ಚೆನ್ನೈಅಂಗಳದಲ್ಲಿ ಡೆಲ್ಲಿಗೆ ಅಗ್ನಿಪರೀಕ್ಷೆ: ಇತ್ತಂಡಗಳ ನಡುವಿನ ಮೊದಲ ಮುಖಾಮುಖಿ

 ಧೋನಿ ಪಡೆಯೇ ಫೇವರಿಟ್‌

Team Udayavani, May 10, 2023, 8:00 AM IST

ಚೆನ್ನೈಅಂಗಳದಲ್ಲಿ ಡೆಲ್ಲಿಗೆ ಅಗ್ನಿಪರೀಕ್ಷೆ: ಇತ್ತಂಡಗಳ ನಡುವಿನ ಮೊದಲ ಮುಖಾಮುಖಿ

ಚೆನ್ನೈ: ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೆ ನೆಗೆದಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ಬುಧವಾರ ರಾತ್ರಿ ಕಟ್ಟಕಡೆಯ ಸ್ಥಾನಿಯಾದ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ತನ್ನದೇ ಅಂಗಳದಲ್ಲಿ ಮಹತ್ವದ ಪಂದ್ಯವನ್ನು ಆಡಲಿದೆ. ಸಹಜವಾಗಿ ಧೋನಿ ಪಡೆಯೇ ಇಲ್ಲಿನ ನೆಚ್ಚಿನ ತಂಡವಾಗಿದೆ.

ಚೆನ್ನೈ ಈವರೆಗೆ 11 ಪಂದ್ಯಗಳಲ್ಲಿ ಆರನ್ನು ಗೆದ್ದು 13 ಅಂಕ ಹೊಂದಿದೆ. ಇನ್ನೊಂದೆಡೆ ಡೆಲ್ಲಿ 10 ಪಂದ್ಯಗಳಲ್ಲಿ ನಾಲ್ಕನ್ನಷ್ಟೇ ಜಯಿಸಿದೆ. 8 ಅಂಕದೊಂದಿಗೆ ಅಂಕಪಟ್ಟಿಯ ತಳವನ್ನು ಗಟ್ಟಿ ಮಾಡಿಕೊಂಡಿದೆ. ಸನ್‌ರೈಸರ್ ಹೈದರಾಬಾದ್‌ ಕೂಡ ಇದೇ ಸ್ಥಿತಿಯಲ್ಲಿದ್ದರೂ ರನ್‌ರೇಟ್‌ನಲ್ಲಿ ತುಸು ಮುಂದಿದೆ.

ಇದು 2023ರ ಸರಣಿಯ ಚೆನ್ನೈ-ಡೆಲ್ಲಿ ನಡುವಿನ ಮೊದಲ ಹಾಗೂ ಏಕೈಕ ಲೀಗ್‌ ಪಂದ್ಯವಾಗಿದೆ. ಎರಡೂ ತಂಡಗಳು ತಮ್ಮ ಕೊನೆಯ ಪಂದ್ಯವನ್ನು ಗೆದ್ದ ಹುರುಪಿನಲ್ಲಿವೆ. ಡೆಲ್ಲಿ ತನ್ನದೇ ಅಂಗಳದಲ್ಲಿ ಆರ್‌ಸಿಬಿಯನ್ನು 7 ವಿಕೆಟ್‌ಗಳಿಂದ ಕೆಡವಿದರೆ, ಚೆನ್ನೈ 6 ವಿಕೆಟ್‌ಗಳ ಅಂತರದಿಂದ ಮುಂಬೈಯನ್ನು ಮಣಿಸಿತ್ತು. ಡೆಲ್ಲಿಯನ್ನೂ ಮಣಿಸಿದರೆ ಧೋನಿ ಪಡೆ ಪ್ಲೇ ಆಫ್ಗೆ ಹತ್ತಿರವಾಗಲಿದೆ. ಡೆಲ್ಲಿಯ ಹಾದಿ ಬಹುತೇಕ ಕೊನೆಗೊಳ್ಳಲಿದೆ.

ಹೀಗಾಗಿ ಡೇವಿಡ್‌ ವಾರ್ನರ್‌ ಪಡೆಗೆ ಇದು ಮಾಡು-ಮಡಿ ಪಂದ್ಯ ಮುಂಬೈ ವಿರುದ್ಧ ಕಳೆದ ಶನಿವಾರ ಚೆನ್ನೈಯಲ್ಲಿ ನಡೆದ ಪಂದ್ಯ ಸಣ್ಣ ಮೊತ್ತಕ್ಕೆ ಸಾಕ್ಷಿಯಾಗಿತ್ತು. ಮುಂಬೈ 8 ವಿಕೆಟಿಗೆ 138 ರನ್‌ ಗಳಿಸಿದರೆ, ಚೆನ್ನೈ 4 ವಿಕೆಟಿಗೆ 140 ರನ್‌ ಬಾರಿಸಿ ತನ್ನ 6ನೇ ಜಯಭೇರಿ ಮೊಳಗಿಸಿತ್ತು. ಶ್ರೀಲಂಕಾದ ಮತೀಶ ಪತಿರಣ ಮುಂಬೈಯನ್ನು ಹಿಡಿದಿಡುವಲ್ಲಿ ಭಾರೀ ಯಶಸ್ಸು ಕಂಡಿದ್ದರು. ಲಂಕೆಯ ಮತ್ತೋರ್ವ ಬೌಲರ್‌ ಮಹೀಶ ತೀಕ್ಷಣ ಕೂಡ ಘಾತಕವಾಗಿ ಪರಿಣಮಿಸುತ್ತಿದ್ದಾರೆ. ಜತೆಗೆ ತುಷಾರ್‌ ದೇಶಪಾಂಡೆ, ದೀಪಕ್‌ ಚಹರ್‌, ರವೀಂದ್ರ ಜಡೇಜ ಅವರ ದಾಳಿ ಕೂಡ ಹರಿತವಾಗಿಯೇ ಇದೆ. ಮುಖ್ಯವಾಗಿ, ತವರಿನ ಅಂಗಳದಲ್ಲಿ ಚೆನ್ನೈ ಬೌಲಿಂಗ್‌ ಆಕ್ರಮಣವನ್ನು ಎದುರಿಸಿ ನಿಲ್ಲುವುದು ಸುಲಭವಲ್ಲ. ತುಷಾರ್‌ ದೇಶಪಾಂಡೆ ಅವರಂತೂ ಪವರ್‌ ಪ್ಲೇಯಲ್ಲಿ ಎದುರಾಳಿಗೆ ಸಿಂಹಸ್ವಪ್ನರಾಗುತ್ತ ಬಂದಿದ್ದಾರೆ.

ಟಾಪ್‌ ಆರ್ಡರ್‌ ಯಶಸ್ಸು
ಚೆನ್ನೈ ಬ್ಯಾಟಿಂಗ್‌, ಅದರಲ್ಲೂ ಟಾಪ್‌-ಆರ್ಡರ್‌ ಬ್ಯಾಟರ್ ಪ್ರಚಂಡ ಫಾರ್ಮ್ನಲ್ಲಿದ್ದಾರೆ. ನ್ಯೂಜಿಲ್ಯಾಂಡ್‌ನ‌ ಡೇವನ್‌ ಕಾನ್ವೇ ಅರ್ಧ ಶತಕ ಬಾರಿಸುವುದನ್ನು ಹವ್ಯಾಸವಾಗಿ ಮಾಡಿಕೊಂಡಿದ್ದಾರೆ. ಈಗಾಗಲೇ 457 ರನ್‌ ಇವರ ಖಾತೆಗೆ ಸೇರಿದೆ. ರುತುರಾಜ್‌ ಗಾಯಕ್ವಾಡ್‌ 292, ಅಜಿಂಕ್ಯ ರಹಾನೆ 245 ರನ್‌ ಮಾಡಿ ಚೆನ್ನೈ ಬ್ಯಾಟಿಂಗ್‌ ಸರದಿಗೆ ಬಲ ತುಂಬಿದ್ದಾರೆ. ಬಿಗ್‌ ಹಿಟ್ಟರ್‌ ಶಿವಂ ದುಬೆ ಇದೇ ಮೊದಲ ಸಲ ಐಪಿಎಲ್‌ನಲ್ಲಿ ಮಿಂಚು ಹರಿಸಲಾರಂಭಿಸಿದ್ದು ಚೆನ್ನೈ ಪಾಲಿಗೊಂದು ಪ್ಲಸ್‌ ಪಾಯಿಂಟ್‌. ಅವರು 9 ಪಂದ್ಯಗಳಿಂದ 290 ರನ್‌ ರಾಶಿ ಹಾಕಿದ್ದಾರೆ.

ಆದರೆ ಚೆನ್ನೈ ಕೆಳ ಸರದಿಯ ಬ್ಯಾಟಿಂಗ್‌ ನಿರೀಕ್ಷಿತ ಯಶಸ್ಸು ಕಾಣುತ್ತಿಲ್ಲ. ಅನುಭವಿ ಅಂಬಾಟಿ ರಾಯುಡು (11 ಪಂದ್ಯ 95 ರನ್‌), ರವೀಂದ್ರ ಜಡೇಜ (11 ಪಂದ್ಯ, 92 ರನ್‌) ಸಂಪೂರ್ಣ ವಿಫ‌ಲರಾಗಿದ್ದಾರೆ. ಧೋನಿ ಕ್ರೀಸ್‌ ಇಳಿಯುವಾಗ ಇನ್ನಿಂಗ್ಸ್‌ ಮುಗಿದಿರುತ್ತದೆ. ಆದರೆ ಈ ಕೊರತೆಯನ್ನು ಅಗ್ರ ಕ್ರಮಾಂಕದ ಬ್ಯಾಟರ್ ಯಶಸ್ವಿಯಾಗಿ ನಿಭಾಯಿಸುತ್ತಿರುವುದು ಚೆನ್ನೈ ತಂಡದ ಹೆಚ್ಚುಗಾರಿಕೆ.

ಅಪರೂಪದ ಯಶಸ್ಸು
ಕೂಟದಲ್ಲೇ ಅತ್ಯಂತ ಕಳಪೆ ಬ್ಯಾಟಿಂಗ್‌ ಪ್ರದರ್ಶನ ನೀಡುತ್ತ ಬಂದ ಡೆಲ್ಲಿ ಕ್ಯಾಪಿಟಲ್ಸ್‌, ತನ್ನ ಹಿಂದಿನ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಅಪರೂಪದ ಯಶಸ್ಸು ಕಂಡಿತ್ತು. ಆರಂಭಕಾರ ಫಿಲಿಪ್‌ ಸಾಲ್ಟ್ ಸಿಡಿದು ನಿಂತಿದ್ದರು. ತನ್ನ ಸ್ಫೋಟಕ ಶೈಲಿಗೆ ವಿರುದ್ಧವಾಗಿ ಆಡುತ್ತಿದ್ದ ಡೇವಿಡ್‌ ವಾರ್ನರ್‌ ಕೂಡ ಬಿರುಸು ಪಡೆದಿದ್ದರು. ಮಿಚೆಲ್‌ ಮಾರ್ಷ್‌, ರಿಲೀ ರೋಸ್ಯೂ ಅವರ ಬ್ಯಾಟಿಂಗ್‌ ಕೂಡ ಆಕರ್ಷಕವಾಗಿತ್ತು. ಹೀಗೆ ವಿದೇಶಿ ಕ್ರಿಕೆಟಿಗರ ಕೋಟಾವನ್ನು ಅಗ್ರ ಕ್ರಮಾಂಕದಲ್ಲೇ ಮುಗಿಸಿರುವ ಡೆಲ್ಲಿ ಇದರಲ್ಲಿ ಧಾರಾಳ ಯಶಸ್ಸು ಕಂಡಿತ್ತು. ಚೆನ್ನೈ ವಿರುದ್ಧವೂ ಇದೇ ಮಟ್ಟದ ಪ್ರದರ್ಶನ ನೀಡಿದರಷ್ಟೇ ಡೆಲ್ಲಿಯ 5ನೇ ಗೆಲುವನ್ನು ನಿರೀಕ್ಷಿಸಬಹುದು.

ಡೆಲ್ಲಿಯ ಬೌಲಿಂಗ್‌ ವಿಭಾಗ ಚೆನ್ನೈಗೆ ಹೋಲಿಸಿದರೆ ತೀರಾ ಸಾಮಾನ್ಯ. ಇಶಾಂತ್‌ ಶರ್ಮ, ಖಲೀಲ್‌ ಅಹ್ಮದ್‌, ಮುಕೇಶ್‌ ಕುಮಾರ್‌, ಮಿಚೆಲ್‌ ಮಾರ್ಷ, ಅಕ್ಷರ್‌ ಪಟೇಲ್‌, ಕುಲದೀಪ್‌ ಯಾದವ್‌ ಅವರೆಲ್ಲ ಹೆಚ್ಚು ಘಾತಕವಾಗಿ ಪರಿಣಮಿಸಬೇಕಿದೆ. ಆರ್‌ಸಿಬಿ ವಿರುದ್ಧ ಇವರಿಗೆ ಉರುಳಿಸಲು ಸಾಧ್ಯವಾದದ್ದು 4 ವಿಕೆಟ್‌ ಮಾತ್ರ ಎಂಬುದನ್ನು ಗಮನಿಸಬೇಕು.

ಟಾಪ್ ನ್ಯೂಸ್

1-qwewqewqe

Kejriwal ನಿವಾಸದಲ್ಲಿ ಹಲ್ಲೆ; ಕೊನೆಗೂ ದೂರು ದಾಖಲಿಸಿದ ಸ್ವಾತಿ ಮಲಿವಾಲ್

train-track

Belagavi: ರೈಲಿನಲ್ಲಿ ಮುಸುಕುಧಾರಿಯಿಂದ ಚಾಕು ಇರಿತ: ವ್ಯಕ್ತಿ ಸಾವು,ಇಬ್ಬರಿಗೆ ಗಾಯ !

Revanna 2

Holenarasipur case; ರೇವಣ್ಣ ಅವರಿಗೆ ಒಂದು ದಿನದ ರಿಲೀಫ್

Ullal; ಸ್ಕೂಟರ್ ಗಳ ಢಿಕ್ಕಿ; ಸಹಸವಾರ ಮೃತ್ಯು

Ullal; ಸ್ಕೂಟರ್ ಗಳ ಢಿಕ್ಕಿ; ಸಹಸವಾರ ಮೃತ್ಯು

3

ಫಾಹದ್‌ ಫಾಸಿಲ್‌ ಜೊತೆ ʼದೃಶ್ಯಂʼ ನಿರ್ದೇಶಕನ ಸಿನಿಮಾ:‌ ಸುದ್ದಿ ಕೇಳಿ ಥ್ರಿಲ್‌ ಆದ ಫ್ಯಾನ್ಸ್

Kalaburagi; Suresh Sajjan submits nomination as BJP rebel candidate

Kalaburagi; ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸುರೇಶ ಸಜ್ಜನ್ ನಾಮಪತ್ರ ಸಲ್ಲಿಕೆ

doctor

Mistake; ಮಗುವಿನ ಬೆರಳಿಗೆ ಶಸ್ತ್ರಚಿಕಿತ್ಸೆ ಬೇಕಿತ್ತು: ವೈದ್ಯರು ಮಾಡಿದ್ದು ನಾಲಗೆಗೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Virat kohli spoke about his post-retirement life

Virat Kohli; ನಿವೃತ್ತಿಯ ಬಗ್ಗೆ ಮಾತನಾಡಿದ ವಿರಾಟ್..; ಫ್ಯಾನ್ಸ್ ಗೆ ಆತಂಕತಂದ ಕೊಹ್ಲಿ ಮಾತು

Head Coach; ರಾಹುಲ್ ದ್ರಾವಿಡ್ ಬಳಿಕ ಕೋಚ್ ಹುದ್ದೆ ನಿರಾಕರಿಸಿದ ಟೀಂ ಇಂಡಿಯಾ ದಿಗ್ಗಜ

Head Coach; ರಾಹುಲ್ ದ್ರಾವಿಡ್ ಬಳಿಕ ಕೋಚ್ ಹುದ್ದೆ ನಿರಾಕರಿಸಿದ ಟೀಂ ಇಂಡಿಯಾ ದಿಗ್ಗಜ

Sunil Chhetri

Sunil Chhetri: ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ವಿದಾಯ ಹೇಳಿದ ಸುನಿಲ್ ಚೇತ್ರಿ

Haji Karam Din: 102ನೇ ವಯಸ್ಸಿನಲ್ಲೂ ಕ್ರಿಕೆಟ್‌ ಆಟ!

Haji Karam Din: 102ನೇ ವಯಸ್ಸಿನಲ್ಲೂ ಕ್ರಿಕೆಟ್‌ ಆಟ!

Ipl 2024: ಹೈದರಾಬಾದ್‌ಗೆ ಗೆಲುವು ಅನಿವಾರ್ಯ, ವಿದಾಯ ಪಂದ್ಯ ಆಡಲಿರುವ ಗುಜರಾತ್‌ ಟೈಟಾನ್ಸ್‌

Ipl 2024: ಹೈದರಾಬಾದ್‌ಗೆ ಗೆಲುವು ಅನಿವಾರ್ಯ, ವಿದಾಯ ಪಂದ್ಯ ಆಡಲಿರುವ ಗುಜರಾತ್‌ ಟೈಟಾನ್ಸ್‌

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

1-qeqwqew

Gundlupete: ಕೊಳೆತ ಸ್ಥಿತಿಯಲ್ಲಿ ಹುಲಿಯ ಮೃತ ದೇಹ ಪತ್ತೆ

1-qwewqewqe

Kejriwal ನಿವಾಸದಲ್ಲಿ ಹಲ್ಲೆ; ಕೊನೆಗೂ ದೂರು ದಾಖಲಿಸಿದ ಸ್ವಾತಿ ಮಲಿವಾಲ್

Puttur: ಚೆಂಡೆವಾದಕ ನೇಣು ಬಿಗಿದುಕೊಂಡು ಆತ್ಮಹತ್ಯೆ

Puttur: ಚೆಂಡೆವಾದಕ ನೇಣು ಬಿಗಿದುಕೊಂಡು ಆತ್ಮಹತ್ಯೆ

11

Puttur: ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಸಾವು ವೈದ್ಯರ ವಿರುದ್ಧ ದೂರು ದಾಖಲು

Misbehavior: ಅನುಚಿತ ವರ್ತನೆ; ಕೇಂದ್ರ ವಿ.ವಿ. ಅಧ್ಯಾಪಕನ ಅಮಾನತು

Misbehavior: ಅನುಚಿತ ವರ್ತನೆ; ಕೇಂದ್ರ ವಿ.ವಿ. ಅಧ್ಯಾಪಕನ ಅಮಾನತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.