ಕೊಪ್ಪಳ: ಕೈ ಭದ್ರಕೋಟೆಯಾಗಿತ್ತು ಭತ್ತದ ‌ನಾಡು ಗಂಗಾವತಿ

ಪ್ರಸ್ತುತ ಕಾಂಗ್ರೆಸ್‌ ನಲ್ಲಿದ್ದು ಟಿಕೆಟ್‌ಗೆ ಪೈಪೋಟಿ ನಡೆಸುತ್ತಿದ್ದಾರೆ.

Team Udayavani, Apr 1, 2023, 4:56 PM IST

ಕೊಪ್ಪಳ: ಕೈ ಭದ್ರಕೋಟೆಯಾಗಿತ್ತು ಭತ್ತದ ‌ನಾಡು ಗಂಗಾವತಿ

ಕೊಪ್ಪಳ: ಭತ್ತದ ಕಣಜ ಎಂದೆನಿಸಿದ ಗಂಗಾವತಿ ವಿಧಾನ ಸಭಾ ಕ್ಷೇತ್ರದ ರಾಜಕೀಯ ಇತಿಹಾಸವು ಇಡೀ ರಾಜ್ಯದ ಗಮನ ಸೆಳೆದಿತ್ತು. ಒಂದು ಕಾಲಘಟ್ಟದಲ್ಲಿ ಕಾಂಗ್ರೆಸ್‌ ಭದ್ರಕೋಟೆ ಎಂದೆನಿಸಿದ್ದ ಈ ಕ್ಷೇತ್ರದಲ್ಲಿ ತಿರುಮಲ ದೇವರಾಯಲು, ಎಚ್‌.ಜಿ. ರಾಮುಲು, ಶ್ರೀರಂಗದೇವರಾಲು ಅವರು ರಾಜ್ಯದ ಅಗ್ರಗಣ್ಯ ನಾಯಕರಾಗಿ ಬೀಗಿದ್ದರು. ಕ್ರಮೇಣ ದಳದತ್ತ ಬಾಗಿದ್ದ ಈ ಕ್ಷೇತ್ರವು ಪ್ರಸ್ತುತ ಕಮಲಕ್ಕೆ ನೆಲೆ ನೀಡಿದೆ.

ಹೌದು. ಜಿಲ್ಲೆಯ ಇನ್ನುಳಿದ ಕ್ಷೇತ್ರಗಳಿಗೆ ಹೋಲಿಕೆ ಮಾಡಿದರೆ ಗಂಗಾವತಿ ವಿಧಾನಸಭಾ ಕ್ಷೇತ್ರದ ರಾಜಕೀಯ ಚರ್ಚೆಗಳೇ ಅತ್ಯಂತ ಬಿರುಸಿನಿಂದ ಕೂಡಿರುತ್ತವೆ. ಬಹುಪಾಲು ಈ ಭಾಗದಲ್ಲಿನ ನಾಯಕರುಗಳೇ ಹೆಚ್ಚಾಗಿ ಮಂತ್ರಿಗಿರಿ ದರ್ಬಾರ್‌ ನಡೆಸಿ ರಾಜ್ಯದ ಗಮನ ಸೆಳೆದಿದ್ದಾರೆ. 1957 ರಿಂದ 2018ರ ವರೆಗಿನ 15 ಚುನಾವಣೆಗಳಲ್ಲಿ ಈ ಕ್ಷೇತ್ರದ ವಿಧಾನಸಭಾ ಚುನಾವಣಾ ಲೆಕ್ಕಾಚಾರಗಳನ್ನು ಅವಲೋಕಿಸಿದಾಗ ಕ್ಷೇತ್ರದಲ್ಲಿ ಕಾಂಗ್ರೆಸ್‌ ಬರೋಬ್ಬರಿ 09 ಬಾರಿ ಗೆದ್ದು ಬೀಗಿದ್ದರೆ, ಜೆಡಿಎಸ್‌ 02 ಬಾರಿ, ಬಿಜೆಪಿ 02 ಬಾರಿ ಜೆಎನ್‌ಪಿ 01, ಪಕ್ಷೇತರರು 01 ಬಾರಿ ಗೆದ್ದಿರುವಂತಹ ಇತಿಹಾಸವಿದೆ.

ದೇಶಕ್ಕೆ ಸ್ವಾತಂತ್ರ್ಯ ದೊರೆತ ಕಾಲಘಟ್ಟದಲ್ಲಿ ಕಾಂಗ್ರೆಸ್‌ ಪ್ರಭಾವವೇ ಹೆಚ್ಚಿದ್ದ ವೇಳೆ ಗಂಗಾವತಿ ಕ್ಷೇತ್ರದಲ್ಲಿ 1957ರಲ್ಲಿ ದೇಸಾಯಿ ಭೀಮಸೇನ ರಾವ್‌ ಅವರು ಕಾಂಗ್ರೆಸ್‌ನಿಂದ ಸ್ಪ ರ್ಧಿಸಿ 12,862 ಮತಗಳನ್ನು ಪಡೆದು ಮೊದಲ ಬಾರಿಗೆ ಶಾಸಕರಾಗಿ ಗೆದ್ದು ಬೀಗಿದ್ದರು. 1962 ಹಾಗೂ 1967ರಲ್ಲಿ ಕಾಂಗ್ರೆಸ್‌ನಿಂದ ತಿರುಮಲ ದೇವರಾಯಲು ಗೆಲುವು ಕಂಡಿದ್ದರು.

1972ರಲ್ಲಿ ಎಚ್‌.ಆರ್‌.ರಾಮುಲು ಕಾಂಗ್ರೆಸ್‌ನಿಂದ ಗೆಲುವು ಕಂಡರೆ, 1974ರಲ್ಲಿ ಎಚ್‌.ಆರ್‌.ರಾಮುಲು ನಿಧನರಾದ ಹಿನ್ನೆಲೆಯಲ್ಲಿ ಈ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಿತು. ಉಪ ಚುನಾವಣೆಯಲ್ಲಿ ಅವರ ಪುತ್ರ ಹೆಚ್‌.ಜಿ.ರಾಮುಲು ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿ ಗೆದ್ದರು. 1978ರಲ್ಲಿ ಯಾದವರಾವ್‌ ಶೇಷರಾವ್‌ ಅವರು ಕಾಂಗ್ರೆಸ್‌ನಿಂದ ಗೆದ್ದರೆ, 1983ರಲ್ಲಿ ಕಾಂಗ್ರೆಸ್‌ ಭದ್ರಕೋಟೆ ಎನಿಸಿದ್ದ ಗಂಗಾವತಿ ಕ್ಷೇತ್ರ ಸೋಲು ಕಂಡಿತ್ತು.

ಆಗ ಎಚ್‌.ಎಸ್‌. ಮುರಳೀಧರ ಅವರು ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಕಂಡು ಕ್ಷೇತ್ರದಲ್ಲಿ ಮೊದಲ ಪಕ್ಷೇತರ ಶಾಸಕ ಎಂದೆನಿಸಿದರು. 1985ರಲ್ಲಿ ಜೆಎನ್‌ಪಿಯಿಂದ ಗೌಳಿ ಮಹಾದೇವಪ್ಪ ಗೆದ್ದಿದ್ದರು. 1989, 1994 ಹಾಗೂ 1999ರಲ್ಲಿ ಶ್ರೀರಂಗದೇವರಾಲು ಕಾಂಗ್ರೆಸ್‌ನಿಂದ ಸತತ ಗೆಲುವು ಸಾ ಧಿಸಿದ್ದಾರೆ. 2004ರಲ್ಲಿ ಜೆಡಿಎಸ್‌ ಖಾತೆ ತೆರೆದ ಇಕ್ಬಾಲ್‌ ಅನ್ಸಾರಿ ಅವರು ಗೆಲುವು ಕಂಡರೆ, 2008ರಲ್ಲಿ ಕಮಲದಿಂದ ಪರಣ್ಣ ಮುನವಳ್ಳಿ ಗೆದ್ದು ಬಿಜೆಪಿ ಖಾತೆ ತೆರೆದರು. ಮತ್ತೆ 2013ರಲ್ಲಿ ಇಕ್ಬಾಲ್‌ ಅನ್ಸಾರಿ ಗೆದ್ದರೆ, 2018ರಲ್ಲಿ ಮತ್ತೆ ಪರಣ್ಣ ಮುನವಳ್ಳಿ ಕಮಲ ಅರಳಿಸಿದ್ದಾರೆ.

ಪರಣ್ಣ 03, ಅನ್ಸಾರಿ 4 ಚುನಾವಣೆ: ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ ಅವರು 2004 ರಿಂದ ನಾಲ್ಕು ಚುನಾವಣೆಗಳನ್ನು ಎದುರಿಸಿದ್ದು, ಇವುಗಳಲ್ಲಿ ಎರಡು ಬಾರಿ ಜೆಡಿಎಸ್‌ನಿಂದ ಗೆಲುವು ಸಾ ಧಿಸಿದ್ದರೆ, ಒಂದು ಬಾರಿ ಜೆಡಿಎಸ್‌, ಮತ್ತೂಮ್ಮೆ ಕಾಂಗ್ರೆಸ್‌ನಿಂದ ಸೋಲು ಕಂಡಿದ್ದಾರೆ. ಇನ್ನು ಪರಣ್ಣ ಮುನವಳ್ಳಿ ಅವರು 2008 ರಿಂದ ಮೂರು ಚುನಾವಣೆಗಳನ್ನು ಎದುರಿಸಿ 02 ಬಾರಿ ಕಮಲದಿಂದ ಗೆಲುವು ಕಂಡು, 2013ರಲ್ಲಿ ಒಂದು ಬಾರಿ ಸೋಲು ಕಂಡಿದ್ದಾರೆ. ದಳದಲ್ಲೇ
ಅನ್ಸಾರಿ ತೇಲುತ್ತಾ ನಗೆ ಬೀರಿದ್ದರು. ಪ್ರಸ್ತುತ ಕಾಂಗ್ರೆಸ್‌ ನಲ್ಲಿದ್ದು ಟಿಕೆಟ್‌ಗೆ ಪೈಪೋಟಿ ನಡೆಸುತ್ತಿದ್ದಾರೆ. ಪರಣ್ಣ ಮುನವಳ್ಳಿ ಮತ್ತೆ ಕಮಲ ಅರಳಿಸುವ ಸಿದ್ಧತೆಯಲ್ಲಿದ್ದಾರೆ.

ಶ್ರೀರಂಗದೇವರಾಯಲು ಹ್ಯಾಟ್ರಿಕ್‌ ಸಾಧನೆ
ಆನೆಗೊಂದಿ ಮನೆತನದ ರಾಜವಂಶಸ್ಥ ಶ್ರೀ ರಂಗದೇವರಾಯಲು ಅವರು ಗಂಗಾವತಿ ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಸಾಧನೆ ಮಾಡಿರುವ ಏಕೈಕ ಶಾಸಕ ಎಂದೆನಿಸಿದ್ದಾರೆ. 15 ವಿಧಾನಸಭಾ ಚುನಾವಣೆ ಕಂಡಿರುವ ಗಂಗಾವತಿ ಕ್ಷೇತ್ರದಲ್ಲಿ ಇವರನ್ನು ಹೊರತು ಪಡಿಸಿ ಇನ್ನುಳಿದ ಯಾರೂ ಮೂರು ಬಾರಿ ಸತತ ಶಾಸಕರಾಗಿ ಗೆಲುವು ಕಂಡಿಲ್ಲ. ಕಾಂಗ್ರೆಸ್‌ ಪಕ್ಷ ಸತತ ಗೆಲುವು ಕಂಡಿದೆ. ಆದರೆ ಅಭ್ಯರ್ಥಿಗಳು ಬೇರೆ ಬೇರೆ ಇದ್ದಾರೆ. ಒಂದೇ ಅಭ್ಯರ್ಥಿಯಾಗಿದ್ದು ಮೂರು ಬಾರಿ ಗೆಲುವು ಕಂಡ ಏಕೈಕ ಶಾಸಕ ಎಂದೆನಿಸಿದ್ದಾರೆ. ಇದಲ್ಲದೇ ಕನಕಗಿರಿ ಕ್ಷೇತ್ರದಲ್ಲೂ ಇವರು ಕೆಲವು ಬಾರಿ ಗೆದ್ದಿದ್ದಾರೆ.

ಕೈ ಭದ್ರಕೋಟೆಗೆ ದಳ-ಕಮಲ ಲಗ್ಗೆ
ಒಂದು ಕಾಲಘಟ್ಟದಲ್ಲಿ ಗಂಗಾವತಿ ಕಾಂಗ್ರೆಸ್‌ ಭದ್ರಕೋಟೆ ಎನಿಸಿತ್ತು. ಕಾಂಗ್ರೆಸ್‌ ಹೈಕಮಾಂಡ್‌ನಿಂದ ಏನೇ ಸಂದೇಶ ಬಂದರೂ ಹೆಚ್‌. ಆರ್‌.ರಾಮುಲು, ಹೆಚ್‌.ಜಿ.ರಾಮುಲು ಅವರ ಮೂಲಕವೇ ಇತರೆ ಕ್ಷೇತ್ರಗಳಿಗೆ ಸಂದೇಶ ರವಾನೆಯಾಗುತ್ತಿತ್ತು. ಕೇಂದ್ರ ನಾಯಕರೊಂದಿಗೆ ನೇರ ಸಂಪರ್ಕ ಹೊಂದಿದ್ದ ಹೆಚ್‌.ಜಿ. ರಾಮುಲು ಅವರು ಇಲ್ಲಿ ತಮ್ಮ ಅಧಿಪತ್ಯ ಸಾಧಿಸಿದ್ದರು. ಆದರೆ ಈಗ ಇದೇ ಕ್ಷೇತ್ರವು ದಳ, ಕಮಲದ ಪಾಲಾದ ಇತಿಹಾಸ ಮರೆಯುವಂತಿಲ್ಲ.

*ದತ್ತು ಕಮ್ಮಾರ

 

ಟಾಪ್ ನ್ಯೂಸ್

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

12-prakash-raj

April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.