ಮದುವೆಗೆ ಭಿನ್ನ ಲಿಂಗದ ಜೋಡಿಯೇ ಆಗಬೇಕೇ? CJI Chandrachud ಪ್ರಶ್ನೆ


Team Udayavani, Apr 21, 2023, 8:25 AM IST

dy-chandrachud

ಹೊಸದಿಲ್ಲಿ: “ಮದುವೆ ಆಗುವ ಜೋಡಿಯು ಭಿನ್ನಲಿಂಗಕ್ಕೆ ಸೇರಿದವರೇ ಆಗಿರಬೇಕು ಎನ್ನುವುದು ಅತ್ಯವಶ್ಯವೇ?’ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಗುರುವಾರ ಪ್ರಶ್ನಿಸಿದ್ದಾರೆ.

ಸಲಿಂಗ ವಿವಾಹಕ್ಕೆ ಮಾನ್ಯತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ 3ನೇ ದಿನದ ವಿಚಾರಣೆ ವೇಳೆ ಸಂವಿಧಾನ ಪೀಠದ ನೇತೃತ್ವ ವಹಿಸಿರುವ ಸಿಜೆಐ ಈ ಪ್ರಶ್ನೆ ಹಾಕಿದ್ದಾರೆ. “ಈ ಸಲಿಂಗ ಸಂಬಂಧಗಳು ಕೇವಲ ದೈಹಿಕ ಸಂಬಂಧವಷ್ಟೇ ಅಲ್ಲ, ಅದನ್ನೂ ಮೀರಿದ ಸ್ಥಿರ, ಭಾವನಾತ್ಮಕ ಸಂಬಂಧವೂ ಆಗಿರಲೂ ಬಹುದು. ಹೀಗಾಗಿ ಮದುವೆ ಆಗಬೇ ಕೆಂದರೆ ಅವರು ಭಿನ್ನಲಿಂಗಕ್ಕೆ ಸೇರಿದವರೇ ಆಗಿರಬಹುದು ಎನ್ನುವುದು ಅತ್ಯವಶ್ಯವೇ ಎಂಬ ಪ್ರಶ್ನೆಗೆ ಉತ್ತರ ಸಿಗಬೇಕು. ಅದಕ್ಕಾಗಿ ನಾವು ಮದುವೆ ಎಂಬ ಪರಿಕಲ್ಪನೆಯನ್ನೇ ಮರುವ್ಯಾಖ್ಯಾನಿಸಬೇಕು’ ಎಂದು ಸಿಜೆಐ ಅಭಿಪ್ರಾಯಪಟ್ಟರು.

1954ರ ವಿಶೇಷ ವಿವಾಹ ಕಾಯ್ದೆ ಜಾರಿಯಾದ ಬಳಿಕ ಕಳೆದ 69 ವರ್ಷಗಳಲ್ಲಿ ಕಾನೂನುಗಳು ಬೇರೆ ಬೇರೆ ರೀತಿಯಲ್ಲಿ ವಿಕಸನಗೊಳ್ಳುತ್ತಾ ಬಂದಿವೆ. ತಮ್ಮ ವೈಯಕ್ತಿಕ ಕಾನೂನುಗಳನ್ನು ಪಾಲನೆ ಮಾಡಲು ಬಯಸದ ವ್ಯಕ್ತಿಗಳಿಗೆಂದು ವಿಶೇಷ ವಿವಾಹ ಕಾಯ್ದೆ ಜಾರಿ ಮಾಡಲಾಯಿತು. ಅನಂತರದಲ್ಲಿ, ಸಲಿಂಗಕಾಮ ಅಪರಾಧವಲ್ಲ ಎಂಬ ತೀರ್ಪಿನ ಮೂಲಕ, ನಾವು ಸಮಾನ ಲಿಂಗದ ವಯಸ್ಕ ವ್ಯಕ್ತಿಗಳ ಸಮ್ಮತಿಯ ಸಂಬಂಧಕ್ಕೆ ಮಾತ್ರವಲ್ಲದೇ, ಅವರಲ್ಲಿನ ಸ್ಥಿರ ಬಾಂಧವ್ಯ ಕ್ಕೂ ಮಾನ್ಯತೆ ನೀಡಿದ್ದೇವೆ ಎಂಬುದನ್ನೂ ನ್ಯಾಯಪೀಠ ಸ್ಮರಿಸಿತು.

ಈ ನಡುವೆ, ವಿಶೇಷ ವಿವಾಹ ಕಾಯ್ದೆ ಯಡಿ ಮದುವೆಯಾಗಲು 30 ದಿನಗಳ ಮುಂಚಿತವಾಗಿ ನೋಟಿಸ್‌ ನೀಡುವ ನಿಯಮದಿಂದ, ಅವರ ವಿವಾಹಕ್ಕೆ ಅಡ್ಡಿಯುಂಟು ಮಾಡಲು ಕುಟುಂಬ ಮತ್ತು ಇತರರಿಗೆ ಅವಕಾಶ ಕೊಟ್ಟಂತಾಗುತ್ತದೆ. ಹಾಗಾಗಿ ಈ ನಿಯಮವನ್ನೇ ರದ್ದು ಮಾಡಬೇಕು ಎಂದೂ ವಕೀಲ ರಾಜು ರಾಮಚಂದ್ರನ್‌ ಕೋರಿಕೊಂಡರು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಪೀಠ, ವಿಚಾರಣೆಯನ್ನು ಎ. 24ಕ್ಕೆ ಮುಂದೂಡಿತು.

ಟಾಪ್ ನ್ಯೂಸ್

BJP 2

MLC ಚುನಾವಣೆ: ಐವರು ಅಭ್ಯರ್ಥಿಗಳ ಹೆಸರು ಪ್ರಕಟಿಸಿದ ಬಿಜೆಪಿ

1-eqwewqeqw

Bagalkote; ಕಾರಿಗೆ ಬೆಂಕಿ ಹೊತ್ತಿಕೊಂಡು ವ್ಯಕ್ತಿ ಸಜೀವ ದಹನ!

Kharge (2)

Congress ಪಕ್ಷಕ್ಕೆ ಅಂಬಾನಿ, ಅದಾನಿ ಕಪ್ಪು ಹಣ ಕಳುಹಿಸುತ್ತಿದ್ದರೆ… : ಖರ್ಗೆ ಕಿಡಿ

1-wqewqwewq

Rain; ಬೆಳಗಾವಿ, ಹುಬ್ಬಳ್ಳಿಯಲ್ಲಿ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತ

S M KRISHNA

Former CM ಎಸ್‌.ಎಂ. ಕೃಷ್ಣ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ

Sharad pawar (2)

Modi ಟೀಕೆಗಳನ್ನು ಸಹಿಸುವುದಿಲ್ಲ,ಇತರರ ವಿರುದ್ಧ ಏನನ್ನೂ ಮಾತನಾಡುತ್ತಾರೆ: ಪವಾರ್

naksal (2)

Bijapur; ಭಾರೀ ಎನ್‌ಕೌಂಟರ್ ವೇಳೆ ಸಮವಸ್ತ್ರ ಬದಲಿಸಿದ ನಕ್ಸಲೀಯರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kharge (2)

Congress ಪಕ್ಷಕ್ಕೆ ಅಂಬಾನಿ, ಅದಾನಿ ಕಪ್ಪು ಹಣ ಕಳುಹಿಸುತ್ತಿದ್ದರೆ… : ಖರ್ಗೆ ಕಿಡಿ

naksal (2)

Bijapur; ಭಾರೀ ಎನ್‌ಕೌಂಟರ್ ವೇಳೆ ಸಮವಸ್ತ್ರ ಬದಲಿಸಿದ ನಕ್ಸಲೀಯರು!

Congress ಪಕ್ಷ ಈ ಬಾರಿ 50 ಕ್ಷೇತ್ರಗಳಲ್ಲೂ ಜಯ ಗಳಿಸಲ್ಲ: ಪ್ರಧಾನಿ ಮೋದಿ ವಾಗ್ದಾಳಿ

Congress ಪಕ್ಷ ಈ ಬಾರಿ 50 ಕ್ಷೇತ್ರಗಳಲ್ಲೂ ಜಯ ಗಳಿಸಲ್ಲ: ಪ್ರಧಾನಿ ಮೋದಿ ವಾಗ್ದಾಳಿ

Panaji: ಕೇಜ್ರಿವಾಲ್‍ಗೆ ಜಾಮೀನು… ಬೆರಗಾದ ಬಿಜೆಪಿ ನಾಯಕರು: ವಿನೋದ ಪಾಲೇಕರ್

Panaji: ಕೇಜ್ರಿವಾಲ್‍ಗೆ ಜಾಮೀನು… ಬೆರಗಾದ ಬಿಜೆಪಿ ನಾಯಕರು: ವಿನೋದ ಪಾಲೇಕರ್

Cash Seized: ಅಪಘಾತವಾದ ವಾಹನದಲ್ಲಿತ್ತು ಕಂತೆ ಕಂತೆ ಹಣದ ಕಟ್ಟು… ಬೆಚ್ಚಿ ಬಿದ್ದ ಜನ

Cash Seized: ಅಪಘಾತವಾದ ವಾಹನದಲ್ಲಿತ್ತು ದಾಖಲೆ ಇಲ್ಲದ 7 ಕೋಟಿ ಹಣ… ಬೆಚ್ಚಿ ಬಿದ್ದ ಜನ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Minchu

ಕುಷ್ಟಗಿ: ಸಿಡಿಲು ಬಡಿದು ಯುವಕ‌ ದುರ್ಮರಣ

BJP 2

MLC ಚುನಾವಣೆ: ಐವರು ಅಭ್ಯರ್ಥಿಗಳ ಹೆಸರು ಪ್ರಕಟಿಸಿದ ಬಿಜೆಪಿ

1-eqwewqeqw

Bagalkote; ಕಾರಿಗೆ ಬೆಂಕಿ ಹೊತ್ತಿಕೊಂಡು ವ್ಯಕ್ತಿ ಸಜೀವ ದಹನ!

Kharge (2)

Congress ಪಕ್ಷಕ್ಕೆ ಅಂಬಾನಿ, ಅದಾನಿ ಕಪ್ಪು ಹಣ ಕಳುಹಿಸುತ್ತಿದ್ದರೆ… : ಖರ್ಗೆ ಕಿಡಿ

1-wqewqwewq

Rain; ಬೆಳಗಾವಿ, ಹುಬ್ಬಳ್ಳಿಯಲ್ಲಿ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.