ಕರಾವಳಿ ಅಭಿವೃದ್ಧಿಗಾಗಿ “ಪ್ರಾಧಿಕಾರ’; 2,500 ಕೋ.ರೂ ನಿಗದಿ
ಕರಾವಳಿಗೆ ಪ್ರತ್ಯೇಕ "ದಶ ಸಂಕಲ್ಪ' ಪ್ರಣಾಳಿಕೆ ಘೋಷಣೆ
Team Udayavani, Jan 23, 2023, 6:13 AM IST
ಮಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರಾವಳಿ ಪ್ರದೇಶದ ಸಮಗ್ರ ಅಭಿವೃದ್ಧಿಗಾಗಿ 10 ಅಂಶಗಳ “ದಶ ಸಂಕಲ್ಪ’ದ ಪ್ರತ್ಯೇಕ ಪ್ರಣಾಳಿಕೆಯನ್ನು ರವಿವಾರ ಮಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಪ್ರಜಾ ಧ್ವನಿ ಸಮಾವೇಶದಲ್ಲಿ ಪ್ರಕಟಿಸಲಾಗಿದೆ. ವಿ.ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಹೊಸ ಪ್ರಣಾಳಿಕೆಯನ್ನು ಘೋಷಿಸಿದರು.
ಕರಾವಳಿ ಪ್ರದೇಶಕ್ಕೆ ಉದ್ಯೋಗಾವಕಾಶ, ಹೂಡಿಕೆ, ಪ್ರವಾಸೋದ್ಯಮ ಹಾಗೂ ಕರಾವಳಿಯಲ್ಲಿ ಸೌಹಾರ್ದಯುತ ಬೆಳವಣಿಗೆಗಾಗಿ “ಕರಾವಳಿ ಅಭಿವೃದ್ಧಿ ಪ್ರಾಧಿಕಾರ’ ರಚಿಸಿ ವಾರ್ಷಿಕ 2,500 ಕೋ.ರೂ. ಮೊತ್ತ ವಿನಿಯೋಗ ಮಾಡಲಾಗುವುದು. ಕರಾವಳಿಯಲ್ಲಿ 1 ಲಕ್ಷ ಉದ್ಯೋಗವಕಾಶ ಕಲ್ಪಿಸುವ ಉದ್ದೇಶದಿಂದ ಮಂಗಳೂರನ್ನು ಐಟಿ ಹಾಗೂ ಗಾರ್ಮೆಂಟ್ ಇಂಡಸ್ಟ್ರಿ ಹಬ್ ಆಗಿ ಪರಿವರ್ತಿಸಲಾಗುವುದು ಎಂದು ಪ್ರಣಾಳಿಕೆಯಲ್ಲಿ ಉಲ್ಲೇಖೀಸಲಾಗಿದೆ.
ಬಿಲ್ಲವ, ಬಂಟ ಅಭಿವೃದ್ಧಿಗೆ “ನಿಗಮ’
ನೂತನವಾಗಿ “ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ’ ರಚಿಸಿ ವಾರ್ಷಿಕವಾಗಿ 250 ಕೋ.ರೂ.ಗಳಂತೆ 5 ವರ್ಷದಲ್ಲಿ 1,250 ಕೋ.ರೂ ವಿನಿಯೋಗಕ್ಕೆ ಆದ್ಯತೆ ಹಾಗೂ ಬಂಟ ಸಮುದಾಯದ ಅಭಿವೃದ್ಧಿಗಾಗಿ “ಬಂಟ್ ಅಭಿವೃದ್ಧಿ ನಿಗಮ’ ರಚಿಸಿ ವಾರ್ಷಿಕ 250 ಕೋ.ರೂ.ಗಳಂತೆ 5 ವರ್ಷಕ್ಕೆ 1,250 ಕೋ.ರೂ. ನಿಗದಿ ಮಾಡಲು ಉದ್ದೇಶಿಸಲಾಗಿದೆ.
ಅಡಿಕೆಗೆ ಬಾಧಿಸಿರುವ ಹಳದಿ ಎಲೆರೋಗ ಹಾಗೂ ಇತರ ರೋಗಗಳ ಕುರಿತ ಅಧ್ಯಯನ ಹಾಗೂ ಅಡಿಕೆ ಮಾರುಕಟ್ಟೆ ಬಲಪಡಿಸಲು 50 ಕೋ.ರೂ.ಗಳನ್ನು ವಿನಿಯೋಗಿಸಲಾಗುತ್ತದೆ. ಪ್ರತೀ ಗ್ರಾ. ಪಂ.ನಲ್ಲಿ ನಿಗದಿತ ಅನುದಾನ ಹಾಗೂ “ಶ್ರೀ ಸ್ವಾಮಿ ವಿವೇಕಾನಂದ ಕೋಮು ಹಾಗೂ ಸಾಮಾಜಿಕ ಸೌಹಾರ್ದ ಸಮಿತಿಯನ್ನು ರಚಿಸಲಾಗುವುದು ಎಂದು ಪ್ರಣಾ ಳಿಕೆಯಲ್ಲಿ ಘೋಷಿಸಲಾಗಿದೆ.
ಮೊಗವೀರರ ಅಭಿವೃದ್ಧಿಗೆ “ಪಂಚ’ ಸೂತ್ರ
ಪ್ರತೀ ಮೀನುಗಾರರಿಗೆ 10 ಲಕ್ಷ ರೂ.ಗಳ ವಿಮಾ ಸೌಲಭ್ಯ, ಮೀನುಗಾರ ಮಹಿಳೆಯರಿಗೆ 1 ಲಕ್ಷ ರೂ. ಬಡ್ಡಿರಹಿತ ಸಾಲ, ಸುಸಜ್ಜಿತ ಮೀನುಗಾರಿಕಾ ಬೋಟ್ ಖರೀದಿಗೆ 25 ಲಕ್ಷ ರೂ.ವರೆಗೆ ಸಬ್ಸಿಡಿ (ಶೇ.25ರ ವರೆಗೆ), ಡೀಸೆಲ್ ಸಬ್ಸಿಡಿಯನ್ನು ಪ್ರತೀ ಲೀಟರ್ಗೆ 10.71 ರೂ.ಗಳಿಂದ 25 ರೂ.ವರೆಗೆ ಹೆಚ್ಚಿಸುವುದು ಮತ್ತು ಪ್ರಸ್ತುತ 300 ಲೀ.ದೊರೆಯುವ ಡೀಸೆಲ್ ಪ್ರಮಾಣವನ್ನು 500 ಲೀ.ಗೆ ಏರಿಕೆ ಮಾಡಲಾಗುತ್ತದೆ ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪ್ರಕಟಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ