“ವ್ಯಸನಿಗಳಿಗೆ ಮಗಳನ್ನು ನೀಡದಿರಿ’:ಸಚಿವ ಕೌಶಲ್ ಕುಮಾರ್
Team Udayavani, Dec 26, 2022, 6:25 AM IST
ಸುಲ್ತಾನಪುರ: “ಮದ್ಯವ್ಯಸನಿ ಅಧಿಕಾರಿಗೆ ನಿಮ್ಮ ಮಗಳು ಅಥವಾ ಸಹೋದರಿ ಯನ್ನು ನೀಡುವ ಬದಲು ಒಬ್ಬ ಆಟೋ ಚಾಲಕ ಅಥವಾ ಕಾರ್ಮಿಕನಿಗೆ ಕೊಟ್ಟು ಮದುವೆ ಮಾಡಿ,’ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಹಾಯಕ ಸಚಿವ ಕೌಶಲ್ ಕುಮಾರ್ ಸಲಹೆ ನೀಡಿದ್ದಾರೆ.
ಉತ್ತರ ಪ್ರದೇಶದ ಲಂಬುವಾದಲ್ಲಿ ಮದ್ಯ ವ್ಯಸನ ಮುಕ್ತ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಕುಡುಕರ ಆಯಸ್ಸು ತೀರ ಕಡಿಮೆ. ಇದಕ್ಕೆ ನನ್ನ ಮಗನೇ ಸಾಕ್ಷಿ. ನಾನು ಸಂಸದನಾದರೂ, ನನ್ನ ಪತ್ನಿ ಶಾಸಕಿ ಆದರೂ ಮಗ ಆಕಾಶ್ ಕಿಶೋರ್ನನ್ನು ಉಳಿಸಿಕೊಳ್ಳಲು ಆಗಲಿಲ್ಲ,’ ಎಂದರು. “ನನ್ನ ಮಗ ಕುಡಿತದ ಚಟಕ್ಕೆ ಬಿದ್ದಿದ್ದ. ಅವನನ್ನು ವ್ಯಸನಮುಕ್ತ ಕೇಂದ್ರಕ್ಕೆ ಸೇರಿಸಲಾಯಿತು. ಅನಂತರ ಸರಿಹೋಗಬಹುದು ಎಂದು ಭಾವಿಸಿ, ಯುವತಿಯೊಂದಿಗೆ ಮದುವೆ ಮಾಡಿಸಿದೆವು. ಆದರೆ ಆತ ಮದ್ಯ ಸೇವಿಸುವುದು ಮುಂದುವರಿಸಿದ. ಅನಂತರ ಎರಡು ವರ್ಷದ ಮಗ ಮತ್ತು ಪತ್ನಿಯನ್ನು ಅನಾಥನನ್ನಾಗಿ ಆತ ನಿಧನ ಹೊಂದಿದ’ ಎಂದು ಬೇಸರ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ