ಯಡಮೊಗೆ; ಕಾಲು ಸಂಕದಿಂದ ಆಯತಪ್ಪಿ ನದಿಗೆ ಬಿದ್ದು ವೃದ್ಧ ಮೃತ್ಯು
Team Udayavani, Jul 5, 2023, 4:27 PM IST
ಸಿದ್ದಾಪುರ(ಕುಂದಾಪುರ) : ಇಲ್ಲಿನ ಯಡಮೊಗೆ ಗ್ರಾಮದಲ್ಲಿ ಮಂಗಳವಾರ ಸಂಜೆ ಕುಬ್ಜಾ ನದಿಗೆ ಅಡ್ಡಲಾಗಿ ಹಾಕಿದ್ದ ಖಾಯಂ ಸಣ್ಣ ಸೇತುವೆಗೆ ಅಡ್ಡಲಾಗಿದ್ದ ಮರದಿಂದ ಮಾಡಿದ್ದ ತಾತ್ಕಾಲಿಕ ಕಾಲು ಸಂಕದಿಂದ ಆಕಸ್ಮಿಕವಾಗಿ ಆಯತಪ್ಪಿ ಬಿದ್ದು ವೃದ್ಧರೊಬ್ಬರು ನೀರು ಪಾಲಾದ ಘಟನೆ ನಡೆದಿದೆ.
ಮೃತ ದುರ್ದೈವಿ ಶೇಷಾದ್ರಿ ಐತಾಳ್ (73) ಎನ್ನುವವರಾಗಿದ್ದು,ಇವರು ಕಮಲಶಿಲೆ ದೇವಾಲಯದಲ್ಲಿ ಹಿರಿಯ ಅರ್ಚಕರಾಗಿ ಪೂಜಾ ವಿಧಿಗಳನ್ನು ನಡೆಸುತ್ತಿದ್ದರು. ಮಂಗಳವಾರ ಸಂಜೆ 6 ಗಂಟೆ ಸುಮಾರಿಗೆ ಅವರ ಮನೆಯ ಬಳಿ ಘಟನೆ ನಡೆದಿದೆ. ಮೃತ ದೇಹ ಬುಧವಾರ ಬೆಳಗ್ಗೆ 10. 45ರ ಸುಮಾರಿಗೆ ಬಿದ್ದ ಸ್ಥಳದ 50 ಮೀಟರ್ ದೂರದಲ್ಲಿ ಪತ್ತೆಯಾಗಿದೆ.ಮೃತದೇಹವನ್ನು ಅಂಪಾರು ವಲಯದ ಶೌರ್ಯ ವಿಪತ್ತು ತಂಡದ ಮಂಜುನಾಥ್ ನಾಯ್ಕ್ ಮತ್ತು ತಂಡದವರು ಮೇಲಕೆತ್ತುವಲ್ಲಿ ಸಹಕರಿಸಿದ್ದಾರೆ.
ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಪೊಲೀಸರು ಸ್ಥಳದಲ್ಲೇ ಹಾಜರಿದ್ದು ಸ್ಥಳ ತನಿಖೆ ವರದಿ ಮಾಡಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಇಲ್ಲಿದೆ ʼKhatron Ke Khiladi 14ʼ ನಲ್ಲಿ ಭಾಗಿಯಾಗುವ ಸ್ಪರ್ಧಿಗಳ ಪಟ್ಟಿ..
Sandalwood; ಬದುಕು – ಭಾವನೆಗಳ ಸಂಗಮ ‘ದಿ ಸೂಟ್’
Pitroda’s remarks; ದೆಹಲಿ ಕಾಂಗ್ರೆಸ್ ಕಚೇರಿ ಬಳಿ ಬಿಜೆಪಿ ಪ್ರತಿಭಟನೆ
Pain; ‘ಅಸಹನೀಯ ಬೆನ್ನು ನೋವು’:ಸೊಂಟದ ಬೆಲ್ಟ್ ತೋರಿಸಿದ ತೇಜಸ್ವಿ ಯಾದವ್
Mumbai Indians ತಂಡದಲ್ಲಿ ಒಳ ಜಗಳ..; ರೋಹಿತ್, ಬುಮ್ರಾ, ಸೂರ್ಯ ಪ್ರತ್ಯೇಕ ಸಭೆ!