ಹಿಮ ಬಾಂಬ್: 60 ಸಾವು: ಅಮೆರಿಕದಾದ್ಯಂತ ಜನ ಜೀವನ ಅಸ್ತವ್ಯಸ್ತ; ವಿದ್ಯುತ್ ವ್ಯತ್ಯಯ
Team Udayavani, Dec 28, 2022, 6:15 AM IST
ನ್ಯೂಯಾರ್ಕ್: ಕ್ರಿಸ್ಮಸ್ ಮತ್ತು ಹೊಸ ವರ್ಷದ ಈ ಸಂದರ್ಭದಲ್ಲಿ ಬಾಂಬ್ ಚಂಡಮಾರುತದಿಂದ ಅಮೆರಿಕ ತತ್ತರಿಸಿ ಹೋಗಿದೆ. ಚಂಡಮಾರುತದ ಪರಿಣಾಮ ಅಮೆರಿಕದಲ್ಲಿ ಕನಿಷ್ಠ 60 ಮಂದಿ ಮೃತಪಟ್ಟಿದ್ದಾರೆ.
ಈ ಪೈಕಿ ನ್ಯೂಯಾರ್ಕ್ ಒಂದರಲ್ಲೇ 27 ಮಂದಿ ಅಸುನೀಗಿದ್ದಾರೆ. ಅಮೆರಿಕ ಸರಕಾರದ ಪ್ರಕಾರ ಇದೊಂದು “ಶತಮಾನದ ಹಿಮ ದುರಂತ’ ಎಂದು ಬಣ್ಣಿಸಿದೆ.
ಹಿಮದ ಮಳೆಯಿಂದಾಗಿ ರಸ್ತೆಯಲ್ಲಿ ನಿಂತಿರುವ ಕಾರುಗಳು, ಟ್ರಕ್ಗಳು, ಬಸ್ಗಳ ಸಹಿತ ಇತರ ವಾಹನಗಳು ಹಿಮದಿಂದ ತುಂಬಿ ಹೋಗಿವೆ. ಮನೆಗಳು ಮತ್ತು ಕಟ್ಟಡಗಳ ಛಾವಣಿಗಳು ಹಿಮಚ್ಛಾದಿತವಾಗಿವೆ. ನ್ಯೂಯಾರ್ಕ್ ಮತ್ತು ಬಫೆಲೊ ನಗರಗಳಲ್ಲಿ ರಸ್ತೆಯಲ್ಲಿ ತುಂಬಿರುವ ಹಿಮವನ್ನು ತೆರವು ಮಾಡುವ ಕಾರ್ಯ ದಲ್ಲಿ ಸ್ಥಳೀಯ ಪಾಲಿಕೆ ಸಿಬಂದಿ ನಿರತರಾಗಿದ್ದಾರೆ.
ಕಡು ಚಳಿ: ಮೊನಟಾನಾ ಎಂಬಲ್ಲಿ ತಾಪಮಾನ ಮೈನಸ್ 45 ಡಿಗ್ರಿ ಸೆಲ್ಸಿಯಸ್, ಐಯೋವಾದ ಡೆಸ್ ಮಾನಿಸ್ನಲ್ಲಿ ತಾಪಮಾನ ಮೈನಸ್ 37 ಡಿಗ್ರಿ ಸೆಲ್ಸಿಯಸ್ಗೆ ತಲುಪಿದೆ. ಶತಮಾನದ ಹಿಮ ದುರಂತದಿಂದಾಗಿ ಅಮೆರಿಕದ 20 ಕೋಟಿ ಮಂದಿಗೆ ತೊಂದರೆಯಾಗಿದೆ. ಹಲವು ಪ್ರಾಂತಗಳಲ್ಲಿ ಇನ್ನೂ ವಿದ್ಯುತ್ ಪೂರೈಕೆ ವ್ಯತ್ಯಯವಾಗಿದೆ.
ಮುಂದುವರಿದ ರಕ್ಷಣ ಕಾರ್ಯಾಚರಣೆ: ಬಾಂಬ್ ಚಂಡಮಾರುತದಿಂದ ಹಾನಿಯಾದ ಪ್ರದೇಶಗಳಲ್ಲಿ ರಕ್ಷಣ ಕಾರ್ಯಾಚರಣೆ ಮುಂದುವರಿದಿದೆ. ನ್ಯೂಯಾರ್ಕ್ ಮತ್ತು ಬಫೆಲೊ ನಗರಗಳಲ್ಲಿ ಮೃತದೇಹಗಳನ್ನು ಕಾರಿನಿಂದ ಹೊರತೆಗೆಯುವ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಶ್ಚಿಮ ನ್ಯೂಯಾರ್ಕ್ನ ಕೆಲವು ಪ್ರದೇ ಶಗಳಲ್ಲಿ 23 ಸೆ.ಮೀ. ಹಿಮ ಬಿದ್ದಿದೆ. ಬಫೆಲೊದ ನಯಾಗರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 1.25 ಮೀ. ಹಿಮ ಬಿದ್ದಿದೆ ಎಂದು ಅಮೆರಿಕ ಹವಾಮಾನ ಇಲಾಖೆ ವರದಿ ಮಾಡಿದೆ.
ವಿಮಾನ ಹಾರಾಟ ರದ್ದು
ಬಾಂಬ್ ಚಂಡಮಾರುತದ ಹಿನ್ನೆಲೆಯಲ್ಲಿ ಇತ್ತೀಚೆಗೆ ಅಮೆರಿಕದಲ್ಲಿ 15,000 ಹೆಚ್ಚು ವಿಮಾನಗಳ ಸಂಚಾರ ರದ್ದುಗೊಂಡಿದೆ. ಸೋಮವಾರ ಒಂದೇ ದಿನ 3,410 ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಸಂಚಾರ ರದ್ದಾಗಿದೆ. ಇದರಿಂದ ಪ್ರವಾಸಿಗರು ಸಂಕಷ್ಟ ಅನುಭವಿಸುತ್ತಿದ್ದು, ವಿಮಾನ ನಿಲ್ದಾಣಗಳಲ್ಲೇ ಠಿಕಾಣಿ ಹೂಡುವಂತಾಗಿದೆ. ಪ್ರಮುಖವಾಗಿ ಅಟ್ಲಾಂಟಾ, ಲಾಸ್ ವೇಗಸ್, ಸಿಯೇಟಲ್, ಬಾಲ್ಟಿಮೊರ್, ಡೆನ್ವರ್ ಮತ್ತು ಚಿಕಾಗೊ ನಗರಗಳ ದೇಶೀಯ ವಿಮಾನಗಳ ಹಾರಾಟ ರದ್ದುಗೊಂಡಿವೆ. ಚಂಡಮಾರುತದಿಂದ ಹಲವು ನಗರಗಳಲ್ಲಿ ವಿದ್ಯುತ್ ವ್ಯತ್ಯಯವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಮಲಾ ಹ್ಯಾರಿಸ್ ಮನೆಗೆ ವಲಸಿಗರು
ಟೆಕ್ಸಾಸ್ನ ನೈಋತ್ಯ ಭಾಗದಿಂದ ಆಗಮಿಸಿರುವ ವಲಸಿಗರು ಬಾಂಬ್ ಚಂಡಮಾರುತದ ಹಿನ್ನೆಲೆಯಲ್ಲಿ ಸುರಿಯುತ್ತಿರುವ ನಿರಂ ತರ ಹಿಮದ ಮಳೆಯಿಂದಾಗಿ ಸೂರಿನ ವ್ಯವಸ್ಥೆ ಇಲ್ಲದೇ ಚಳಿಯಲ್ಲಿ ನಡುಗುತ್ತಿದ್ದರು. ರಕ್ಷಣ ಕಾರ್ಯಪಡೆಯ ತಂಡ ಸುಮಾರು 130 ವಲಸಿಗರನ್ನು ಬಸ್ ಮೂಲಕ ವಾಷಿಂಗ್ಟನ್ನಲ್ಲಿರುವ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮನೆಗೆ ತಂದು ಬಿಟ್ಟಿದ್ದಾರೆ. ಅವರ ಮನೆಯಲ್ಲೇ ವಲಸಿಗರಿಗೆ ವಾಸ್ತವ್ಯದ ವ್ಯವಸ್ಥೆ ಕಲ್ಪಿಸಲಾಗಿದೆ.
ಚಂಡಮಾರುತದಿಂದ ಸಾವಿಗೀಡಾದ ಕುಟುಂಬಗಳಿಗೆ ನನ್ನ ಸಂತಾಪಗಳು. ಶೀಘ್ರ ರಕ್ಷಣ ಕಾರ್ಯಾಚರಣೆ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.
-ಜೋ ಬೈಡೆನ್, ಅಮೆರಿಕ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Spicy Chip Challenge; ಅತ್ಯಂತ ಖಾರದ ಚಿಪ್ಸ್ ತಿಂದ 14ರ ಬಾಲಕ ಸಾವು!
Microsoft ಚಿಂತನೆ : ಚೀನದಿಂದ 800 ನೌಕರರ ವರ್ಗ
27 ವರ್ಷಗಳ ಹಿಂದೆ ನಾಪತ್ತೆಯಾದವ ನೆರೆಮನೆಯ ನೆಲಮಾಳಿಗೆಯಲ್ಲಿ ಪತ್ತೆ!!: ವಿಡಿಯೋ ವೈರಲ್
Viral Video: ಭಾರತ ಚಂದ್ರನ ಮೇಲೆ ಕಾಲಿಟ್ಟಿದೆ; ಆದರೆ ನಾವು….: ಪಾಕ್ ನಾಯಕನ ಮಾತು
Slovak PM: ದುಷ್ಕರ್ಮಿಯಿಂದ ಸ್ಲೊವಾಕ್ ಪ್ರಧಾನಿ ರಾಬರ್ಟ್ ಮೇಲೆ ಗುಂಡಿನ ದಾಳಿ…
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Haveri; ಇಸ್ಪೀಟ್ ಆಟಕ್ಕೆ ಲಂಚ:ಪಿಎಸ್ಐ, ಕಾನ್ ಸ್ಟೆಬಲ್ ಲೋಕಾಯುಕ್ತ ಬಲೆಗೆ
Kunigal: ಗ್ಯಾಸ್ ಸಿಲಿಂಡರ್ ಸ್ಟವ್ ಸ್ಪೋಟ :6 ಮಂದಿಗೆ ತೀವ್ರ ಗಾಯ
Belagavi ರೈಲಿನಲ್ಲಿ ಹತ್ಯೆಗೈದು ಪರಾರಿಯಾದ ಆರೋಪಿ ಪತ್ತೆಗೆ ನಾಲ್ಕು ತಂಡ ರಚನೆ
Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ
ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್