ಮಂಗಳೂರು: ಕಾರಾಗೃಹ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳ ಪದಕ
Team Udayavani, Feb 1, 2023, 6:15 AM IST
ಮಂಗಳೂರು : ಕಾರಾಗೃಹ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸು ತ್ತಿರುವ ಮಂಗಳೂರು ಹಾಗೂ ಉಡುಪಿ ಜಿಲ್ಲೆಯ ವಿವಿಧ ವೃಂದದ ಅಧಿಕಾರಿಗಳ ಸೇವೆ ಪರಿಗಣಿಸಿ 2021ನೇ ಸಾಲಿನ ಮುಖ್ಯಮಂತ್ರಿಯವರ ಪದಕ ಪ್ರಕಟಿಸಲಾಗಿದೆ.
ಉಡುಪಿ ಜಿಲ್ಲಾ ಕಾರಾಗೃಹದ ಸಹಾಯಕ ಜೈಲರ್ ಪುಟ್ಟಣ್ಣ ಆಚಾರಿ, ಮಂಗಳೂರು ಜಿಲ್ಲಾ ಕಾರಾಗೃಹದ ಸಹಾಯಕ ಜೈಲರ್ ಬಸಪ್ಪ ದೇವೆಂದ್ರಪ್ಪ ತವರಿ, ಮುಖ್ಯ ವೀಕ್ಷಕರಾದ ವಿಠಲ ಮಲಕಪ್ಪ ಕೊಂಡಗೋಳಿ, ಇಸ್ಮಾಯಿಲ್ ಜಬೀವುಲ್ಲ ಐ. ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿದ್ದಾರೆ.