ಕೋಟ: ಜಾಗದ ತಕರಾರಿಗೆ ಹಲ್ಲೆ: ದೂರು-ಪ್ರತಿದೂರು
Team Udayavani, Nov 24, 2022, 7:02 PM IST
ಕೋಟ: ಗಿಳಿಯಾರು ಗ್ರಾಮದ ನಿವಾಸಿ ವಿಜಯ (49) ಅವರು ನ.21ರಂದು ತನ್ನ ತಂದೆಯವರ ಉಳ್ತೂರಿನಲ್ಲಿರುವ ಜಮೀನಿನಲ್ಲಿ ಜೆ.ಸಿ.ಬಿ. ಮೂಲಕ ಕೆಲಸ ಮಾಡಿಸುತ್ತಿರುವಾಗ ಕೆದೂರು ನಿವಾಸಿ ಸುರೇಂದ್ರ ಹೆಗ್ಡೆ ಮತ್ತು ಆತನ ಮಗ ಹಾಗೂ ಇತರರನ್ನು ಒಟ್ಟುಗೂಡಿಸಿಕೊಂಡು ಇದು ನಮ್ಮ ಪಟ್ಟಾ ಸ್ಥಳ ಇಲ್ಲಿ ನಿನಗೇನು ಕೆಲಸ ಎಂದು ಹಲ್ಲೆ ಹಾಗೂ ದಲಿತ ದೌರ್ಜನ್ಯ ನಡೆಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಪ್ರತಿದೂರು :-
ಕೆದೂರು ನಿವಾಸಿ ಸುರೇಂದ್ರ ಹೆಗ್ಡೆ (63) ಅವರು ಉಳೂ¤ರಿನ ತನ್ನ ಸ್ವಂತ ಕ್ರಯದ ಹಕ್ಕಿನ ಸ್ಥಿರಾಸ್ತಿಯಲ್ಲಿ ಕಟ್ಟಡ ಕಾಮಗಾರಿ ಮಾಡಲು ಬಾಡಿಗೆ ಜೆ.ಸಿ.ಬಿ ತಂದು ಕೆಲಸ ಮಾಡಿಕೊಂಡಿರುವಾಗ ವಿಜಯ ಎನ್ನುವವರು ಸ್ಥಳಕ್ಕೆ ಬಂದು ಅವಾಚ್ಯ ಶಬ್ದಗಳಿಂದ ಬೆ„ದಿದ್ದು, ಸುರೇಂದ್ರ ಹೆಗ್ಡೆಯವರ ಮಗ ವಿವೇಕ ಹೆಗ್ಡೆಯವರಿಗೂ ಅವಾಚ್ಯವಾಗಿ ಬೆ„ದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಪ್ರತಿ ದೂರು ದಾಖಲಿಸಿದ್ದಾರೆ.
ದಲಿತ ಸಂಘಟನೆಗಳಿಂದ ಠಾಣೆಗೆ ಮನವಿ:-
ಕೆದೂರು ಸುರೇಂದ್ರ ಹೆಗ್ಡೆ ಅವರೇ ವಿಜಯ್ ಅವರಿಗೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದು,ಅನಂತರ ಹಲ್ಲೆಗೊಳಗಾದವರ ವಿರುದ್ಧವೇ ದೂರು ದಾಖಲಿಸಿದ್ದಾರೆ. ಪೊಲೀಸರು ಈ ರೀತಿ ದೂರನ್ನು ದಾಖಲಿಸಿಕೊಳ್ಳಬಾರದಿತ್ತು ಹಾಗೂ ಆರೋಪಿಯನ್ನು ತತ್ಕ್ಷಣ ಬಂಧಿಸಬೇಕು ಎಂದು ವಿವಿಧ ದಲಿತ ಸಂಘಟನೆಯ ಮುಖಂಡರು ಬುಧವಾರ ರಾತ್ರಿ ಹೆಚ್ಚಿನ ಸಂಖ್ಯೆಯಲ್ಲಿ ಕೋಟ ಪೊಲೀಸ್ ಠಾಣೆಗೆ ಭೇಟಿ ನೀಡಿ ಠಾಣಾಧಿಕಾರಿ ಮಧು ಬಿ. ಅವರಿಗೆ ಮನವಿ ಸಲ್ಲಿಸಿದರು. ಸಂಘಟನೆಯವರ ಜತೆ ಮಾತನಾಡಿದ ಠಾಣಾಧಿಕಾರಿಗಳು, ಎರಡೂ ದೂರುಗಳನ್ನು ಕಾನೂನು ಪ್ರಕಾರ ಕೇಸು ದಾಖಲಿಸಿಕೊಳ್ಳಲಾಗಿದೆ ಹಾಗೂ ವಿಜಯ್ ಅವರ ವಿರುದ್ಧ ದೌರ್ಜನ್ಯ ನಡೆಸಿದ ಆರೋಪಿಯನ್ನು ಶೀಘ್ರ ಬಂಧಿಸುವುದಾಗಿ ತಿಳಿಸಿದರು.
ದಲಿತ ಸಂಘಟನೆಯ ಮುಖಂಡರಾದ ಶ್ಯಾಮ್ರಾಜ್ ಬಿರ್ತಿ, ಶ್ಯಾಮ್ಸುಂದರ್ ತೆಕ್ಕಟ್ಟೆ, ಪರಮೇಶ್ವರ ಉಪ್ಪೂರು, ಭಾಸ್ಕರ್ ಮಾಸ್ತರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ