500 ರೂ. 20 ಆಗಿ ಬದಲು..!
ಪ್ರಯಾಣಿಕನ ನೋಟನ್ನೇ ಅದಲು ಬದಲು ಮಾಡಿದ ರೈಲ್ವೇ ಸಿಬಂದಿ
Team Udayavani, Nov 28, 2022, 10:50 AM IST
ಹೊಸದಿಲ್ಲಿ: ಟಿಕೆಟ್ ಖರೀದಿ ವೇಳೆ ರೈಲ್ವೇ ಅಧಿಕಾರಿಯೊಬ್ಬರು ಪ್ರಯಾಣಿಕರಿಗೆ ವಂಚಿಸುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ. ದಿಲ್ಲಿಯ ಹಜರತ್ ನಿಜಾ ಮುದ್ದೀನ್ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, “ರೈಲ್ವೇ ಉದ್ಯೋಗಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ಉತ್ತರ ರೈಲ್ವೇಯ ಸೇವಾ ಮತ್ತು ದಿಲ್ಲಿ ವಿಭಾಗ ಹೇಳಿದೆ.
ಸೂಪರ್ಫಾಸ್ಟ್ ಗ್ವಾಲಿಯರ್ ರೈಲಿನಲ್ಲಿ ಸಂಚರಿಸಬೇಕಾಗಿದ್ದ ಪ್ರಯಾಣಿಕ 125 ರೂ.ಗಳ ಟಿಕೆಟ್ ಖರೀದಿಸಬೇಕಿತ್ತು. ಅದರಂತೆ, ಅವನು 500 ರೂ.ಗಳ ನೋಟನ್ನು ಟಿಕೆಟ್ ಕೌಂಟರ್ನಲ್ಲಿ ಕುಳಿತಿದ್ದ ವ್ಯಕ್ತಿಗೆ ನೀಡುತ್ತಾನೆ. ಆದರೆ ಕ್ಷಣಮಾತ್ರದಲ್ಲಿ ಆ 500 ರೂ. ನೋಟನ್ನು ಮತ್ತೂಂದು ಕೈಗೆ ಬದಲಾಯಿಸುವ ರೈಲ್ವೇ ಉದ್ಯೋಗಿ, 500ರೂ. ಇದ್ದ ಜಾಗದಲ್ಲಿ 20 ರೂ. ನೋಟನ್ನು ಇಡುತ್ತಾನೆ. ಅನಂತರ “ಇದೇನಿದು? 20 ರೂ. ಕೊಟ್ಟಿದ್ದಿ. ಟಿಕೆಟ್ಗೆ 125 ರೂ. ಆಗುತ್ತೆ. ಉಳಿದ 105 ರೂ. ಕೊಡು’ ಎಂದು ಕೇಳುತ್ತಾನೆ. ಆದರೆ ರೈಲ್ವೇ ಸಿಬಂದಿಯ ಈ “ಕಣ್ಣಾಮುಚ್ಚಾಲೆ ಆಟ’ ಪ್ರಯಾಣಿಕನ ಮೊಬೈಲ್ನಲ್ಲಿ ಸೆರೆಯಾಗಿರುತ್ತದೆ.
ಇದರ ವೀಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದ್ದು, ಅನೇಕರು ತಮಗೂ ಇಂಥದ್ದೇ ಅನುಭವ ಹಲವು ಬಾರಿ ಆಗಿರುವುದಾಗಿ ಅಳಲು ತೋಡಿ ಕೊಂಡಿದ್ದಾರೆ. ರೈಲ್ವೇ ಅಧಿಕಾರಿಗಳು ಆ ವ್ಯಕ್ತಿಯ ವಿರುದ್ಧ ಶಿಸ್ತುಕ್ರಮದ ಭರವಸೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
MUST WATCH
ಹೊಸ ಸೇರ್ಪಡೆ
Modi ಹಾವಿನ ರೀತಿಯಲ್ಲಿ ರೈತರ ವಿರುದ್ಧ ಸೇಡಿಗೆ ಕಾಯ್ತಿದ್ದಾರೆ: ರೇವಂತ್
Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ
YSR Congress ಪ್ರಣಾಳಿಕೆ: ಪಿಂಚಣಿ ಮೊತ್ತ ಏರಿಕೆ, ವೈಜಾಗ್ ಕಾರ್ಯಕಾರಿ ರಾಜಧಾನಿ
Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು
Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ