ಬಿಹಾರ ರಾಜ್ಯಪಾಲರ ಬೆಂಗಾವಲು ವಾಹನ ಅಪಘಾತ: 6 ಮಂದಿಗೆ ಗಾಯ
Team Udayavani, Apr 17, 2023, 5:39 PM IST
ಬಿಹಾರ: ಬಿಹಾರದ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರ ಬೆಂಗಾವಲು ವಾಹನವೊಂದು ಬಿಹಾರದ ಮುಜಾಫರ್ಪುರ ರಾಷ್ಟ್ರೀಯ ಹೆದ್ದಾರಿಯ ಭಗವಾನ್ಪುರ ಬಳಿ ಸೋಮವಾರ ಅಪಘಾತಕ್ಕೀಡಾಗಿ ಆರು ಮಂದಿ ಗಾಯಗೊಂಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಜ್ಯಪಾಲ ವಾಹನಕ್ಕೆ ಬೆಂಗಾವಲಾಗಿ ಹೋಗುತ್ತಿದ್ದ ಅಗ್ನಿಶಾಮಕ ದಳದ ವಾಹನ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದು ಬಳಿಕ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ ಪರಿಣಾಮ ರಿಕ್ಷಾದಲ್ಲಿದ್ದ ಮೂವರು ಮತ್ತು ಅಗ್ನಿಶಾಮಕ ದಳದ ಮೂವರು ಸಿಬ್ಬಂದಿಗಳು ಸೇರಿ ಆರು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಾಜ್ಯಪಾಲರು ಪಾಟ್ನಾ ದಿಂದ ಮುಜಾಫರ್ಪುರಕ್ಕೆ ತೆರಳುತ್ತಿದ್ದ ಸಂದರ್ಭ ಬೆಂಗಾವಲು ಪಡೆಯ ಕೊನೆಯ ವಾಹನವಾದ ಅಗ್ನಿಶಾಮಕ ವಾಹನ ನಿಯಂತ್ರಣ ತಪ್ಪಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ರಾಜ್ಯಪಾಲರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
बिहार के राज्यपाल राजेंद्र विश्वनाथअर्लेकर के काफिले में मौजूद फायर ब्रिगेड की गाड़ी हादसे का हुई शिकार, गाड़ी डिवाइडर से टकराने के बाद एक ऑटो से टकरा गयी जिसमें 3 पुलिसकर्मी और ऑटो पर सवार 3 लोग घायल हो गए, राज्यपाल एक कार्यक्रम में शामिल होने के लिए मुजफ्फरपुर जा रहे थे. pic.twitter.com/ET2mrzD9vu
— Nitish chandra (@NitishIndiatv) April 17, 2023