“ಸಾವಿನ ಮುನ್ನ ತುನಿಶಾ 15 ನಿಮಿಷ ʼಆ ವ್ಯಕ್ತಿಯ ಜೊತೆʼ ವಿಡಿಯೋ ಕಾಲ್ ನಲ್ಲಿ ಮಾತಾನಾಡಿದ್ದಳು”… ಶೀಜಾನ್ ವಕೀಲರು
Team Udayavani, Jan 10, 2023, 9:11 AM IST
ಮುಂಬಯಿ: ನಟಿ ತುನಿಶಾ ಶರ್ಮಾ ಪ್ರಕರಣ ದಿನಕ್ಕೊಂದರಂತೆ ತಿರುವು ಪಡೆದುಕೊಳ್ಳುತ್ತಿದೆ. ನ್ಯಾಯಲಯದಲ್ಲಿ ಸೋಮವಾರ ಎರಡು ಕಡೆಯವರು ತಮ್ಮ ವಾದವನ್ನು ಮಂಡಿಸಿದ್ದಾರೆ. ವಸಾಯಿ ಜಿಲ್ಲಾ ಮತ್ತು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಆರ್.ಡಿ.ದೇಶಪಾಂಡೆ ಎರಡೂ ಕಡೆಯವರ ವಾದವನ್ನು ಆಲಿಸಿದ್ದಾರೆ.
ಶೀಜಾನ್ ಖಾನ್ ಪರ ವಕೀಲರಾಗಿರುವ ಶೈಲೇಂದ್ರ ಮಿಶ್ರಾ ಮತ್ತು ಶರದ್ ರೈ ಅವರು ಕೋರ್ಟಿನ ಮುಂದೆ ಶೀಜಾನ್ ನಿರಪರಾಧಿ ಶರ್ಮಾ ಅವರ ಪ್ರಕರಣದಲ್ಲಿ ಯಾವ ಸಂಬಂಧವನ್ನು ಹೊಂದಿಲ್ಲ. ಬಾಲಿವುಡ್ ನಟ ಸೂರಜ್ ಪಾಂಚೋಲಿ ಕೂಡ 2013 ರಲ್ಲಿ ನಿಧನರಾದ ನಟ-ಗಾಯಕಿ ಜಿಯಾ ಖಾನ್ ಅವರ ಪ್ರಕರಣಕ್ಕೆ ಪ್ರಚೋದನೆ ನೀಡಿದ ಆರೋಪದ ನಂತರ ಜಾಮೀನು ಪಡೆದಿದ್ದರು ಎಂದು ಹೇಳಿದ್ದಾರೆ.
ಇದನ್ನೂ ಓದಿ: ನ್ಯಾಯಾಧೀಶರಂತೆ ಪೋಸ್ ಕೊಟ್ಟು ಉದ್ಯೋಗ ಕೊಡುವ ಭರವಸೆ; ಲಕ್ಷ ಲಕ್ಷ ಲೂಟಿ; ಪೊಲೀಸ್, ಪತ್ನಿ ಬಂಧನ
ಡೇಟಿಂಗ್ ಅಪ್ಲಿಕೇಶನ್ವೊಂದರಲ್ಲಿ ತುನಿಶಾ ಅವರು ಅಲಿ ಎಂಬ ವ್ಯಕ್ತಿಯ ಪರಿಚಯವನ್ನು ಹೊಂದಿದ್ದಳು. ಡಿ.21 -23 ರ ನಡುವೆ ಅಲಿಯೊಂದಿಗೆ ಸಂಪರ್ಕದಲ್ಲಿದ್ದರು. ಇದಲ್ಲದೆ ತುನಿಶಾ ಸಾವಿನ ಮೊದಲು ಅಲಿ ಅವರೊಂದಿಗೆ 15 ನಿಮಿಷದವರೆಗೆ ವಿಡಿಯೋ ಕಾಲ್ ನಲ್ಲಿ ಮಾತಾನಾಡಿದ್ದಳು. ಈ ದೃಷ್ಟಿಕೋನದಲ್ಲಿ ತನಿಖೆಯಾಗಲಿ ಎಂದು ವಕೀಲರು ಹೇಳಿದ್ದಾರೆ.
ಈ ಪ್ರಕರಣದಲ್ಲಿ ಲವ್ ಜಿಹಾದ್, ಉರ್ದು ಕಲಿಯಲು ಒತ್ತಾಯಿಸಿದ್ದು, ಹಿಜಾಬ್ ಧರಿಸಲು ಹೇಳಿದ್ದೆಲ್ಲಾ ಆಗಿಲ್ಲ ಎಂದು ವಕೀಲರು ವಾದದ ವೇಳೆ ಹೇಳಿದ್ದಾರೆ.
ಶರ್ಮಾ ಕುಟುಂಬದ ಪರ ಹಾಜರಾದ ವಕೀಲ ತರುಣ್ ಶರ್ಮಾ ಅವರು ದಾಖಲೆಗಳನ್ನು ಪರಿಶೀಲಿಸಲು ಮತ್ತು ತಮ್ಮ ವಾದವನ್ನು ಸಿದ್ಧಪಡಿಸಲು ನ್ಯಾಯಾಲಯದಿಂದ ಸಮಯ ಕೋರಿದರು ಅದನ್ನು ನ್ಯಾಯಾಧೀಶರು ಅನುಮತಿಸಿದರು. ವಿಚಾರಣೆಯನ್ನು ಜನವರಿ 11 ಕ್ಕೆ ಮುಂದೂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು