ದೆಹಲಿಯಲ್ಲಿ ಬೈಕ್‌ ಟ್ಯಾಕ್ಸಿಗೆ ಬಿತ್ತು ಬ್ರೇಕ್‌: ರ್‍ಯಾಪಿಡೋ, ಓಲಾ, ಊಬರ್‌ಗೆ ಪೆಟ್ಟು


Team Udayavani, Feb 21, 2023, 6:20 PM IST

ola

ನವದೆಹಲಿ: ದೆಹಲಿ ಸರ್ಕಾರ ಬೈಕ್‌ ಟ್ಯಾಕ್ಸಿಯನ್ನು ಬ್ಯಾನ್‌ ಮಾಡಿ ತಕ್ಷಣವೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ. ಈ ಮೂಲಕ ರ್ಯಾಫಿಡೋ, ಓಲಾ, ಊಬರ್‌ಗೆ ಮರ್ಮಾಘಾತವಾದಂತಿದೆ.

ದೆಹಲಿಯ ಸಾರಿಗೆ ಇಲಾಖೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಬಿಳಿ ಬಣ್ಣದ ನಂಬರ್‌ ಪ್ಲೇಟ್‌ ಹೊಂದಿರುವ (ಖಾಸಗಿ) ವಾಹನಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲಾಗುತ್ತಿದೆ. ಖಾಸಗಿ ವಾಹನವನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಬಳಸುವುದು 1988ರ ಮೋಟಾರು ವಾಹನ ಕಾಯ್ದೆಯನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಹೇಳಿದೆ. ಈ ಕಾರಣದಿಂದಲೇ ಬೈಕ್‌ ಟ್ಯಾಕ್ಸಿಯನ್ನು ಬ್ಯಾನ್‌ ಮಾಡಿರುವುದು ಕೇವಲ ಟ್ಯಾಕ್ಸಿ ಕಂಪನಿಗಳಿಗಷ್ಟೇ ಅಲ್ಲದೇ ಪ್ರಯಾಣಿಕರಿಗೂ ಬಿಸಿತುಪ್ಪವಾಗಿ ಪರಿಣಮಿಸಲಿದೆ.

ಸುಪ್ರೀಂ ಕೋರ್ಟ್‌ ಮಹಾರಾಷ್ಟ್ರದಲ್ಲಿ ಬೈಕ್‌ ಟ್ಯಾಕ್ಸಿಯನ್ನು ಬ್ಯಾನ್‌ ಮಾಡಿದ ಬೆನ್ನಲ್ಲೇ ಇದೀಗ ದೆಹಲಿ ಸರ್ಕಾರವೂ ಈ ಮಹತ್ವದ ಆದೇಶ ಹೊರಹಾಕಿದೆ. ಈ ಬೈಕ್‌ ಟ್ಯಾಕ್ಸಿಗಳು ನಿಯಮ ಉಲ್ಲಂಘಿಸುವುದಲ್ಲದೆ, ಇದರಲ್ಲಿ ತುರ್ತು ಕ್ರಮದ ಬಟನ್‌ ಇಲ್ಲದಿರುವುದರಿಂದ ಮಹಿಳೆಯರ ಸುರಕ್ಷತೆಗೆ ಇದು ಸೂಕ್ತವಲ್ಲ ಎಂಬುದಾಗಿಯೂ ಅಭಿಪ್ರಾಯ ಪಟ್ಟಿದೆ..

ಅಲ್ಲದೇ ಸರ್ಕಾರದ ಆದೇಶ ಮೀರಿ ಬೈಕ್‌ ಟ್ಯಾಕ್ಸಿ ಚಲಾಯಿಸಿದ್ರೆ 5,000 ರೂ ದಂಡವನ್ನೂ ವಿಧಿಸಲಾಗುತ್ತದೆ. ಎರಡನೇ ಬಾರಿಯೂ ಸಿಕ್ಕಿಬಿದ್ರೆ 10,000 ರೂ.ವರೆಗೆ ದಂಡ ವಿಧಿಸಲಾಗುವುದು ಎಂದು ದೆಹಲಿ ಸಾರಿಗೆ ಇಲಾಖೆ ಖಡಕ್‌ ಸೂಚನೆ ನೀಡಿದೆ.

ಒಲಾ, ಊಬರ್‌, ರ್‍ಯಾಪಿಡೋ ಇತ್ಯಾದಿ ಬೈಕ್‌ ಟ್ಯಾಕ್ಸಿಗಳೊಂದಿಗೆ ನೊಂದಾಯಿಸಲ್ಪಟ್ಟಿರುವ ಬೈಕ್‌ಗಳ ಮಾಹಿತಿಯನ್ನು ಸಾರಿಗೆ ಇಲಾಖೆ ಈಗಾಗಲೇ ತರಿಸಿಕೊಂಡಿದೆ. ತಪ್ಪು ಪುನರಾವರ್ತನೆಯಾದರೆ ಕನಿಷ್ಟ 3 ವರ್ಷಗಳವರೆಗೆ ಲೈಸೆನ್ಸ್‌ ನಿಷೇಧಗೊಳಿಸಲಾಗುವುದು ಎಂದು ಹೇಳಿದೆ.

ಬಾಡಿಗೆ ವಾಹನಗಳನ್ನು ಓಡಿಸಬೇಕಿದ್ರೆ ರಿಜಿಸ್ಟ್ರೇಷನ್‌ ಮಾರ್ಕ್‌ ಜೊತೆಗೆ ಹಳದಿ ಬಣ್ಣದ ನಂಬರ್‌ ಪ್ಲೇಟ್‌ ಹೊಂದಿರಬೇಕು. ಪೋಲಿಸ್‌ ತಪಾಸಣೆ ಬಳಿಕ PSV ಬ್ಯಾಜ್‌ ನೀಡಲಾಗುತ್ತದೆ. ಅಲ್ಲದೇ ಡ್ರೈವರ್‌ಗಳು ವಿಶೇಷ ವ್ಯಕ್ತಿತ್ವ ತಪಾಸಣೆಗೂ ಒಳಗಾಗಬೇಕಾಗುತ್ತದೆ.

ಈ ಬಗ್ಗೆ ಹೊರಡಿಸಿರುವ ಆದೇಶದ ಪ್ರತಿಯನ್ನುದೆಹಲಿಯ ಸಾರಿಗೆ ಸಚಿವ ಕೈಲಾಷ್‌ ಗೆಹ್ಲೋಟ್‌ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಟಾಪ್ ನ್ಯೂಸ್

Kundapura ರಾಟೆಗೆ ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

Kundapura ರಾಟೆಗೆ ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

1-weewqe

IPL; ಮುಂಬೈಗೆ ನಿರಾಶಾದಾಯಕ ಅಂತ್ಯ: ಲಕ್ನೋಗೆ ಜಯ

PM Modi ಮತ ಹಾಕಿದವರ ಆಸ್ತಿ ವೋಟ್‌ ಜೆಹಾದ್‌ ಮಾಡಿದವರಿಗೆ

PM Modi ಮತ ಹಾಕಿದವರ ಆಸ್ತಿ ವೋಟ್‌ ಜೆಹಾದ್‌ ಮಾಡಿದವರಿಗೆ

ಕಾರಡ್ಕ ಅಗ್ರಿಕಲ್ಚರಿಸ್ಟ್‌ ಸೊಸೈಟಿ ವಂಚನೆ ಪ್ರಕರಣ: ಬಂಧಿತರಿಗೆ ರಿಮಾಂಡ್‌

ಕಾರಡ್ಕ ಅಗ್ರಿಕಲ್ಚರಿಸ್ಟ್‌ ಸೊಸೈಟಿ ವಂಚನೆ ಪ್ರಕರಣ: ಬಂಧಿತರಿಗೆ ರಿಮಾಂಡ್‌

Road Mishap ಪರಸ್ಪರ ಢಿಕ್ಕಿ; ವಾಹನಗಳು ಜಖಂ

Road Mishap ಪರಸ್ಪರ ಢಿಕ್ಕಿ; ವಾಹನಗಳು ಜಖಂ

Siddaramaiah ಬರ ಪರಿಹಾರದ ಮೊತ್ತ ಸಾಲಕ್ಕೆ ಹೊಂದಾಣಿಕೆ ಬೇಡ

Siddaramaiah ಬರ ಪರಿಹಾರದ ಮೊತ್ತ ಸಾಲಕ್ಕೆ ಹೊಂದಾಣಿಕೆ ಬೇಡ

Farmers ಹಣ ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಸೂಚಿಸಿ: ವಿಪಕ್ಷ ನಾಯಕ ಆರ್‌. ಅಶೋಕ್‌

Farmers ಹಣ ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಸೂಚಿಸಿ: ವಿಪಕ್ಷ ನಾಯಕ ಆರ್‌. ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PM Modi ಮತ ಹಾಕಿದವರ ಆಸ್ತಿ ವೋಟ್‌ ಜೆಹಾದ್‌ ಮಾಡಿದವರಿಗೆ

PM Modi ಮತ ಹಾಕಿದವರ ಆಸ್ತಿ ವೋಟ್‌ ಜೆಹಾದ್‌ ಮಾಡಿದವರಿಗೆ

Rain 2

Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ

air india

Delhi;ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಬೆಂಕಿ: ದೆಹಲಿಯಲ್ಲಿ ತುರ್ತು ಲ್ಯಾಂಡಿಂಗ್

Minchu

Goa ;ಬೀಚ್ ನಲ್ಲಿ ಸಿಡಿಲಿನ ಆಘಾತಕ್ಕೆ ಕೇರಳದ ಪ್ರವಾಸಿಗ ಮೃತ್ಯು

Swati Maliwal Arvind Kejriwal’s aide repeatedly kicked her in stomach

AAP Leader ಬಿಭವ್ ಕುಮಾರ್ ನನ್ನ ಕೆನ್ನೆಗೆ ಹೊಡೆದು, ಎದೆಗೆ ಒದ್ದರು..; ಸ್ವಾತಿ ಮಲಿವಾಲ್

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

Kundapura ರಾಟೆಗೆ ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

Kundapura ರಾಟೆಗೆ ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

1-weewqe

IPL; ಮುಂಬೈಗೆ ನಿರಾಶಾದಾಯಕ ಅಂತ್ಯ: ಲಕ್ನೋಗೆ ಜಯ

PM Modi ಮತ ಹಾಕಿದವರ ಆಸ್ತಿ ವೋಟ್‌ ಜೆಹಾದ್‌ ಮಾಡಿದವರಿಗೆ

PM Modi ಮತ ಹಾಕಿದವರ ಆಸ್ತಿ ವೋಟ್‌ ಜೆಹಾದ್‌ ಮಾಡಿದವರಿಗೆ

ಕಾರಡ್ಕ ಅಗ್ರಿಕಲ್ಚರಿಸ್ಟ್‌ ಸೊಸೈಟಿ ವಂಚನೆ ಪ್ರಕರಣ: ಬಂಧಿತರಿಗೆ ರಿಮಾಂಡ್‌

ಕಾರಡ್ಕ ಅಗ್ರಿಕಲ್ಚರಿಸ್ಟ್‌ ಸೊಸೈಟಿ ವಂಚನೆ ಪ್ರಕರಣ: ಬಂಧಿತರಿಗೆ ರಿಮಾಂಡ್‌

Sullia ಬೇಂಗಮಲೆ: ಚರಂಡಿಗೆ ಬಿದ್ದ ಕಾರು

Sullia ಬೇಂಗಮಲೆ: ಚರಂಡಿಗೆ ಬಿದ್ದ ಕಾರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.