳೆಸಬೇಕು ಎನ್ನುವುದು ಮ್ಯಾನ್ಮಾರ್‌ನ ಉದ್ದೇಶವಾಗಿದೆ. ಈ ಎರಡೂ ಅಂಶಗಳನ್ನು ಅರಿತಿರುವ ಚೀನಾವು, ಎರಡೂ ದೇಶಗಳನ್ನು ಬಳಸಿಕೊಂಡು ತನ್ನ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳುತ್ತಿದೆ. ಚೀನಾದ ಬೆಂಬಲದೊಂದಿಗೆ ಪಾಕಿಸ್ತಾನವು ಮ್ಯಾನ್ಮಾರ್‌ಗೆ ಹೆವಿ ಮಷೀನ್‌ ಗನ್‌ಗಳು, 60 ಎಂಎಂ ಮತ್ತು 81 ಎಂಎಂ ಮೋರ್ಟಾರ್‌ಗಳು, ಎಂ-79 ಗ್ರೆನೇಡ್‌ ಲಾಂಚರ್‌ಗಳನ್ನು ಮಾರಾಟ ಮಾಡಿದೆ.

ರೋಹಿಂಗ್ಯಾ ಹಾಗೂ ಉಗ್ರ ಚಟುವಟಿಕೆ ವಿಚಾರದಲ್ಲಿ ಹಾವು-ಮುಂಗುಸಿಯಂತೆ ಕಚ್ಚಾಡುತ್ತಿದ್ದ ಪಾಕ್‌-ಮ್ಯಾನ್ಮಾರ್‌ಗಳನ್ನು ಈಗ ಚೀನಾವು ಶಸ್ತ್ರಾಸ್ತ್ರ ಪಾಲುದಾರ ದೇಶಗಳನ್ನಾಗಿ ಬದಲಿಸಿದೆ.

ಚೀನಾ ಸೇನೆಯ ಚಲನವಲನಗಳ ಮೇಲೆ ನಿಗಾ :

ಚಳಿಗಾಲ ಆರಂಭವಾಗುತ್ತಿದ್ದಂತೆಯೇ ವಾಸ್ತವಿಕ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಸೇನಾ ಪಡೆಗಳ ನಿಯೋಜನೆಯಲ್ಲಿ ಬದಲಾವಣೆ ಆಗುತ್ತದೆ. ಆದರೆ, ಈ ಬಾರಿ ಚೀನಾ ಸೇನೆಯ ಚಲನವಲನಗಳನ್ನು ಗಮನಿಸಿಯೇ ಮುಂದಿನ ಹೆಜ್ಜೆಯಿಡಲು ಭಾರತೀಯ ಸೇನೆ ನಿರ್ಧರಿಸಿದೆ.

ಚೀನಾ ಸೇನೆಯ ವೆಸ್ಟರ್ನ್ ಥಿಯೇಟರ್‌ ಕಮಾಂಡ್‌ ಮೇಲೆ ಮತ್ತು ಚೀನಾದ ಕಮ್ಯೂನಿಸ್ಟ್‌ ಪಾರ್ಟಿಯ 20ನೇ ಸಮಾವೇಶಕ್ಕೂ ಮುನ್ನ ನಿಯೋಜಿಸಲಾಗಿದ್ದ ಮೂರು ಸಶಸ್ತ್ರ ಬ್ರಿಗೇಡ್‌ಗಳ ಚಲನವಲನಗಳ ಮೇಲೆ ಭಾರತೀಯ ಸೇನೆ ನಿಗಾ ಇಟ್ಟಿದೆ. ಈ ಮೂರು ಬ್ರಿಗೇಡ್‌ಗಳು ವಾಪಸ್‌ ತಮ್ಮ ನೆಲೆಗೆ ಹೋಗುತ್ತದೋ ಇಲ್ಲವೋ ಎನ್ನುವುದರ ಮೇಲೆ ಭಾರತೀಯ ಸೇನಾಪಡೆಯ ಚಳಿಗಾಲದ ನಿಯೋಜನೆಯು ಅವಲಂಬಿತವಾಗಿದೆ.

ಚೀನಾ ಸೇನೆಯ ಒಂದು ಬ್ರಿಗೇಡ್‌ ಚೀನಾ-ಭೂತಾನ್‌ ಗಡಿಯ ಸಿಲಿಗುರಿ ಕಾರಿಡಾರ್‌ನ ಫಾರಿ ಝಾಂಗ್‌ ಪ್ರದೇಶದಲ್ಲಿ ನಿಯೋಜಿಸಲ್ಪಟ್ಟಿದೆ. ಇನ್ನೆರಡು ಬ್ರಿಗೇಡ್‌ಗಳು ಅರುಣಾಚಲ ಪ್ರದೇಶದಲ್ಲಿವೆ.

ಟಾಪ್ ನ್ಯೂಸ್

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

1-cuba

Cuba ನಗದು ಕೊರತೆ: ಎಟಿಎಂ ಮುಂದೆ ಜನರ ಕ್ಯೂ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.