ಗುಳೇದಗುಡ್ಡ: ಜಾಕ್‌ವೆಲ್‌ನಿಂದ ನೀರೆತ್ತುವ ಮೋಟಾರ್‌ ಬಂದ್‌

ಮೋಟಾರ್‌ ರಿಪೇರಿಗೆ ಬಂದರೂ ಇನ್ನೊಂದು ಮೋಟಾರ್‌ ಕಾಯ್ದಿರಿಸಲಾಗಿದೆ

Team Udayavani, May 24, 2023, 10:38 AM IST

ಗುಳೇದಗುಡ್ಡ: ಜಾಕ್‌ವೆಲ್‌ನಿಂದ ನೀರೆತ್ತುವ ಮೋಟಾರ್‌ ಬಂದ್‌

ಗುಳೇದಗುಡ್ಡ: ಆಲಮಟ್ಟಿಯಲ್ಲಿನ ಜಾಕ್‌ವೆಲ್‌ನಲ್ಲಿ ನೀರು ಎತ್ತುವ ಮೋಟಾರ್‌ ಬಂದ್‌ ಆಗಿದ್ದರಿಂದ ನೀರಿನ ಸಮಸ್ಯೆ ಎದುರಾಗಿದ್ದು, ಇದರಿಂದ ಜನರು ನೀರಿಗಾಗಿ ಪರಿತಪಿಸುವಂತಾಗಿದೆ. ಜಾಕವೆಲ್‌ನಲ್ಲಿ ಹೆಚ್ಚುವರಿ ಮೋಟಾರ್‌ ಇದ್ದರೂ ದುರಸ್ತಿ ಮಾಡಿಸಲು ಮುಂದಾಗದಿರುವುದರಿಂದ ಗುಳೇದಗುಡ್ಡ-ಅಮೀನಗಡ, ಕಮತಗಿ ಪಟ್ಟಣಗಳಿಗೆ ನೀರಿನ ಸಮಸ್ಯೆ ಎದುರಾಗಿದೆ.

ಆಲಮಟ್ಟಿಯಿಂದ ಗುಳೇದಗುಡ್ಡ ಪುರಸಭೆ ಹಾಗೂ ಅಮೀನಗಡ, ಕಮತಗಿ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಈ ಜಾಕವೆಲ್‌ ಮೂರು ಪಟ್ಟಣಗಳ ಸ್ಥಳೀಯ ಸಂಸ್ಥೆಗೆ ಬರುತ್ತದೆ. ಮೂರು ದಿನಗಳಿಂದ ನೀರು ಬರದ ಕಾರಣ ನೀರಿಗಾಗಿ ಜನರು ನಿತ್ಯ ಸರದಿಯಲ್ಲಿ ನಿಲ್ಲುವಂತಾಗಿದೆ.

ಬೇರಿಂಗ್‌ ಜಾಮ್‌: ಆಲಮಟ್ಟಿಯ ಜಾಕವೆಲ್‌ನಲ್ಲಿನ ಮೋಟಾರ್‌ದಲ್ಲಿ ಒಟ್ಟು 16 ಪೈಪ್‌ಗ್ಳಿದ್ದು, ಅವುಗಳು ನಿತ್ಯ ನೀರು ಸರಬರಾಜು ಮಾಡಲು ಬಳಕೆಯಾಗಿ ಅದರಲ್ಲಿದ್ದ ಬೇರಿಂಗ್‌ ಜಾಮ್‌ ಆಗಿದ್ದು, ಮೋಟರ್‌ ಅಲುಗಾಡುತ್ತಿದೆ. ಒಂದು ಪೈಪ್‌ ಹೊರತುಪಡಿಸಿ ಎಲ್ಲ ಪೈಪ್‌ ತೆರವುಗೊಳಿಸಲಾಗಿದೆ. ಅದರ ಬೇರಿಂಗ್‌ ಜಾಮ್‌ ಆಗಿದ್ದರಿಂದ ಆ ಪೈಪ್‌ ಹೊರಬರುತ್ತಿಲ್ಲ. ಬುಧವಾರ ಬೇರೆ ಕಡೆಯಿಂದ ಸಿಬ್ಬಂದಿ ಬಂದು ಮೋಟರ್‌ ದುರಸ್ತಿ ಕೈಗೊಳ್ಳಲಿದ್ದಾರೆ. ಬಳಿಕ ನೀರು ಬಿಡಲಾಗುವುದು ಎಂದು
ಅಧಿಕಾರಿಗಳು ತಿಳಿಸಿದ್ದಾರೆ.

ಆಲಮಟ್ಟಿ ಜಾಕವೆಲ್‌ನಲ್ಲಿ ಒಂದು ಮೋಟಾರ್‌ ರಿಪೇರಿಗೆ ಬಂದರೂ ಇನ್ನೊಂದು ಮೋಟಾರ್‌ ಕಾಯ್ದಿರಿಸಲಾಗಿದೆ. ಆದರೆ, ಆ ಮೋಟಾರ್‌ನ್ನು ಒಂದು ತಿಂಗಳಿಂದ ದುರಸ್ತಿ ಮಾಡಿಸಲು ಮುಂದಾಗಿಲ್ಲ.

ನೀರಿಗಾಗಿ ಸರದಿ: ಪಟ್ಟಣದಲ್ಲಿ ಕಳೇದ ಮೂರು ದಿನಗಳಿಂದ ನೀರಿನ ಸಮಸ್ಯೆ ಉಂಟಾಗಿದೆ. ಆಲಮಟ್ಟಿಯಿಂದ ನೀರು ಪೂರೈಕೆಯಾದಾಗಿನಿಂದ ನಾಲ್ಕು ವರ್ಷಗಳಿಂದ ನೀರಿನ ಸಮಸ್ಯೆ ಉಂಟಾಗಿರಲಿಲ್ಲ. ಆದರೆ ಕಳೆದ ಒಂದು ವರ್ಷದಲ್ಲಿ 3-4 ಬಾರಿ ಈ ಸಮಸ್ಯೆ ಉಂಟಾಗಿದೆ. ಇದರಿಂದ ಜನರು ಪಟ್ಟಣದ ಹಲವು ಕಡೆಗಳಲ್ಲಿ ನೀರು ತುಂಬಲು ಸರದಿಯಲ್ಲಿ ನಿಲ್ಲುವಂತಾಗಿದೆ. ಪಟ್ಟಣದ ಹೊಸ ಅಂಬಾಭವಾನಿ ದೇವಸ್ಥಾನದ ಹತ್ತಿರ, ಪುರಸಭೆ ನಾನಾ ಕಡೆ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ಮುಂದೆ, ಬೋರ್‌ವೆಲ್‌ ವ್ಯವಸ್ಥೆ ಹೊಂದಿರುವ ಮನೆಗಳ ಮುಂದೆ ನೀರು ತುಂಬಲು ಜನರು ಸರದಿಯಲ್ಲಿ ನಿಲ್ಲುತಿರುವುದು ಕಂಡು ಬಂದಿತು. ಪಟ್ಟಣದಲ್ಲಿ ನೀರಿನ ಸಮಸ್ಯೆ ತಲೆದೋರಿದ್ದರಿಂದ ಹಲವು ಜನರು ಟ್ಯಾಂಕರ್‌ಗೆ ಮೊರೆ ಹೋಗಿದ್ದರಿಂದ ಟ್ಯಾಂಕರ್‌ಗಳಿಗೂ ಬೇಡಿಕೆಬಂದಿದ್ದು, ಹೆಚ್ಚಿನ ಜನರು ಮೋಟರ್‌ಗಳಿಂದ ನೀರು ತರಿಸಿಕೊಳ್ಳುತ್ತಿರುವುದು ಕಂಡು ಬಂದಿತು.

ಮೂರು ದಿನಗಳಿಂದ ರಿಪೇರಿ: ಆಲಮಟ್ಟಿಯಲ್ಲಿ ಮೋಟರ್‌ ರಿಪೇರಿ ಮಾಡಲು ಪುರಸಭೆ ಮುಖ್ಯಾಧಿಕಾರಿ ನಬಿ ಎಂ.ಕಲಾದಗಿ, ಪುರಸಭೆ ಸಿಬ್ಬಂದಿ ಮೂರು ದಿನಗಳಿಂದ ಆಲಮಟ್ಟಿಯಲ್ಲಿಯೇ ಇದ್ದು ದುರಸ್ತಿ ಮಾಡುತ್ತಿದ್ದಾರೆ.

ಕಳೆದ ಮೂರು ದಿನಗಳಿಂದ ಆಲಮಟ್ಟಿಯಲ್ಲಿಯೇ ನಾನು ಮತ್ತು ನಮ್ಮ ಸಿಬ್ಬಂದಿ ಇದ್ದು , ಮೋಟಾರ್‌ ರಿಪೇರಿ ಮಾಡುತ್ತಿದ್ದೇವೆ. ಬೇರಿಂಗ್‌ ಜಾಮ್‌ ಆಗಿದ್ದರಿಂದ ಮೋಟರ್‌ ರಿಪೇರಿ ತಡವಾಗುತ್ತಿದೆ. ಮಂಗಳವಾರ ರಾತ್ರಿ ಇಲ್ಲವೇ ಬುಧವಾರ ಬೆಳಿಗ್ಗೆ ಮೋಟಾರ್‌ ರಿಪೇರಿಯಾಗುವ ನೀರಿಕ್ಷೆಯಿದ್ದು, ಮೋಟಾರ್‌ ದುರಸ್ತಿಯಾದ ಕೂಡಲೇ ನೀರು ಪೂರೈಸಲಾಗುವುದು.
*ಎನ್‌.ಎಂ.ಕಂದಗಲ್ಲ,
ಮುಖ್ಯಾಧಿಕಾರಿ ಗುಳೇದಗುಡ್ಡ ಪುರಸಭೆ

ಹೆಚ್ಚುವರಿ ಇರುವ ಮೋಟಾರ್‌ ರಿಪೇರಿಗೆ 4 ಲಕ್ಷ ಹಣವನ್ನು ತೆಗೆದಿರಿಸಿದ್ದೇವೆ. ನಾವು ಮೋಟಾರ್‌ ರಿಪೇರಿ ಮಾಡಿಸಲು ಸಿದ್ಧರಿದ್ದೇವೆ. ಅಲ್ಲದೇ ಕೋಟೇಶನ್‌ ಗುಳೇದಗುಡ್ಡ ಪುರಸಭೆಯವರು ತೆಗೆದುಕೊಂಡಿದ್ದಾರೆ. ಒಂದು ವಾರದ ಹಿಂದೆಯು ಮಾತಾಡಿದ್ದೇವೆ. ರಿಪೇರಿ ಮಾಡಿಸುತ್ತೇವೆ.
ಮಹೇಶ ನೀಡಶೇಶಿ, ಮುಖ್ಯಾಧಿಕಾರಿಗಳು,
ಅಮೀನಗಡ ಪಟ್ಟಣ ಪಂಚಾಯಿತಿ

*ಮಲ್ಲಿಕಾರ್ಜುನ ಕಲಕೇರಿ

ಟಾಪ್ ನ್ಯೂಸ್

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

aravind

Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

4-

Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

3-kmc

Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

6-

Modi ಒಬ್ಬ ಸುಳ್ಳುಗಾರ: ಸಚಿವ ಸಂತೋಷ್ ಲಾಡ್ ಆರೋಪ

ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ

ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

5

Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.