ಭಾರತದಲ್ಲಿ ದ್ವೇಷ ಹೆಚ್ಚಿದೆ, ಆದರೆ ದೇಶ ಬಿಟ್ಟು ಹೋಗುವುದು ಪರಿಹಾರವಲ್ಲ:ಫಾರೂಕ್ ಅಬ್ದುಲ್ಲಾ
ಕೇಸರಿ ಹಿಂದೂಗಳದ್ದು, ಹಸಿರು ಮುಸಲ್ಮಾನರದ್ದೇ ?
Team Udayavani, Dec 23, 2022, 5:19 PM IST
ನವದೆಹಲಿ : ಶಾರುಖ್ ಖಾನ್ ಅವರ ‘ಪಠಾಣ್’ ಚಿತ್ರ ದಲ್ಲಿ ಕೇಸರಿ ಬಣ್ಣದ ಬಟ್ಟೆಗಳನ್ನು ಧರಿಸಿದ್ದಕ್ಕಾಗಿ ವಿವಾದವು ಸ್ಫೋಟಗೊಂಡಿದೆ. ಕೇಸರಿ ಹಿಂದೂಗಳದ್ದು, ಹಸಿರು ಮುಸಲ್ಮಾನರದ್ದು ಎಂದರ್ಥವೇ? ಇದು ಏನು? ಹಸು ಹಿಂದೂಗಳಿಗೆ ಮತ್ತು ಎತ್ತು ಮುಸ್ಲಿಮರಿಗೇ ? ಎಂದು ಜಮ್ಮು ಮತ್ತು ಕಾಶ್ಮೀರ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಪ್ರಶ್ನಿಸಿದ್ದಾರೆ.
ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಶುಕ್ರವಾರ ಮಾತನಾಡಿದ ನ್ಯಾಷನಲ್ ಕಾನ್ಫರೆನ್ಸ್(ಎನ್ಸಿ) ಪಕ್ಷದ ಅಧ್ಯಕ್ಷ” ”ಭಾರತದಲ್ಲಿ ದ್ವೇಷ ಹೆಚ್ಚಿದೆ ನಿಜ ಆದರೆ ದೇಶ ಬಿಟ್ಟು ಹೋಗುವುದು ಪರಿಹಾರವಲ್ಲ. ನಾವು ಒಗ್ಗಟ್ಟಾಗಿ ಉಳಿಯಬೇಕು ಮತ್ತು ದ್ವೇಷವನ್ನು ಮುಗಿಸಬೇಕು. ಈ ದೇಶ ಉಳಿಯಬೇಕಾದರೆ, ಎಲ್ಲಾ ಧರ್ಮದ ಜನರು ಸಹೋದರತ್ವವನ್ನು ಪಾಲಿಸಬೇಕು” ಎಂದು ಆರ್ಜೆಡಿ ನಾಯಕ ಎಬಿ ಸಿದ್ದಿಕಿ ಹೇಳಿಕೆಯ ಕುರಿತು ಪ್ರತಿಕ್ರಿಯೆ ನೀಡಿದರು.
”ಆರ್ಟಿಕಲ್ 370 ರದ್ದತಿಯಿಂದ ಭಯೋತ್ಪಾದನೆ ಕೊನೆಗೊಳ್ಳುತ್ತದೆ ಎಂದು ಸರಕಾರ ಹೇಳಿತ್ತು. ಅದನ್ನು ತೆಗೆದು ಎಷ್ಟು ವರ್ಷಗಳಾದವು? ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನೆ ಕೊನೆಗೊಂಡಿದೆಯೇ?” ಎಂದು ಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
MUST WATCH
ಹೊಸ ಸೇರ್ಪಡೆ
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
Devotion: ಭಕ್ತಿಯ ಅರ್ಥವಾದರೂ ಏನು?
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್