ವಿದ್ಯುತ್ ಮರುಸ್ಥಾಪಿಸುವಂತೆ ಕೋರ್ಟ್ ಸೂಚನೆ
Team Udayavani, Dec 15, 2022, 11:18 PM IST
ಮಂಗಳೂರು: ನಗರದ ಬಹುಮಹಡಿ ಅಪಾರ್ಟ್ ಮೆಂಟ್ವೊಂದರ ಮನೆಗೆ ಅಲ್ಲಿನ ಮಾಲಕರ ಸಂಘದವರು ವಿದ್ಯುತ್ ಕಡಿತಗೊಳಿಸಿದ ಪ್ರಕರಣದಲ್ಲಿ ವಿದ್ಯುತ್ ಪೂರೈಕೆ ಮರುಸ್ಥಾಪಿಸುವಂತೆ ಇಲ್ಲಿನ ನ್ಯಾಯಾಲಯವು ಆದೇಶವಿತ್ತಿದೆ.
ಅಪಾರ್ಟ್ಮೆಂಟ್ನಲ್ಲಿ ವೃದ್ಧ ದಂಪತಿಗಳು ವಾಸಿಸುತ್ತಿದ್ದರು. ಅಪಾರ್ಟ್ಮೆಂಟ್ನ ನಿರ್ವಹಣ ಶುಲ್ಕ 26,650 ರೂ. ಮುಂಗಡ ಪಾವತಿಸುವಂತೆ ಅಸೋಸಿಯೇಶನ್ ಸೂಚನೆಯನ್ನು ದಂಪತಿ ವೀಣಾ ಮತ್ತು ಶಾಂತಾರಾಮ ಪ್ರಭು ಅವರು ಪಾಲಿಸದ ಹಿನ್ನೆಲೆಯಲ್ಲಿ 2018ರ ಅಕ್ಟೋಬರ್ 6ರಂದು ವಿದ್ಯುತ್ ಸಂಪರ್ಕ ಕಡಿತಗೊಳಿಸಿತ್ತು. ವಿದ್ಯುತ್ ಸಂಪರ್ಕ ಇಲ್ಲದೆ ದಂಪತಿ ಸಂಕಷ್ಟ ಅನುಭವಿಸಿದ್ದರು. ಮೆಸ್ಕಾಂ ಮತ್ತು ಇತರ ಇಲಾಖೆಗಳನ್ನೂ ಸಂಪರ್ಕಿಸಿದರೂ ಪ್ರಯೋಜನ ಆಗಿರಲಿಲ್ಲ. ಕೊನೆಗೆ ನ್ಯಾಯಾಲಯದ ಮೊರೆ ಹೋಗಿದ್ದರು.
3ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಮತ್ತು ಜೆಎಂಎಫ್ಸಿ ಕೋರ್ಟ್ ಅಲ್ಲಿನ ಅಸೋಸಿಯೇಶನ್ಗೆ ನಿರ್ದೇಶನ ನೀಡಿದೆ. ನ್ಯಾಯಾಲಯ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದು ಮೂಲ ಹಕ್ಕಿನ ಉಲ್ಲಂಘನೆಯಾಗಿದೆ. ದಂಪತಿ ನ್ಯಾಯಾಲಯದ ಮುಂದೆ ನಿರ್ವಹಣ ವೆಚ್ಚ ನೀಡಲು ಸಿದ್ಧವಿರುವುದರಿಂದ ವಿದ್ಯುತ್ ಸಂಪರ್ಕ ಪಡೆಯಲು ಅರ್ಹತೆ ಪಡೆದಿದ್ದಾರೆ ಎಂದಿದೆ. ದಂಪತಿ ನ್ಯಾಯಾಲಯದ ತೀರ್ಪಿಗೆ ಹರ್ಷ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್?
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ