ಈಗ ಟೊಮಾಟೊ ಸಸಿಗೂ ದುಪ್ಪಟ್ಟು ಬೆಲೆ!
Team Udayavani, Aug 4, 2023, 7:31 AM IST
ಚಿಕ್ಕಬಳ್ಳಾಪುರ: ದೇಶಾದ್ಯಂತ ಟೊಮಾಟೊ ದರ ಗಗನಕ್ಕೇರುತ್ತಿರುವ ಬೆನ್ನಲ್ಲೇ ಟೊಮಾಟೊ ನಾರುಗೆ (ಸಸಿ) ಇನ್ನಿಲ್ಲದ ಬೇಡಿಕೆ ಸೃಷ್ಟಿಯಾಗಿದ್ದು ನರ್ಸರಿಗಳಲ್ಲಿ ಟೊಮಾಟೊ ನಾರು ದುಪ್ಪಟ್ಟು ಬೆಲೆಗೆ ಮಾರಾಟವಾಗುತ್ತಿವೆ.
ಕಳೆದೊಂದು ತಿಂಗಳಿಂದ ಟೊಮಾಟೊ ತನ್ನ ದರ ಏರಿಸಿಕೊಂಡು ಗ್ರಾಹಕರನ್ನು ಕಂಗಾಲಾಗಿಸಿದ್ದು, ಇದೀಗ ಟೊಮಾಟೊ ಬೆಳೆಯಲು ಮುಂದಾಗಿರುವ ರೈತರಿಗೆ ಸಸಿಗಳ ದರ ಏರಿಕೆ ಸದ್ದಿಲ್ಲದೇ ಕೈ ಕಚ್ಚುತ್ತಿದೆ. ಆರಂಭದಲ್ಲಿ 500 ರಿಂದ 600 ರೂ.ಗೆ ಮಾರಾಟಗೊಂಡ 15 ಕೆಜಿ ಟೊಮಾಟೊ ಬಾಕ್ಸ್ ಈಗ 2,000 ರೂ. ಗಡಿ ದಾಟಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಗುಣಮಟ್ಟದ ಟೊಮಾಟೊ ಕೆಜಿಗೆ ಈಗಲೂ 140 ರಿಂದ 150 ರೂ.ಗೆ ಕಡಿಮೆ ಇಲ್ಲ.
ಟೊಮಾಟೊ ದರ ಸಮರಕ್ಕೆ ಹೈರಾಣಾದ ಗ್ರಾಹಕರು ಹುಣಿಸೆ, ನಿಂಬೆ ಬಳಕೆಗೆ ಮುಂದಾಗಿದ್ದರೂ ಟೊಮಾಟೊ ದರ ಸದ್ಯಕ್ಕೆ ಇಳಿಕೆ ಕಾಣುವ ಲಕ್ಷಣ ಕಂಡುಬರುತ್ತಿಲ್ಲ. ಬೆಲೆ ಏರಿಕೆ ಬೆನ್ನಲ್ಲೇ, ಜಿಲ್ಲಾದ್ಯಂತ ಕೊಳವೆ ಬಾವಿ ಇರುವ ರೈತರು ಲಾಭದಾಯಕ ಟೊಮಾಟೊ ಬೆಳೆ ಬೆಳೆಯಲು ಮುಂದಾಗಿದ್ದಾರೆ. ಇದರ ಪರಿಣಾಮ ನರ್ಸರಿಗಳಲ್ಲಿ ಟೊಮಾಟೊ ನಾರು (ಸಸಿ)ಗಳ ಬೆಲೆಯಲ್ಲೂ ಸಹಜವಾಗಿ ಏರಿಕೆ ಕಂಡಿದೆ.
ಈ ಹಿಂದೆ ಒಂದು ಟೊಮಾಟೊ ಸಸಿ ನರ್ಸರಿಗಳಲ್ಲಿ ಕೇವಲ 30 ರಿಂದ 40 ಪೈಸೆಗೆ ಮಾರಾಟಗೊಳ್ಳುತ್ತಿದ್ದವು. ಆದರೆ ಮಾರುಕಟ್ಟೆಯಲ್ಲಿ ಟೊಮಾಟೊ ದರ ಏರಿದ್ದೇ ತಡ ಸಸಿಗಳಿಗೂ ಬೇಡಿಕೆ ಹೆಚ್ಚಾಗಿದೆ. ನರ್ಸರಿಗಳಲ್ಲಿ ಒಂದು ಟೊಮಾಟೊ ಸಸಿ 1 ರೂ. ನಿಂದ 1.20 ಪೈಸೆ ವರೆಗೂ ಮಾರಾಟವಾಗುತ್ತಿವೆ.
ಸಸಿಗಳಿಗೆ ಭಾರೀ ಬೇಡಿಕೆ
ತಜ್ಞರ ಪ್ರಕಾರ ಟೊಮಾಟೊ ದರ ಸದ್ಯಕ್ಕೆ ಇಳಿಕೆಯಾಗುವುದಿಲ್ಲ. ಇನ್ನೂ 2-3 ತಿಂಗಳು ಮಾರುಕಟ್ಟೆಯಲ್ಲಿ ಇದೇ ಬೆಲೆ ಇರುತ್ತದೆ ಎಂದು ಅಂದಾಜು ಮಾಡಿರುವ ಪರಿಣಾಮ ಜಿಲ್ಲೆಯ ರೈತರು ಹೆಚ್ಚಿನ ಪ್ರಮಾಣದಲ್ಲಿ ಟೊಮಾಟೊ ಬೆಳೆಯಲು ಮುಂದಾಗಿದ್ದಾರೆ, ಇದರಿಂದಾಗಿ ನರ್ಸರಿಗಳಲ್ಲಿ ಸಸಿಗಳಿಗೆ ಭಾರೀ ಬೇಡಿಕೆ ಸೃಷ್ಠಿಯಾಗಿದೆ. ಬೆಲೆಯೂ ಹೆಚ್ಚಳವಾಗಿದೆ.
ಈ ಹಿಂದೆ ಒಂದು ಟೊಮಾಟೊ ಸಸಿಗೆ 40 ಪೈಸೆ ಇತ್ತು. ಟೊಮಾಟೊ ದರ ಏರಿಕೆ ಪರಿಣಾಮ ಈಗ ಒಂದು ಸಸಿಗೆ 1 ರೂ.ನಿಂದ 1.20, 1.30 ಪೈಸೆಗೆ ಮಾರಾಟ ಮಾಡುತ್ತಿದ್ದಾರೆ. ಕೆಲವು ಕಡೆ ಗುಣಮಟ್ಟದ ಸಸಿ ಸಿಗುವುದೂ ಕಷ್ಟ. ಆದರೂ ನರ್ಸರಿಗಳಲ್ಲಿ ಸಿಗುವ ಸಸಿಗಳನ್ನೇ ಖರೀದಿಸಿ ನಾಟಿ ಮಾಡುತ್ತಿದ್ದೇವೆ.
ಶಂಕರ್, ಟೊಮಾಟೊ ಬೆಳೆಗಾರ, ಚಿಂತಾಮಣಿ.
ಕಾಗತಿ ನಾಗರಾಜಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನವಜಾತ ಶಿಶುವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಚರಂಡಿಗೆ ಎಸೆದ ಪಾಪಿಗಳು; ಪೊಲೀಸರಿಂದ ಶೋಧ
49 ಅಭ್ಯರ್ಥಿಗಳಿಂದ ಉಮೇದುವಾರಿಕೆ: ನಾಮಪತ್ರ ಸಲ್ಲಿಕೆಗೆ ಇಂದು ಕೊನೆ ದಿನ
JDS MP ಪ್ರಜ್ವಲ್ ಎಲ್ಲಿ? ಕುಟುಂಬದವರು ಸಹಿತ ಯಾರಿಗೂ ಗೊತ್ತಿಲ್ಲ: ಜಿ.ಟಿ.ದೇವೇಗೌಡ
ಪರಿಷತ್ ಚುನಾವಣೆ: 3 ಪಕ್ಷಕ್ಕೂ ಬಂಡಾಯ ಬಿಸಿ; ಪಕ್ಷದ ವಿರುದ್ಧವೇ ಸಡ್ಡು ಹೊಡೆದು ಸ್ಪರ್ಧೆ
Attendance ಕೊರತೆ ಇದ್ದರೂ ಎಸೆಸೆಲ್ಸಿ ಪರೀಕ್ಷೆ-2ಕ್ಕೆ ಅವಕಾಶ
MUST WATCH
ಹೊಸ ಸೇರ್ಪಡೆ
Mistake; ಮಗುವಿನ ಬೆರಳಿಗೆ ಶಸ್ತ್ರಚಿಕಿತ್ಸೆ ಬೇಕಿತ್ತು: ವೈದ್ಯರು ಮಾಡಿದ್ದು ನಾಲಗೆಗೆ!
J’khand; ಬಂಧಿತ ಸಚಿವ ಅಲಂಗೀರ್ ಆಲಂ 6 ದಿನಗಳ ಕಾಲ ಇಡಿ ಕಸ್ಟಡಿಗೆ
Naveen Patnaik ಅವರಿಗೆ ಬೀಳ್ಕೊಡುಗೆ ನೀಡಲು ಒಡಿಶಾ ಜನ ಸಜ್ಜು: ಜೆ.ಪಿ.ನಡ್ಡಾ
Money Laundering Case; ಇಡಿ ಸುಮ್ಮನೆ ಬಂಧಿಸುವಂತಿಲ್ಲ..: ಮಹತ್ವದ ತೀರ್ಪು ನೀಡಿದ ಸುಪ್ರೀಂ
ಬರಲಿದೆ ಮತ್ತೊಂದು ಸ್ಕ್ಯಾಮ್ ಸಿರೀಸ್: ʼಸ್ಕ್ಯಾಮ್ 2010: ಸುಬ್ರತಾ ರಾಯ್ʼ ಅನೌನ್ಸ್