ಜೋಶಿಮಠ ಭೂಗರ್ಭ ಕುಸಿತ…ಕಲಿಯುಗದ ಅಂತ್ಯದ ಮುನ್ಸೂಚನೆ?ಬದ್ರಿ ಪುರಾಣ ಭವಿಷ್ಯ ನಿಜವಾಗಲಿದೆಯಾ…
ಬದ್ರಿ ನಾರಾಯಣ ದೇವರ ಕುರಿತ ಭವಿಷ್ಯವಾಣಿಯನ್ನು ನಂಬಿಕೊಂಡು ಬರಲಾಗುತ್ತಿದೆ
Team Udayavani, Jan 16, 2023, 1:43 PM IST
ನವದೆಹಲಿ: ಭಾರೀ ಕುಸಿತದ ಪರಿಣಾಮ ಜೋಶಿಮಠ ಭೂಗರ್ಭದೊಳಗೆ ಸೇರುವ ಹಂತಕ್ಕೆ ತಲುಪಿದ್ದು, ಇದರ ಜೊತೆ ಸಮೀಪದ ಬದ್ರಿನಾಥ ದೇವಾಲಯ ಹಾಗೂ ಬೆಟ್ಟದ ಬಗ್ಗೆಯೂ ಭಕ್ತರಲ್ಲಿ ಕಳವಳ ಮೂಡಿಸಿದೆ. ಅದಕ್ಕೆ ಕಾರಣ ಬದ್ರಿ ಪುರಾಣ ಭವಿಷ್ಯ ನಿಜವಾಗಲಿದೆಯೇ ಎಂಬ ಆತಂಕ ಭಕ್ತರದ್ದಾಗಿದೆ.
ಕಲಿಯುಗದ ಅಂತ್ಯದ ಮುನ್ಸೂಚನೆಯೇ?
ಜೋಶಿಮಠದಲ್ಲಿರುವ ಪ್ರಸಿದ್ಧ ನರಸಿಂಹ ದೇವಾಲಯದಲ್ಲಿನ ನರಸಿಂಹ ವಿಗ್ರಹಕ್ಕೂ ಬದ್ರಿಯಲ್ಲಿರುವ ಭಗವಾನ್ ವಿಷ್ಣುವಿನ ಕುರಿತು ಭಕ್ತರು ಮತ್ತು ಯಾತ್ರಾರ್ಥಿಗಳಲ್ಲಿ ತುಂಬಾ ನಿಗೂಢ ಕುತೂಹಲಕಾರಿ ಸಂಗತಿಯನ್ನು ನಂಬಿಕೊಂಡು ಬಂದಿದ್ದಾರೆ. ಇದೊಂದು ತುಂಬಾ ಪುರಾತನ ನಂಬಿಕೆಯಾಗಿದೆ. 7-8ನೇ ಶತಮಾನದಲ್ಲಿ ಆದಿ ಶಂಕರಾಚಾರ್ಯರು ಈ ಜಗತ್ತಿನ ಹತ್ತು ದೇವರ ಸೃಷ್ಠಿ ಹೇಗಾಯಿತು ಎಂಬ ಬಗ್ಗೆ ಜನರಿಗೆ ಪ್ರವಚನ ನೀಡುತ್ತಿರುವ ಸಂದರ್ಭದಿಂದಲೂ ಜೋಶಿಮಠದ ನರಸಿಂಹ ಹಾಗೂ ಬದ್ರಿ ನಾರಾಯಣ ದೇವರ ಕುರಿತ ಭವಿಷ್ಯವಾಣಿಯನ್ನು ನಂಬಿಕೊಂಡು ಬರಲಾಗುತ್ತಿದೆ ಎಂದು ವರದಿ ವಿವರಿಸಿದೆ.
ಇದನ್ನೂ ಓದಿ:ಕಾಂಗ್ರೆಸ್ ಗೆಲ್ಲಲು ಸೂರ್ಯ ನಾರಾಯಣ ರೆಡ್ಡಿಗೆ ಉಸ್ತುವಾರಿ ನೀಡಲು ಹೈಕಮಾಂಡ್ ಚಿಂತನೆ.!
ನರಸಿಂಹ ದೇವಾಲಯವು ಜೋಶಿಮಠದ ತಳಬುಡದ ಬಜಾರ್ ಪ್ರದೇಶದಲ್ಲಿದೆ. ಆದಿ ಶಂಕರಾಚಾರ್ಯರು ಜೋಶಿಮಠದಲ್ಲಿ ವಿಷ್ಣುವಿನ ಅವತಾರವಾದ ನರಸಿಂಹ ದೇವರ ಪ್ರತಿಮೆಯನ್ನು ಸ್ಥಾಪಿಸಿದ್ದರು. ಜೋಶಿಮಠದಿಂದ 22 ಕಿಲೋ ಮೀಟರ್ ದೂರದಲ್ಲಿರುವ ಬದ್ರಿನಾಥ ದೇಗುಲ ಸಮುದ್ರ ಮಟ್ಟದಿಂದ 8,530 ಅಡಿ ಎತ್ತರದಲ್ಲಿದೆ. ಇಲ್ಲೇ ನರಸಿಂಹನ ವಿಗ್ರಹವಿದ್ದು ಇಲ್ಲಿಯೂ ಭೂ ಕುಸಿತ ಸಂಭವಿಸಿದರೆ ಬದ್ರಿ ಪುರಾಣ ಭವಿಷ್ಯ ನಿಜವಾಗುವುದರಲ್ಲಿ ಸಂದೇಹ ಇಲ್ಲ ಎಂಬುದಾಗಿ ವಿಶ್ಲೇಷಿಸಲಾಗುತ್ತಿದೆ.
ಭಕ್ತರ ನಂಬಿಕೆಯಂತೆ ದಿನಕಳೆದಂತೆ ವಿಷ್ಣುವಿನ ಅವತಾರದಲ್ಲಿ ಒಂದಾದ ನರಸಿಂಹ ವಿಗ್ರಹದ ಒಂದು ಕೈ (ತೋಳು) ತೆಳುವಾಗುತ್ತಿದ್ದು, ಅದು ಮುರಿದು ಬಿದ್ದು, ನರಸಿಂಹ ದೇವಾಲಯ ಕೂಡಾ ಧರಾಶಾಹಿಯಾಗಲಿದ್ದು, ಜೊತೆಗೆ ವಿಷ್ಣು ಪ್ರಯಾಗದ ಬಳಿ ಇರುವ ಜಯ-ವಿಜಯ ಪರ್ವತ ಶ್ರೇಣಿ ಕುಸಿದು ಬಿದ್ದು ಒಂದಕ್ಕೊಂದು ಸೇರುವ ಮೂಲಕ ಪವಿತ್ರ ಬದ್ರಿ ನಾರಾಯಣ ದೇಗುಲ ಪ್ರವೇಶ ಶಾಶ್ವತವಾಗಿ ಬಂದ್ ಆಗಲಿದೆ. ಇದು ಕಲಿಯುಗದ ಅಂತ್ಯಕ್ಕೆ ಕಾರಣವಾಗಲಿದೆ ಎಂದು ಪುರಾಣದಲ್ಲಿ ಉಲ್ಲೇಖಿಸಿರುವುದಾಗಿ ವರದಿ ವಿವರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ferozepur; ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು
Crime: ಮೊಬೈಲ್ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ
Poonch; ವಾಯುಸೇನೆ ವಾಹನದ ಮೇಲೆ ಉಗ್ರ ದಾಳಿ; ಓರ್ವ ಹುತಾತ್ಮ, ನಾಲ್ವರಿಗೆ ಗಾಯ
Temple; ಎಪ್ರಿಲ್ನಲ್ಲಿ ತಿರುಪತಿ ಹುಂಡಿಗೆ ಬಿದ್ದ ಕಾಣಿಕೆ ಎಷ್ಟು ಗೊತ್ತೇ?
Wife ಜತೆ ಅಸ್ವಾಭಾವಿಕ ಲೈಂಗಿಕಕ್ರಿಯೆಯು ರೇಪ್ ಅಲ್ಲ: ಹೈಕೋರ್ಟ್
MUST WATCH
ಹೊಸ ಸೇರ್ಪಡೆ
BJP vs Congress ; ಧಾರವಾಡದಲ್ಲಿ ಯಾರೇ ಗೆದ್ದರೂ ದಾಖಲೆ!
ICC ಚಾಂಪಿಯನ್ಸ್ ಟ್ರೋಫಿ ಆಡದಿದ್ದರೆ ಭಾರತ ತಂಡದ ಮೇಲೆ ಪರಿಣಾಮ: ಪಾಕ್ನ ರಶೀದ್ ಲತೀಫ್
Sunidhi Chauhan: ಹಾಡುತ್ತಿರುವಾಗಲೇ ಖ್ಯಾತ ಗಾಯಕಿ ಮೇಲೆ ಬಾಟಲಿ ಎಸೆದ ಅಭಿಮಾನಿ
Nijjar ಕೇಸ್ ತನಿಖೆ ಮೂವರ ಬಂಧನಕ್ಕೆ ಮುಕ್ತಾಯವಾಗಿಲ್ಲ: ಕೆನಡಾ ಪ್ರಧಾನಿ
Pen drive Case; ಹಾಲಿ ಮಹಿಳಾ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು: ಸಿ.ಟಿ. ರವಿ