ನ್ಯಾಯಾಧೀಶರಂತೆ ಪೋಸ್ ಕೊಟ್ಟು ಉದ್ಯೋಗ ಕೊಡುವ ಭರವಸೆ; ಲಕ್ಷ ಲಕ್ಷ ಲೂಟಿ; ಪೊಲೀಸ್, ಪತ್ನಿ ಬಂಧನ
Team Udayavani, Jan 10, 2023, 8:44 AM IST
ಚಂಡಿಗಢ: ನ್ಯಾಯಾಧೀಶರಂತೆ ಪೋಸ್ ಕೊಟ್ಟು ಯುವಕರಿಗೆ ಉದ್ಯೋಗ ಹುಡುಕಿ ಕೊಡುತ್ತೇವೆ ಎಂದು ಸುಳ್ಳು ಹೇಳಿ ಹಣ ಪಡೆದು ವಂಚಿಸುತ್ತಿದ್ದ ಪೊಲೀಸ್ ಅಧಿಕಾರಿ ಹಾಗೂ ಅವರ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಾನಸಾ ಜೈಲಿನಲ್ಲಿ ಉಪ ಅಧೀಕ್ಷಕರಾಗಿದ್ದ ನರಪಿಂದರ್ ಸಿಂಗ್ (41), ಪತ್ನಿ ದೀಪ್ ಕಿರಣ್ (35) ಇಬ್ಬರೂ ಲೂಧಿಯಾನ ನಿವಾಸಿಗಳು. ಬಂಧಿತರಿಂದ ನಾಮಫಲಕವುಳ್ಳ ಮೂರು ಪೊಲೀಸ್ ಸಮವಸ್ತ್ರ, ನಾಮಫಲಕವುಳ್ಳ ಮಹಿಳಾ ಕಾನ್ಸ್ ಸ್ಟೇಬಲ್ ಸಮವಸ್ತ್ರ,10 ಖಾಲಿ ಪೊಲೀಸ್ ನೇಮಕಾತಿ ಅರ್ಜಿಗಳು, 1 ಲಕ್ಷ ರೂ. ನಗದು, ಚಿನ್ನದ ಸರ,ಚಿನ್ನದ ಉಂಗುರ ಮತ್ತು ಎರಡು ಕಾರುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ಪೊಲೀಸ್ ಅಧಿಕಾರಿಯಾಗಿದ್ದ ನರಪಿಂದರ್ ಸಿಂಗ್ ಮತ್ತು ಪತ್ನಿ ದೀಪ್ ಕಿರಣ್ ಇಬ್ಬರು ನ್ಯಾಯಾಧೀಶರಂತೆ ಪೋಸ್ ಕೊಟ್ಟು ಉದ್ಯೋಗವಿಲ್ಲದವರಿಗೆ ಉದ್ಯೋಗ ನೀಡುತ್ತೇವೆ. ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ನೀಡುವ ಭರವಸೆಯನ್ನು ಕೊಟ್ಟು, ಯುವಜನರಿಂದ ಹಣ ಪಡೆಯುತ್ತಿದ್ದರು. ಒಂದೊಂದು ಪ್ರಕರಣಕ್ಕೆ 8-10 ಲಕ್ಷ ರೂ.ಪಡೆಯುತ್ತಿದ್ದರು. ಉದ್ಯೋಗ ನೀಡುವ ಭರವವಸೆ ಕೊಟ್ಟು, ಉದ್ಯೋಗ ಅಕಾಂಕ್ಷಿಗಳಿಗೆ ವಂಚನೆ ಮಾಡುತ್ತಿದ್ದರು ಎಂದು ಲೂಧಿಯಾನ ಪೊಲೀಸ್ ಕಮಿಷನರ್ ಮನದೀಪ್ ಸಿಂಗ್ ಸಿಧು ಹೇಳಿದ್ದಾರೆ.
ಈ ಬಗ್ಗೆ ಮೋತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಬಳಿಕ, ತನಿಖೆ ನಡೆಸಿ ಇಬ್ಬರನ್ನು ಬಂಧಿಲಾಗಿದೆ. ಈ ಪ್ರಕರಣದಲ್ಲಿ ಸಾಥ್ ಕೊಟ್ಟ ಇಬ್ಬರು ಸಹಚರರಾದ ಲಖ್ವಿಂದರ್ ಸಿಂಗ್ ಮತ್ತು ಸುಖದೇವ್ ಸಿಂಗ್ ತಲೆಮರೆಸಿಕೊಂಡಿದ್ದು, ಅವರನ್ನು ಹಿಡಿಯಲು ಪೊಲೀಸ್ ತಂಡಗಳು ದಾಳಿ ನಡೆಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು