ಸಿಕ್ಕಿಮೀಸ್ ನೇಪಾಲಿಗರು ವಲಸಿಗರಲ್ಲ: ಸುಪ್ರೀಂ ಕೋರ್ಟ್
Team Udayavani, Feb 9, 2023, 6:30 AM IST
ಹೊಸದಿಲ್ಲಿ: ಸಿಕ್ಕಿಂನಲ್ಲಿ ಇರುವ ನೇಪಾಲದವರನ್ನು (ಸಿಕ್ಕಿಮೀಸ್-ನೇಪಾಲಿಗರು) “ವಿದೇಶಿ ಮೂಲದ ವ್ಯಕ್ತಿಗಳು’ ಎಂದು ಜ.13ರಂದು ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಬುಧವಾರ ಬದಲಾವಣೆ ಮಾಡಿದೆ.
ಜತೆಗೆ ಅವರು ವಲಸಿಗರಲ್ಲ ಎಂದು ಸ್ಪಷ್ಟಪಡಿಸಿದೆ. ನ್ಯಾ|ಎಂ.ಆರ್ಶಾ ಹಾಗೂ ನ್ಯಾ|ಬಿ.ವಿ.ನಾಗರತ್ನ ಅವರ ನ್ಯಾಯಪೀಠ ಈ ಬಗ್ಗೆ ವಿಚಾರಣೆ ನಡೆಸಿತು. ಕೇಂದ್ರ ಸರಕಾರದ ಪರ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ “ಆದೇಶವನ್ನು ಸರಿಪಡಿಸಬೇಕು’ ಎಂದು ಕೋರಿಕೊಂಡರು.
ಸಿಕ್ಕಿಂನಲ್ಲಿ ಇರುವ ಹಳೆಯ ವಸಾಹತುದಾರರಿಗೆ ತೆರಿಗೆ ವಿನಾಯತಿ ವಿಸ್ತರಿಸುವ ಕುರಿತು ಸಲ್ಲಿಕೆಯಾಗಿದ್ದ ಅರ್ಜಿ ಸಂಬಂಧಿಸಿದಂತೆ ಜ.13ರಂದು ತೀರ್ಪು ನೀಡಿತ್ತು. ಈ ವೇಳೆ ಸಿಕ್ಕಿಮೀಸ್ ನೇಪಾಲಿಗರನ್ನು ವಲಸಿಗರು ಎಂದು ಉಲ್ಲೇಖೀಸಿತ್ತು. ಈ ಬಳಿಕ ಸಿಕ್ಕಿಂನಲ್ಲಿ ಪ್ರತಿಭಟನೆಗಳು ನಡೆದಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಂಗಾಲ ಶಿಕ್ಷಕರ ನೇಮಕ ಸಿಬಿಐ ತನಿಖೆಗೆ ಮಾತ್ರ ತಡೆ: ಸುಪ್ರೀಂ ಕೋರ್ಟ್
NEET; ಕೋಟಾದಲ್ಲಿ ಮತ್ತೊಬ್ಬ ಆಕಾಂಕ್ಷಿ ಆತ್ಮಹತ್ಯೆ: ಇದು 8ನೇ ಪ್ರಕರಣ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ