ಮೀನಿಗೆ ಸಿಗದ ಸೂಕ್ತ ದರ: ನಿರ್ವಹಣೆ ಸಂಕಷ್ಟ; ದಡ ಸೇರುತ್ತಿರುವ ಟ್ರಾಲ್‌, ಪರ್ಸಿನ್‌ ಬೋಟುಗಳು


Team Udayavani, Apr 16, 2023, 1:52 PM IST

ಮೀನಿಗೆ ಸಿಗದ ಸೂಕ್ತ ದರ: ನಿರ್ವಹಣೆ ಸಂಕಷ್ಟ; ದಡ ಸೇರುತ್ತಿರುವ ಟ್ರಾಲ್‌, ಪರ್ಸಿನ್‌ ಬೋಟುಗಳು

ಮಹಾನಗರ: ಸಮುದ್ರದಲ್ಲಿ ಗುಣಮಟ್ಟದ ಮೀನುಗಳ ಕೊರತೆ, ಸಿಕ್ಕಿದ ಮೀನುಗಳಿಗೆ ಸೂಕ್ತ ಬೆಲೆ ಸಿಗದೆ ನಿರ್ವಹಣೆ ಸಾಧ್ಯವಾಗದೆ ಮೀನುಗಾರರು ತಮ್ಮ ಬೋಟುಗಳನ್ನು ಕಡಲಿಗೆ ಇಳಿಸಲು ಹಿಂಜರಿಯುತ್ತಿದ್ದಾರೆ. ಹೀಗಾಗಿ ಕೆಲವು ದಿನಗಳಿಂದ ಮಂಗಳೂರು ದಕ್ಕೆಯಲ್ಲಿ ಆಳ ಸಮುದ್ರ ಮೀನುಗಾರಿಕೆಯ ದೋಣಿಗಳು ಮಳೆಗಾಲದ ಮೀನುಗಾರಿಕೆನಿಷೇಧಕ್ಕೆ ಮುಂಚಿತವಾಗಿಯೇ ದಡ ಸೇರಲಾರಂಭಿಸಿವೆ.

ಆಳ ಸಮುದ್ರಕ್ಕೆ ತೆರಳುವ ಬೋಟು ಗಳಿಗೆ ಕಾಣೆ, ಪಯ್ಯ ಮೊದಲಾದ ಗುಣಮಟ್ಟದ ಮೀನು ಸಿಗುತ್ತಿಲ್ಲ. ಉಳಿದಂತೆ ಇತರ ಸಾಮಾನ್ಯ ಮೀನುಗಳು ದೊರೆಯುತ್ತಿದ್ದರೂ ಬೆಲೆ ಸಿಗುತ್ತಿಲ್ಲ. ವಿದೇಶಗಳಿಂದ ಮೀನಿಗೆ ಬೇಡಿಕೆ ಕುಸಿದಿರುವ ಕಾರಣ ಹೇರಳವಾಗಿ ರಫ್ತಾಗುತ್ತಿದ್ದ ರಾಣಿ ಮೀನು, ರಿಬ್ಬನ್‌ ಫಿಶ್‌, ಬೂತಾಯಿ, ಬಂಗುಡೆ ಮೊದಲಾದವುಗಳಿಗೆ ಸೂಕ್ತ ಬೆಲೆ ಇಲ್ಲ. ಹವಾಮಾನ ವೈಪರೀತ್ಯ ಅವೈಜ್ಞಾನಿಕ ಮೀನುಗಾರಿಕೆಯೂ ಮೀನಿನ ದರ ಇಳಿಕೆಗೆ ಕಾರಣವಾಗುತ್ತಿದೆ. ಹಾಗಾಗಿ ಬಹುತೇಕ ಬೋಟುಗಳವರು ಖರ್ಚುವೆಚ್ಚ ಸರಿದೂಗಿಸಲು ಸಾಧ್ಯವಾಗದೆ ಬೋಟುಗಳನ್ನು ದಡ ಸೇರಿಸುತ್ತಿದ್ದಾರೆ ಎನ್ನುವುದು ಮೀನುಗಾರರ ಅಭಿಪ್ರಾಯ.

ಕಳೆದ ವರ್ಷ ಈ ಮೀನುಗಾರಿಕೆ ಅವಧಿಯಲ್ಲಿ ಕೆಜಿಗೆ 70 ರೂ.ಗಳಿದ್ದ ರಾಣಿ ಮೀನು ಈ ಬಾರಿ 37 ರೂ.ಗಳಿಗೆ ಮಾರಾಟವಾಗುತ್ತಿದೆ. ಗುಣಮಟ್ಟದ ಮೀನುಗಳ ಕೊರತೆ, ಸಿಕ್ಕ ಮೀನಿಗೆ ಸರಿಯಾದ ಬೆಲೆ ಸಿಗದಿರುವ ನಡುವೆಯೇ, ಡೀಸೆಲ್‌ ಬೆಲೆ ಏರಿಕೆ, ಇತರ ಖರ್ಚು ವೆಚ್ಚಗಳನ್ನು ಸರಿತೂಗಿಸಿಕೊಂಡು ನಷ್ಟದಲ್ಲಿ ಆಳ ಸಮುದ್ರ ಮೀನುಗಾರಿಕೆ ನಡೆಸುವುದಾರೂ ಹೇಗೆ? ಡಿಸೆಂಬರ್‌ ತಿಂಗಳವರೆಗೆ ಬೋಟುಗಳಿಗೆ ಉತ್ತಮ ರೀತಿಯಲ್ಲಿ ಮೀನು ಸಿಗುತ್ತಿದ್ದು, ಜನವರಿಯಿಂದೀಚೆಗೆ ಮೀನಿನ ಪ್ರಮಾಣ ದಲ್ಲಿಯೂ ಕುಸಿತವಾಗಿದೆ ಎನ್ನುವುದು ಮೀನುಗಾರರು ಅಳಲು.

ಮೀನಿನ ದರ ಶೇ. 40ರಷ್ಟು ಕುಸಿತ
ಚೀನ, ಸ್ವಿಟ್ಜರ್‌ಲ್ಯಾಂಡ್‌, ಮಲೇಷ್ಯಾ, ಥಾಯ್ಲೆಂಡ್‌ ಸಹಿ ತ ಇತರ ರಾಷ್ಟ್ರಗಳಿಗೆ ರಫ್ತಾಗುತ್ತಿದ್ದ ಮೀನಿನ ಪ್ರಮಾಣದಲ್ಲಿ ಇಳಿಕೆಯಾಗಿದೆ. ಹಿಂದೆ ಭಾರೀ ಪ್ರಮಾಣದಲ್ಲಿ ರಫ್ತಾಗುತ್ತಿದ್ದ ರಾಣಿ ಮೀನಿಗೆ ಬೇಡಿಕೆ ಇಲ್ಲ ಎಂದು ರಫ್ತುದಾರರು ಹೇಳುತ್ತಿದ್ದು, ಅರ್ಹ ಬೆಲೆ ಸಿಗುತ್ತಿಲ್ಲ. ಹೀಗಾಗಿ ಈಗಾಗಲೇ ಶೇ. 70 ಟ್ರಾಲ್‌, ಶೇ.40ರಷ್ಟು ಪರ್ಸಿನ್‌ ಬೋಟುಗಳು ಮೀನುಗಾರಿಕೆಗೆ ತೆರಳುತ್ತಿಲ್ಲ. ಕಳೆದ ಡಿಸೆಂಬರ್‌ವರೆಗೆ ಮೀನಿನ ಕ್ಯಾಚಿಂಗ್‌ ಮೇಲ್ನೋಟಕ್ಕೆ ಉತ್ತಮವಾಗಿದ್ದರೂ ಗುಣಮಟ್ಟದ ಮೀನು ಸಿಗದೆ, ಬೋಟು ಮಾಲಕರು ಕಂಗೆಟ್ಟಿದ್ದಾರೆ. ಈ ವರ್ಷ ಮೀನಿನ ದರದಲ್ಲಿ ಶೇ. 40ರಷ್ಟು ಕುಸಿತವಾಗಿದೆ. ರಿಬ್ಬನ್‌, ಬೂತಾಯಿ, ಬಂಗುಡೆ ಮೀನು ಇಳುವರಿ ಇತ್ತಾದರೂ, ಕೆಜಿಗೆ 160 ರೂ. ಸಿಗುತ್ತಿದ್ದ ಬಂಗುಡೆ ಮೀನನ್ನು ಈ ಬಾರಿ 50 ರೂ.ನಿಂದ 60 ರೂ.ಗಳಿಗೆ ಮಾರಾಟ ಮಾಡಬೇಕಾದ ಪರಿಸ್ಥಿತಿಯಿಂದ ಬೋಟು ಮಾಲಕರು ಕಂಗೆಟ್ಟಿದ್ದಾರೆ ಎಂದು ದ.ಕ. ಜಿಲ್ಲೆಯ ಆಳ ಸಮುದ್ರ ಮೀನುಗಾರರ ಮುಖಂಡರಾದ ಮೋಹನ್‌ ಬೆಂಗ್ರೆ ತಿಳಿಸಿದ್ದಾರೆ.

ಗುಣಮಟ್ಟದ ಮೀನು ಲಭಿಸುತ್ತಿಲ್ಲ
ಕಡಲ ಮೀನುಗಾರಿಕೆಗೆ ತೆರಳುವವರಿಗೆ ಗುಣಮಟ್ಟದ ಮೀನು ಲಭ್ಯವಾಗುತ್ತಿಲ್ಲ. ಲಭ್ಯವಾದ ಮೀನಿಗೆ ಸೂಕ್ತ ಬೆಲೆಯೂ ಸಿಗುತ್ತಿಲ್ಲ. ಹವಾಮಾನ ವೈಪರೀತ್ಯದ ಜತೆಗೆ ಕಡಲು ಹಲವು ಕಾರಣಗಳಿಗೆ ಕಲುಷಿತವಾಗುತ್ತಿದೆ, ಮೀನು ಸಂತತಿ ವಿನಾಶದಂಚಿಗೆ ಸಾಗುತ್ತಿದೆ. ವಿದೇಶಗಳಲ್ಲಿ ಕಡಲು ಸ್ವತ್ಛಗೊಳಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿರುತ್ತದೆ. ಆದರೆ ನಮ್ಮಲ್ಲಿ ಕಲುಷಿತ ನೀರು, ತ್ಯಾಜ್ಯ ಉಗಮ ಸ್ಥಾನಗಳಿಂದಲೇ ನದಿಗಳ ಒಡಲು ಸೇರಿ ಕಡಲ ಪಾಲಾಗುತ್ತಿದೆ. ಉಳಿದಂತೆ ಕಡಲು ಸೇರುವ ನಾನಾ ರೀತಿಯ ತ್ಯಾಜ್ಯಗಳಿಂದ ಕಡಲ ಸಂಪತ್ತು ಮಲಿನವಾಗುತ್ತಿದೆ. ಪೌಷ್ಟಿಕ ಆಹಾರವಾದ ಉತ್ತಮ ಗುಣಮಟ್ಟದ ಮೀನುಗಳು ಸಿಗದಿದ್ದರೆ ಆಳ ಸಮುದ್ರ ಮೀನುಗಾರಿಕೆ ನಡೆಸುವುದು ಬಲು ಕಷ್ಟ. ಈ ಬಗ್ಗೆ ಸರಕಾರವೇ ಗಮನ ಹರಿಸಿ ಕಡಲ ಸಂಪತ್ತು ಸಂರಕ್ಷಿಸುವ ಜತೆಗೆ ಮೀನುಗಾರರ ಬದುಕಿಗೆ ಭದ್ರತೆಯನ್ನು ಒದಗಿಸಬೇಕು. -ಶಶಿಕುಮಾರ್‌ ಬೆಂಗ್ರೆ, ಅಧ್ಯಕ್ಷರು, ಕರ್ನಾಟಕ ಪಸೀìನ್‌ ಮೀನುಗಾರರ ಸಂಘ

ಮಾಹಿತಿ ಬಂದಿಲ್ಲನಿರ್ವಹಣೆ ಸಾಧ್ಯವಾಗದೆ ಆಳ ಮೀನುಗಾರಿಕೆ ಬೋಟುಗಳು ದಡ ಸೇರಿರುವ ಬಗ್ಗೆ ಇಲಾಖೆಗೆ ಯಾವುದೇ ಮಾಹಿತಿ ಬಂದಿಲ್ಲ.
– ಹರೀಶ್‌ ಕುಮಾರ್‌, ಉಪ ನಿರ್ದೇಶಕರು, ಮೀನುಗಾರಿಕೆ ಇಲಾಖೆ, ಮಂಗಳೂರು

ಟಾಪ್ ನ್ಯೂಸ್

20

Sandalwood: ದರ್ಶನ್‌ ʼಡೆವಿಲ್‌ʼಗೆ ಕರಾವಳಿ ಬೆಡಗಿ ರಚನಾ ರೈ ನಾಯಕಿ; ಫಸ್ಟ್‌ ಪೋಸ್ಟರ್‌ ಔಟ್

satish jarakiholi

Belagavi,ಚಿಕ್ಕೋಡಿ ಸೇರಿ 14 ರಿಂದ 17 ಸೀಟು ಕಾಂಗ್ರೆಸ್ ಗೆಲ್ಲಲಿದೆ: ಸತೀಶ್ ಜಾರಕಿಹೊಳಿ

Shivraj tangadagi

Prajwal Revanna ಬಂಧನಕ್ಕೆ ಕೇಂದ್ರ ಸರಕಾರದಿಂದ ಅಸಹಕಾರ: ಸಚಿವ ತಂಗಡಗಿ

1-qwewe

Odisha ಜನರು ನಿಂದನೀಯ ಭಾಷೆ ಮೆಚ್ಚಿಕೊಳ್ಳುವುದಿಲ್ಲ:ಬಿಜೆಪಿಗೆ ಪಟ್ನಾಯಕ್ ತಿರುಗೇಟು

6-rabakavi

Rabkavi Banhatti: ಶತಮಾನದ ಸೋಮವಾರಪೇಟೆ ಸಮಸ್ತ ದೈವ ಮಂಡಳಿಯ ಗರಡಿ ಮನೆ

Ramanagara: ಈಜಲು ಹೋಗಿ‌ದ್ದ ಮೂವರು ಮಕ್ಕಳು ನೀರುಪಾಲು

Ramanagara: ಈಜಲು ಹೋಗಿ‌ದ್ದ ಮೂವರು ಮಕ್ಕಳು ನೀರುಪಾಲು

Magadi; ಕಾರಿಗೆ ಅಡ್ಡ ಬಂದ ಕುದುರೆ, ವಾಹನಗಳ ಸರಣಿ ಅಪಘಾತ; ಐವರಿಗೆ ಗಂಭೀರ ಗಾಯ

Magadi; ಕಾರಿಗೆ ಅಡ್ಡ ಬಂದ ಕುದುರೆ, ವಾಹನಗಳ ಸರಣಿ ಅಪಘಾತ; ಐವರಿಗೆ ಗಂಭೀರ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

ಲಕ್ಷದ್ವೀಪ ಪ್ರವಾಸೋದ್ಯಮದ ಅವಕಾಶ ಬಳಸಿಕೊಳ್ಳುವಲ್ಲಿ ಮಂಗಳೂರು ಹಿನ್ನಡೆ

Mangaluru: ನಾಪತ್ತೆಯಾಗಿದ್ದ ಮಹಿಳೆ ವಿಮಾನ ನಿಲ್ದಾಣದಲ್ಲಿ ಪ್ರತ್ಯಕ್ಷ!

Mangaluru: ನಾಪತ್ತೆಯಾಗಿದ್ದ ಮಹಿಳೆ ವಿಮಾನ ನಿಲ್ದಾಣದಲ್ಲಿ ಪ್ರತ್ಯಕ್ಷ!

Theft Case: ಮನೆಯಿಂದ ಚಿನ್ನಾಭರಣ ಕಳವು

Theft Case: ಮನೆಯಿಂದ ಚಿನ್ನಾಭರಣ ಕಳವು

Ullal; ಸ್ಕೂಟರ್ ಗಳ ಢಿಕ್ಕಿ; ಸಹಸವಾರ ಮೃತ್ಯು

Ullal; ಸ್ಕೂಟರ್ ಗಳ ಢಿಕ್ಕಿ; ಸಹಸವಾರ ಮೃತ್ಯು

“ಫೆಡೆಕ್ಸ್‌ ಪಾರ್ಸೆಲ್‌’ ಹೆಸರಲ್ಲಿ ಸೈಬರ್‌ ವಂಚಕರಿಂದ “ಗಾಳ’

“ಫೆಡೆಕ್ಸ್‌ ಪಾರ್ಸೆಲ್‌’ ಹೆಸರಲ್ಲಿ ಸೈಬರ್‌ ವಂಚಕರಿಂದ “ಗಾಳ’

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

20

Sandalwood: ದರ್ಶನ್‌ ʼಡೆವಿಲ್‌ʼಗೆ ಕರಾವಳಿ ಬೆಡಗಿ ರಚನಾ ರೈ ನಾಯಕಿ; ಫಸ್ಟ್‌ ಪೋಸ್ಟರ್‌ ಔಟ್

1——-qweweqw

Dr.G. Parameshwara ಹೆಸರು ದುರ್ಬಳಕೆ: ಕಾಂಗ್ರೆಸ್ ನಿಂದ ಮಹಮದ್ ಜುಬೇರ್ ಉಚ್ಛಾಟನೆ

satish jarakiholi

Belagavi,ಚಿಕ್ಕೋಡಿ ಸೇರಿ 14 ರಿಂದ 17 ಸೀಟು ಕಾಂಗ್ರೆಸ್ ಗೆಲ್ಲಲಿದೆ: ಸತೀಶ್ ಜಾರಕಿಹೊಳಿ

Kunigal: ಪ್ರತ್ಯೇಕ ಅಪಘಾತ; ಇಬ್ಬರು ಸಾವು

Kunigal: ಪ್ರತ್ಯೇಕ ಅಪಘಾತ; ಇಬ್ಬರು ಸಾವು

Shivraj tangadagi

Prajwal Revanna ಬಂಧನಕ್ಕೆ ಕೇಂದ್ರ ಸರಕಾರದಿಂದ ಅಸಹಕಾರ: ಸಚಿವ ತಂಗಡಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.