ಹಳ್ಳಿಗಳಲ್ಲಿ ಬೆಳೆಯಲಿ ಆಧುನಿಕ ರಂಗಭೂಮಿ; ಶೇಷಗಿರಿಯ ಪ್ರಭು

ಕಲೆಯನ್ನು ಬೆಳೆಸುವ ಅವಕಾಶ ಮಾಡಿಕೊಡುವುದೇ ವಿಶ್ವರಂಗಭೂಮಿ ದಿನಾಚರಣೆಯ ಉದ್ದೇಶ

Team Udayavani, Mar 31, 2023, 6:38 PM IST

ಹಳ್ಳಿಗಳಲ್ಲಿ ಬೆಳೆಯಲಿ ಆಧುನಿಕ ರಂಗಭೂಮಿ; ಶೇಷಗಿರಿಯ ಪ್ರಭು

ಹಾವೇರಿ: ನಗರಗಳಿಗಿಂತ ಹಳ್ಳಿಗಳಲ್ಲಿ ಆಧುನಿಕ ರಂಗಭೂಮಿ ಬೆಳೆಯಬೇಕು. ನಾಟಕ ಬದುಕುವುದನ್ನು ಮತ್ತು ಸಂಕುಚಿತ ಪ್ರವೃತ್ತಿಗಳನ್ನು ಮೀರಿ ಸಮಾಜದಲ್ಲಿ ಬೆರೆಯುವುದನ್ನು ಹೇಳಿಕೊಡುತ್ತದೆ ಎಂದು ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ರಂಗಕರ್ಮಿ ಶೇಷಗಿರಿಯ ಪ್ರಭು ಗುರಪ್ಪನವರ ಹೇಳಿದರು.

ನಗರದ ತೋಟದಯಲ್ಲಾಪುರ ರಸ್ತೆಯಲ್ಲಿರುವ ಮೈಲಾರ ಮಹದೇವ ಸಭಾಭವನದಲ್ಲಿ ಜಿಲ್ಲಾ ಕಲಾ ಬಳಗ ಮತ್ತು ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಎನ್‌ಎಸ್‌ಎಸ್‌ ಘಟಕದ ಆಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಐವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ನಿವೃತ್ತ ಮುಖ್ಯೋಪಾಧ್ಯಾಯ, ಹಿರಿಯ ಹವ್ಯಾಸಿ ನಟ ಸಿ.ಎಸ್‌. ಮರಳಿಹಳ್ಳಿ, ಯಕ್ಷ ರಂಗಭೂಮಿಯ ಪ್ರೊ.ಶಮಂತಕುಮಾರ ಕೆ.ಎಸ್‌., ರಂಗ ಸಂಗೀತಕಾರ ಹನುಮಂತಪ್ಪಾ ಕರವಾಳಿ, ಶೇಷಗಿರಿಯ ಯುವ ರಂಗಕರ್ಮಿ ಸಣ್ಣಪ್ಪ ಗೊರವರ ಹಾಗೂ ರಂಗ ಗಾಯನದ ಮಹಾಂತೇಶ ಮರಿಗೂಳಪ್ಪನವರ ಅವರಿಗೆ ಆಕರ್ಷಕ ಫಲಕ ನೀಡಿ ಸನ್ಮಾನಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಸಿ.ಜಿ.ಕೆ. ರಂಗ ಪ್ರಶಸ್ತಿ ಪುರಸ್ಕೃತ ಸಿದ್ದಪ್ಪ ರೊಟ್ಟಿ ಮಾತನಾಡಿ, ಹಳ್ಳಿಗಾಡಿನ ನನ್ನಂಥ ರಂಗಕಲಾವಿದ ಜಿಲ್ಲಾ ಕೇಂದ್ರದಲ್ಲಿ ನಡೆಯುತ್ತಿರುವ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಲು ರಂಗಭೂಮಿ ಕಾರಣ. ಜೀವನದ ಕನ್ನಡಿಯೇ ರಂಗಭೂಮಿ ಎಂದರು.

ಸಮಾರಂಭದ ಸಂಯೋಜಕ ಹಿರಿಯ ಕಲಾವಿದ ಕೆ.ಆರ್‌. ಹಿರೇಮಠ ಮಾತನಾಡಿ, ಗಡಿ, ಜಾತಿ, ಮತ, ಪಂಥಗಳನ್ನು ಮೀರುವುದನ್ನು ಕಲಿಸುವುದೇ ನಾಟಕ. ಗ್ರಾಮ, ನಗರಗಳ ಭೇದ-ಭಾವ ಅಳಿಸಿ ರಂಗ ಚಿಂತನೆ ಮತ್ತು ಕಲೆಯನ್ನು ಬೆಳೆಸುವ ಅವಕಾಶ ಮಾಡಿಕೊಡುವುದೇ ವಿಶ್ವರಂಗಭೂಮಿ ದಿನಾಚರಣೆಯ ಉದ್ದೇಶ ಎಂದರು.

ಪ್ರಶಸ್ತಿ ಪುರಸ್ಕೃತರ ಪರವಾಗಿ ಸಿ.ಎಸ್‌. ಮರಳಿಹಳ್ಳಿ, ಶಮಂತಕುಮಾರ ಹಾಗೂ ಮರಿಗೂಳಪ್ಪನವರ ಮಾತನಾಡಿದರೆ, ಗಾಯಕ ಹನುಮಂತಪ್ಪ ಕರವಾಳಿ ಹಾಡು ಹಾಡಿ ರಂಜಿಸಿದರು.

ಈ ಸಂದರ್ಭದಲ್ಲಿ ಶಂಕರ ತುಮ್ಮಣ್ಣನವರ ಅವರ ಭೂಕಂಪ ಏಕಾಂಕ ನಾಟಕ ಕುರಿತು ಡಾ. ಮಹಾದೇವಿ ಕಣವಿ ಮಾತನಾಡಿ, ಪರಿಸರ ಜೀತ ಹಾಗೂ ಶೋಷಣೆ ಕುರಿತು ಬರೆದ ಭೂಕಂಪ ಪ್ರಬುದ್ಧ ನಾಟಕ ಎಂದರು. ನಾಟಕಗಳ ಕೊರತೆ ಇರುವ ಈ ದಿನಗಳಲ್ಲಿ ಭೂಕಂಪ ಹೊಸ ನಾಟಕಕಾರರಿಗೆ ಪ್ರೇರಣೆಯಾಗಲಿ ಎಂದರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎನ್‌ಎಸ್‌ ಎಸ್‌ ಸಂಯೋಜಕ ಡಾ.ಶಿವಾನಂದ ಪಾಯಮಲ್ಲೆ, ಶೇಷಗಿರಿಯ ಕಲಾವಿದ ಜಮೀರ ಪಠಾಣ, ಈರಣ್ಣ ಬೆಳವಡಿ, ಕಲಾವಿದೆ ಲತಾ ಪಾಟೀಲ, ಶಿವಮೂರ್ತಿ, ಕರಿಯಪ್ಪ ಹಂಚಿನಮನಿ, ಲತಾ ಮರಿಗೂಳಪ್ಪನವರ ಇತರರು ಇದ್ದರು. ನಾಟಕಕಾರ ಶಂಕರ ತುಮ್ಮಣ್ಣ ನವರ ಅವರನ್ನು ಗೌರವಿಸಲಾಯಿತು.ಎನ್‌ಎಸ್‌ಎಸ್‌ ಶಿಬಿರದ ಚಟುವಟಿಕೆಗಳ ಪರಿಚಯವನ್ನು ಶಿಬಿರಾರ್ಥಿ ಆಕಾಶ ಪೂಜಾರ ಮಾಡಿದರು.ಮತ್ತೋಬ್ಬ ಶಿಬಿರಾರ್ಥಿ ಐಶ್ವರ್ಯ ಮಾನೇಗಾರ ವಿಶ್ವ ರಂಗಭೂಮಿ ಸಂದೇಶ ಓದಿದರು. ಪೃಥ್ವಿರಾಜ ಬೆಟಗೇರಿ ಕಾರ್ಯಕ್ರಮ ನಿರೂಪಿಸಿದರು. ಶಂಕರ ಬಡಿಗೇರ ವಂದಿಸಿದರು.

ಟಾಪ್ ನ್ಯೂಸ್

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

ಹಾವೇರಿ: ಕಾಂಗ್ರೆಸ್‌ ಗ್ಯಾರಂಟಿಗೆ ಬೆಲೆ ಇಲ್ಲ- ಬಸವರಾಜ ಬೊಮ್ಮಾಯಿ

ಹಾವೇರಿ: ಕಾಂಗ್ರೆಸ್‌ ಗ್ಯಾರಂಟಿಗೆ ಬೆಲೆ ಇಲ್ಲ- ಬಸವರಾಜ ಬೊಮ್ಮಾಯಿ

ರಾಣಿಬೆನ್ನೂರ: ಸನ್ಮಾರ್ಗ ತೋರುತ್ತಿವೆ ಮಠ-ಮಾನ್ಯಗಳು: ಹರಳಯ್ಯ ಶ್ರೀ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.