ಎರಗಿದ ಸಿಡಿಲು-ಕೂದಳೆಯ ಅಂತರದಲ್ಲಿ ಪಾರಾದ ರೈತ
Team Udayavani, Apr 25, 2023, 8:38 PM IST
ಕುಷ್ಟಗಿ:ಕೂದಲೆಳೆಯ ಅಂತರದಲ್ಲಿ ರೈತನೋರ್ವ ಸಿಡಿಲಿನ ಆಘಾತದಿಂದ ಪಾರಾದ ಘಟನೆ ತಾಲೂಕಿನ ಹಾಬಲಕಟ್ಟಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಮಹಾಂತೇಶ ಶರಣಪ್ಪ ರಾಜೂರು (48) ಮಂಗಳವಾರ ಸಂಜೆ ಎಂದಿನಂತೆ ಜಮೀನಿನಲ್ಲಿ ಜಾನುವಾರು ಮೇಯಿಸುತ್ತಿದ್ದ. ಕಾರ್ಮೋಡ ಕವಿದ ಬೆನ್ನಲ್ಲೆ ಮಳೆ ಶುರುವಾಗುತ್ತಿದ್ದಂತೆ ಗಿಡದ ಕೆಳಗಿನ ಹಸು ಬಿಚ್ಚಲು ದೌಡಾಯಿಸುತ್ತಿರುವ ಸಂಧರ್ಭದಲ್ಲಿ ಸಿಡಿಲು ಎರಗಿದ ಸಂಧರ್ಭದಲ್ಲಿ ಸುಟ್ಟ ವಾಸನೆ ಮೂಗು ಕಟ್ಟಿದ್ದು ಅಲ್ಲಿಯೇ ಅಸ್ವಸ್ಥನಾಗಿದ್ದ. ಕೂಡಲೇ ಸ್ಥಳೀಯರು ಆತನನ್ನು ಗಜೇಂದ್ರಗಡ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು ಅಲ್ಲಿಯವರೆಗೂ ರೈತನಿಗೆ ಮಹಾಂತೇಶ ರಾಜೂರುಗೆ ಮಾತು ಇರಲಿಲ್ಲ. ವೈದ್ಯರ ಚಿಕಿತ್ಸೆಗೆ ಸ್ಪಂದಿಸಿದ್ದು ಇದೀಗ ಮಾತನಾಡಲಾರಂಭಿಸಿದ್ದಾನೆ ಎಂದು ಮಹಾಂತೇಶ ಸಹೋದರ ಸಂಬಂಧಿ ಶಂಕರ ಕರಪಡಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Kolkata: ಹೆರಿಗೆಯಾದ ಕೆಲವೇ ಹೊತ್ತಿನಲ್ಲಿ ಹಸುಗೂಸನ್ನು ಶೌಚಾಲಯದ ಕಿಟಕಿಯಿಂದ ಎಸೆದ ತಾಯಿ