Hubli: ದೇಶದ ಅಸ್ತಿತ್ವ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ: ಚಕ್ರತೀರ್ಥ
ಇಂಡಿಯಾ ಎಂದುಕೊಂಡು ದೇಶವನ್ನು ಇಬ್ಭಾಗ ಮಾಡಲು ಹೊರಟಿದ್ದಾರೆ
Team Udayavani, Aug 16, 2023, 10:13 AM IST
ಹುಬ್ಬಳ್ಳಿ: ದೇಶದ ಅಸ್ತಿತ್ವ ಉಳಿಸಿಕೊಳ್ಳಬೇಕಾದ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅಂಕಣಕಾರ ಮತ್ತು ಸಾಹಿತಿ ರೋಹಿತ ಚಕ್ರತೀರ್ಥ ಹೇಳಿದರು.
ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾಭವನದಲ್ಲಿ ಮಂಗಳವಾರ ಸ್ವಾತಂತ್ರ್ಯೋ ತ್ಸವ ನಿಮಿತ್ತ ಕಲಾ ಸುಜಯ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ವೀರ ಭಾರತಿ ನೃತ್ಯ ಸಂಭ್ರಮದಲ್ಲಿಅವರು ಮಾತನಾಡಿದರು. ದೇಶ ಉನ್ನತಿಯತ್ತ ಮುನ್ನಡೆಯುತ್ತಿದ್ದರೆ, ಕೆಲವರು ಇಂಡಿಯಾ ಎಂದುಕೊಂಡು ದೇಶವನ್ನು ಇಬ್ಭಾಗ ಮಾಡಲು ಹೊರಟಿದ್ದಾರೆ. ನಾವು ಎಚ್ಚೆತ್ತುಕೊಳ್ಳಬೇಕೆಂದರು.
ಪ್ರಜ್ಞಾ ಪ್ರವಾಹ ಅಖಿಲ ಭಾರತೀಯ ಸಹ ಸಂಯೋಜಕ ರಘುನಂದನ ಮಾತನಾಡಿ, ಇಂದಿನ ವಾಸ್ತವಿಕತೆ ನೋಡಿಕೊಂಡು ನಾವೆಲ್ಲರೂ ಮುನ್ನಡೆಯಬೇಕಾಗಿದೆ. ಲವ್ ಜಿಹಾದ್, ಮತಾಂತರ, ವಿದೇಶಿ ಸಂಸ್ಕೃತಿ ಅಳವಡಿಕೆ ಇವೆಲ್ಲವನ್ನೂ ಎದುರಿಸುವ ಶಕ್ತಿ ಭಾರತ ಮಾತೆಗೆ ಬರಬೇಕು ಹಾಗೂ ನಾವೆಲ್ಲರೂ ಎದುರಿಸಿ ತಡೆಯುವ ಅವಶ್ಯಕತೆ ಇದೆ ಎಂದು ಹೇಳಿದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿದರು. ಕಲಾ ಸುಜಯ ಹುಬ್ಬಳ್ಳಿ ಹಾಗೂ ಲಕ್ಷ್ಮೇಶ್ವರ ತಂಡದ 75 ಜನರು ವೀರ
ಭಾರತಿ ನೃತ್ಯ ರೂಪಕದ ಮೂಲಕ ಮನ ಗೆದ್ದರು. ಗೋವಿಂದ ಜೋಶಿ, ಅನಂತ ಪದ್ಮನಾಭ ಐತಾಳ, ಆನಂದ ಪೂಜಾರಿ, ಆನಂದ ಗುರುಸ್ವಾಮಿ, ಗಂಗಾವತಿ ಪ್ರಾಣೇಶ, ಎಸ್.ಬಿ.ಶೆಟ್ಟಿ, ಎಂ.ಎ. ಸುಬ್ರಮಣ್ಯ ಮೊದಲಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anjali Ambigera Case; ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ
Anjali case; ಕಾನೂನಿಗೆ ಬೆಲೆಯಿದೆ ಎಂದು ಸರ್ಕಾರ ತೋರಿಸಲಿ: ಮೂರುಸಾವಿರ ಮಠದ ಜಗದ್ಗುರು
Anjali Ambigera case: ಹುಬ್ಬಳ್ಳಿಯಲ್ಲಿ ಎಬಿವಿಪಿ ಪ್ರತಿಭಟನೆ
ಧಾರವಾಡ ಮಾವು ಮೇಳಕ್ಕೆ ಉತ್ತಮ ಸ್ಪಂದನೆ: 40 ಟನ್ ಮಾರಾಟ, ಮತ್ತೆ ಮೂರು ದಿನ ವಿಸ್ತರಣೆ
Dharwad: ಶರಣರ ತತ್ವ ಪ್ರಚಾರಕ್ಕೆ ವಚನ ವಿಶ್ವವಿದ್ಯಾಲಯ ಬೇಕು : ಬಾಲ್ಕಿ ಶ್ರೀ