Balasore ತರಹದ ರೈಲು ದುರಂತ!; ಅನಾಮಧೇಯ ಬೆದರಿಕೆ ಪತ್ರ
Team Udayavani, Jul 3, 2023, 8:47 PM IST
Anonymous letter, sent, railways, warning, Balasore, train tragedy
ಹೈದರಾಬಾದ್: “ಹೈದರಾಬಾದ್-ದೆಹಲಿ-ಹೈದರಾಬಾದ್” ಮಾರ್ಗದಲ್ಲಿ “ಬಾಲಾಸೋರ್ ತರಹದ ರೈಲು ದುರಂತ”ದ ಬೆದರಿಕೆಯ ಅನಾಮಧೇಯ ಪತ್ರವನ್ನು ಇತ್ತೀಚೆಗೆ ಇಲ್ಲಿ ದಕ್ಷಿಣ ಮಧ್ಯ ರೈಲ್ವೆ (SCR)ಗೆ ಕಳುಹಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಜೂನ್ 30 ರ ದಿನಾಂಕದ ಪತ್ರವನ್ನು ದಕ್ಷಿಣ ಮಧ್ಯ ರೈಲ್ವೆಯ ಅಡಿಯಲ್ಲಿ ಸಿಕಂದರಾಬಾದ್ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಗೆ ಕಳುಹಿಸಲಾಗಿದೆ ಮತ್ತು ಮುಂದಿನ ವಾರದಲ್ಲಿ “ಹೈದರಾಬಾದ್-ದೆಹಲಿ-ಹೈದರಾಬಾದ್” ಮಾರ್ಗದಲ್ಲಿ “ಬಾಲಾಸೋರ್ ತರಹದ ರೈಲು ದುರಂತ” ಸಂಭವಿಸುವ ಸಾಧ್ಯತೆಯನ್ನು ಉಲ್ಲೇಖಿಸಲಾಗಿದೆ.ಅಂಚೆ ಮೂಲಕ ಪತ್ರ ಬಂದಿತ್ತು.ಪತ್ರದ ಬಗ್ಗೆ ಎಸ್ಸಿಆರ್ ಅಧಿಕಾರಿಗಳು ತೆಲಂಗಾಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕಳೆದ ವಾರ ಪತ್ರವನ್ನು ಅಂಚೆ ಮೂಲಕ ಸ್ವೀಕರಿಸಲಾಗಿದೆ ಮತ್ತು ಮುಂದಿನ ಕ್ರಮಕ್ಕಾಗಿ ರಾಜ್ಯ ಗುಪ್ತಚರಕ್ಕೆ ನೀಡಲಾಗಿದೆ” ಎಂದು SCR ಮೂಲಗಳು ತಿಳಿಸಿವೆ.
ಜೂನ್ 2 ರಂದು, ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಮೂರು ರೈಲುಗಳು ಢಿಕ್ಕಿ ಹೊಡೆದು 280 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದರು ಮತ್ತು 1,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.