Karnataka Lokayukta ಅಕ್ರಮ ಆಸ್ತಿ ಸಾಕ್ಷ್ಯ ಸಂಗ್ರಹವೇ ಲೋಕಾಯುಕ್ತಕ್ಕೆ ಸವಾಲು !

ಲೋಕಾಯುಕ್ತಕ್ಕೆ ಅಧಿಕಾರ ಸಿಕ್ಕ ಬಳಿಕ 42 ಭ್ರಷ್ಟರು ಬಲೆಗೆ

Team Udayavani, Aug 26, 2023, 6:45 AM IST

Karnataka Lokayukta ಅಕ್ರಮ ಆಸ್ತಿ ಸಾಕ್ಷ್ಯ ಸಂಗ್ರಹವೇ ಲೋಕಾ ಪೊಲೀಸರಿಗೆ ಸವಾಲು !

ಬೆಂಗಳೂರು: ರಾಜ್ಯದ ಲಂಚಕೋರ ಅಧಿಕಾರಿಗಳಿಗೆ ಸಿಂಹ ಸ್ವಪ್ನವಾಗಿ ಕಾಡುತ್ತಿರುವ ಲೋಕಾಯುಕ್ತ ಪೊಲೀಸರಿಗೆ ಭ್ರಷ್ಟರ ಅಕ್ರಮ ಆಸ್ತಿಯ ಸಾಕ್ಷ್ಯ ಸಂಗ್ರಹವೇ ದೊಡ್ಡ ಸವಾಲಾಗಿದೆ. ಪರಿಣಾಮ ದಾಳಿಗೊಳಗಾದ ಅಧಿಕಾರಿಗಳು 6 ತಿಂಗಳ ಬಳಿಕ ಮತ್ತೆ ಸೇವೆಗೆ ಹಾಜರಾಗಿ ಹಳೆ ಚಾಳಿಯನ್ನು ಮುಂದುವರಿಸುತ್ತಿರುವ ಆರೋಪ ಕೇಳಿ ಬಂದಿದೆ.

ಲೋಕಾಯುಕ್ತ ಪೊಲೀಸರಿಗೆ ಮತ್ತೆ ಅಧಿಕಾರ ಸಿಕ್ಕಿ ವರ್ಷ ಕಳೆದಿದ್ದು, ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿದ ಆಸ್ತಿ ಹೊಂದಿರುವ 42 ಅಧಿಕಾರಿಗಳನ್ನು ಬಂಧಿಸಲಾಗಿದೆ. ಆದರೆ ಭ್ರಷ್ಟರ ಕೋಟೆಗೆ ದೊಡ್ಡ ಸೈನ್ಯದೊಂದಿಗೆ ಲಗ್ಗೆ ಇಟ್ಟು ಭಾರೀ ಮೊತ್ತದ ಸಂಪತ್ತು ಬೆಳಕಿಗೆ ತರಲಷ್ಟೇ ಲೋಕಾಯುಕ್ತ ಸೀಮಿತವಾಗಿದೆ. ದಾಳಿಗೊಳಗಾದವರು ಅಕ್ರಮ ಎಸಗಿರುವುದಕ್ಕೆ ಸೂಕ್ತ ಸಾಕ್ಷ್ಯಾಧಾರ ಪತ್ತೆಹಚ್ಚಿ ದೋಷಾರೋಪಣ ಪಟ್ಟಿ ಸಲ್ಲಿಸುವ ಪ್ರಕ್ರಿಯೆ ವಿಳಂಬವಾಗುತ್ತಿದೆ. ಪರಿಣಾಮ ಡಿಎ ಕೇಸ್‌ನಲ್ಲಿ ಲೋಕಾಯುಕ್ತ ದಾಳಿಗೊಳಗಾದ ಒಬ್ಬ ಭ್ರಷ್ಟ ಅಧಿಕಾರಿಗಳಿಗೂ ಶಿಕ್ಷೆಯಾಗಿಲ್ಲ.

ಸಾಕ್ಷ್ಯ ಪತ್ತೆ ಹಚ್ಚಲು ಸವಾಲು ಯಾಕೆ?
ಭಾರೀ ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಪ್ರಕರಣಗಳಲ್ಲಿ ಸರಕಾರಿ ಅಧಿಕಾರಿಗಳ ಮೇಲಿನ ದಾಳಿಯ ಬಳಿಕ ದಾಳಿಗೊಳಗಾದ ವ್ಯಕ್ತಿಯ ಆದಾಯ ಮೂಲ, ಆಸ್ತಿ ವಿವರದಿಂದ ಹಿಡಿದು ವಿದ್ಯುತ್‌ ಬಿಲ್‌ವರೆಗಿನ ಸಣ್ಣಪುಟ್ಟ ದಾಖಲೆಗಳನ್ನೂ ಬಿಡದಂತೆ ಕಲೆ ಹಾಕಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖೀಸುವುದು ಕಡ್ಡಾಯವಾಗಿದೆ. ಈ ದಾಖಲೆ ಸಂಗ್ರಹಿಸಲು ಕನಿಷ್ಠ 2ರಿಂದ 3 ವರ್ಷ ಹಿಡಿಯುತ್ತದೆ. ಹೀಗಾಗಿ ಶೇ.80ರಷ್ಟು ಪ್ರಕರಣಗಳಲ್ಲಿ ಸಾಕ್ಷ್ಯ ಪತ್ತೆ ಹಚ್ಚುವುದೇ ಸವಾಲಾಗಿದೆ. ಇತರ ಪ್ರಕರಣಗಳಲ್ಲಿ ಇಷ್ಟು ದಾಖಲೆ ಸಂಗ್ರಹಿಸುವ ಅಗತ್ಯವಿರುವುದಿಲ್ಲ.
ಇನ್ನು ಲೋಕಾಯುಕ್ತದಲ್ಲಿರುವ ಪ್ರಮುಖ ಪ್ರಕರಣಗಳಲ್ಲಿ ಅಭಿಯೋಜನೆ ಮಂಜೂರಾತಿ ಸಿಗುವುದು ವಿಳಂಬವಾಗುತ್ತಿದೆ.

ದಾಳಿಗೊಳಗಾದವರ ವೃತ್ತಿಗೆ ಸಂಬಂಧಿಸಿ ಯಾವುದೇ ವಿಚಾರಣೆ ನಡೆಸಬೇಕಾದರೂ ಸಕ್ಷಮ ಪ್ರಾಧಿಕಾರದಿಂದ ಲೋಕಾಯುಕ್ತ ಪೊಲೀಸರು ಕಡ್ಡಾಯವಾಗಿ ಅನುಮತಿ ಪಡೆಯಲೇ ಬೇಕು. ಮೇಲಧಿಕಾರಿಗಳು ಸುಲಭವಾಗಿ ತಮ್ಮ ಅಧೀನ ಅಧಿಕಾರಿಗಳ ವಿಚಾರಣೆಗೆ ಅನುಮತಿ ನೀಡುವುದಿಲ್ಲ. ಕ್ಲಾಸ್‌-1 ಅಧಿಕಾರಿಗಳ ವಿಚಾರಣೆಗೆ ಸರಕಾರದಿಂದ ಅನುಮತಿ ಸಿಗುವುದೇ ವಿರಳ. ಹೀಗಾಗಿ ಲೋಕಾಯುಕ್ತ ಪೊಲೀಸರಿಗೆ ಸರಕಾರಿ ಅಧಿಕಾರಿಗಳ ವಿಚಾರಣೆ ನಡೆಸುವುದೇ ಹರಸಾಹಸವಾಗಿದೆ. ಭ್ರಷ್ಟಾಚಾರ ಎಸಗಿ ಸಿಕ್ಕಿಬಿದ್ದ ಬಹುತೇಕ ಅಧಿಕಾರಿಗಳು ನ್ಯಾಯಾಲಯದ ಮೊರೆ ಹೋಗಿ ತನಿಖೆಗೆ ತಡೆ ತಂದಿದ್ದಾರೆ. ಕೆಲವೊಮ್ಮೆ ದಾಳಿಗೊಳಗಾದವವರು ಪ್ರಭಾವಿ ರಾಜಕಾರಣಿಗಳ ಮೊರೆ ಹೋಗಿ ತನಿಖಾಧಿಕಾರಿಗಳ ಮೇಲೆ ಒತ್ತಡ ಹೇರುತ್ತಾರೆ. ಸಾಕ್ಷ್ಯ ಸಿಗದಿದ್ದರೆ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಬಿ-ರಿಪೋರ್ಟ್‌ ಸಲ್ಲಿಸುತ್ತಾರೆ ಎಂಬ ಆರೋಪವೂ ಇದೆ.

ಸಿಬಂದಿ ಕೊರತೆ
ಲೋಕಾಯುಕ್ತ ಸಂಸ್ಥೆಗೆ ಹೆಚ್ಚುವರಿ ಸಿಬಂದಿ ನೀಡುವಂತೆ ಸರಕಾರಕ್ಕೆ ಪತ್ರ ಬರೆದು 6 ತಿಂಗಳುಗಳಾದರೂ ಪ್ರಯೋಜನವಾಗಿಲ್ಲ. ದೊಡ್ಡ ಮಟ್ಟದ ದಾಳಿ ನಡೆದಾಗ ಸಿಬಂದಿ ಕೊರತೆಯಿಂದ ದಾಖಲೆ ಕಲೆ ಹಾಕಲು ಸಮಸ್ಯೆಯಾಗುತ್ತಿದೆ. ಸೂಕ್ತ ಸಿಬಂದಿ ಬಲ ನೀಡಿದರೆ ಇನ್ನಷ್ಟು ಸಮರ್ಥವಾಗಿ ದಾಳಿ ನಡೆಸಿ ಅಕ್ರಮ ಪತ್ತೆ ಹಚ್ಚಬಹುದು ಎನ್ನುತ್ತಾರೆ ಲೋಕಾಯುಕ್ತ ಪೊಲೀಸರು.

ಮತ್ತೆ ಕಚೇರಿಗೆ ಹಾಜರ್‌
ಅಕ್ರಮ ಆಸ್ತಿ ಪ್ರಕರಣಗಳಲ್ಲಿ ಲೋಕಾಯುಕ್ತ ದಾಳಿಗೊಳಗಾಗಿ ಅಮಾನತುಗೊಂಡ 42 ಸರಕಾರಿ ಅಧಿಕಾರಿಗಳ ಪೈಕಿ ಕೆಲವರು ಮತ್ತೆ ಕೆಲಸಕ್ಕೆ ಹಾಜರಾಗಿ ಭ್ರಷ್ಟಾಚಾರ ನಡೆಸುತ್ತಿರುವ ಗಂಭೀರ ಆರೋಪವಿದೆ. ಸರಕಾರದ ಮೇಲಧಿಕಾರಿಗಳೇ ಇವರಿಗೆ ಶ್ರೀರಕ್ಷೆಯಾಗಿದ್ದಾರೆ ಎಂಬ ಆರೋಪವೂ ಇದೆ.

ಆದಾಯಕ್ಕಿಂತ ಹೆಚ್ಚಿನ ಆಸ್ತಿ ಪ್ರಕರಣಗಳಲ್ಲಿ ತನಿಖೆ ನಡೆಸಿ ದಾಖಲೆ ಕಲೆ ಹಾಕಲು ಹೆಚ್ಚಿನ ಸಮಯ ಬೇಕಾಗುತ್ತದೆ. ಲೋಕಾಯುಕ್ತ ಪೊಲೀಸರು ದಾಳಿ ನಡೆಸಿರುವ ಪ್ರಕರಣಗಳನ್ನು ಸೂಕ್ತ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ.
– ನ್ಯಾ| ಬಿ.ಎಸ್‌.ಪಾಟೀಲ್‌. ಲೋಕಾಯುಕ್ತ

ಲೋಕಾಯುಕ್ತ ಪೊಲೀಸರು ದಾಳಿ ನಡೆಸಿರುವ ಪ್ರಕರಣಗಳಲ್ಲಿ ಬಲವಾದ ಸಾಕ್ಷ್ಯ ಸಂಗ್ರಹಿಸಿ ದೋಷಾರೋಪ ಪಟ್ಟಿ ಸಲ್ಲಿಸುವ ಪ್ರಕ್ರಿಯೆಗಳು ನಡೆಯುತ್ತಿವೆ. ಬಹುತೇಕ ಪ್ರಮುಖ ಪ್ರಕರಣಗಳ ತನಿಖೆ ನಡೆಯುತ್ತಿದೆ.
– ಡಾ| ಎ.ಸುಬ್ರಹ್ಮಣ್ಯೇಶ್ವರ ರಾವ್‌, ಐಜಿಪಿ, ಲೋಕಾಯುಕ್ತ

-ಅವಿನಾಶ ಮೂಡಂಬಿಕಾನ

ಟಾಪ್ ನ್ಯೂಸ್

Rain ಮುಂದುವರಿದ “ಎಲ್ಲೋ ಅಲರ್ಟ್‌’

Rain ಮುಂದುವರಿದ “ಎಲ್ಲೋ ಅಲರ್ಟ್‌’

Foot ball

Women’s ವಿಶ್ವಕಪ್‌ ಫುಟ್‌ಬಾಲ್‌ ಆತಿಥ್ಯ ಬ್ರಝಿಲ್‌ಗೆ ಲಭಿಸಿತು

Udupi ಕುಡಿಯುವ ನೀರು ಕೊರತೆ ನೀಗಿಸಲು ಜಿಲ್ಲಾಧಿಕಾರಿ ಸೂಚನೆ

Udupi ಕುಡಿಯುವ ನೀರು ಕೊರತೆ ನೀಗಿಸಲು ಜಿಲ್ಲಾಧಿಕಾರಿ ಸೂಚನೆ

Malpe ಸೈಂಟ್‌ ಮೇರೀಸ್‌ ಪ್ರವಾಸಿ ಬೋಟ್‌ ಯಾನ, ಜಲಕ್ರೀಡೆ ತಾತ್ಕಾಲಿಕ ಸ್ಥಗಿತ

Malpe ಸೈಂಟ್‌ ಮೇರೀಸ್‌ ಪ್ರವಾಸಿ ಬೋಟ್‌ ಯಾನ, ಜಲಕ್ರೀಡೆ ತಾತ್ಕಾಲಿಕ ಸ್ಥಗಿತ

1-wqewqe

Impact player ನಿಯಮದಿಂದ ಬೌಲರ್‌ಗಳಿಗೆ ಹೊಡೆತ: ಶಾಬಾಜ್‌

Natural Ice Cream ಸಂಸ್ಥಾಪಕ ರಘುನಂದನ್‌ ಕಾಮತ್‌ ಇನ್ನಿಲ್ಲ

Natural Ice Cream ಸಂಸ್ಥಾಪಕ ರಘುನಂದನ್‌ ಕಾಮತ್‌ ಇನ್ನಿಲ್ಲ

Udupi ಪೊಲೀಸರ ಕರ್ತವ್ಯಕ್ಕೆ ಅಡ್ಡಿ: ಕಾನೂನು ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲು

Udupi ಪೊಲೀಸರ ಕರ್ತವ್ಯಕ್ಕೆ ಅಡ್ಡಿ: ಕಾನೂನು ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weewqeqw

Kushtagi:ಬಹಿರ್ದೆಸೆಗೆ ಕುಳಿತ ಇಬ್ಬರ ಬಲಿ ಪಡೆದ ಶೌಚಾಲಯದ ಗೋಡೆ

Siddaramaiah ಬರ ಪರಿಹಾರದ ಮೊತ್ತ ಸಾಲಕ್ಕೆ ಹೊಂದಾಣಿಕೆ ಬೇಡ

Siddaramaiah ಬರ ಪರಿಹಾರದ ಮೊತ್ತ ಸಾಲಕ್ಕೆ ಹೊಂದಾಣಿಕೆ ಬೇಡ

Farmers ಹಣ ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಸೂಚಿಸಿ: ವಿಪಕ್ಷ ನಾಯಕ ಆರ್‌. ಅಶೋಕ್‌

Farmers ಹಣ ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಸೂಚಿಸಿ: ವಿಪಕ್ಷ ನಾಯಕ ಆರ್‌. ಅಶೋಕ್‌

SSLC EXAM-2, ಪರಿಹಾರ ಬೋಧನ ತರಗತಿಗಳು ಮುಂದೂಡಿಕೆ

SSLC EXAM-2, ಪರಿಹಾರ ಬೋಧನ ತರಗತಿಗಳು ಮುಂದೂಡಿಕೆ

accident

Koppal; ಟ್ರ್ಯಾಕ್ಟರ್ ಗೆ ಖಾಸಗಿ ಬಸ್ ಢಿಕ್ಕಿ: ಸ್ಥಳದಲ್ಲೇ ನಾಲ್ವರ ಸಾವು

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

Rain ಮುಂದುವರಿದ “ಎಲ್ಲೋ ಅಲರ್ಟ್‌’

Rain ಮುಂದುವರಿದ “ಎಲ್ಲೋ ಅಲರ್ಟ್‌’

Foot ball

Women’s ವಿಶ್ವಕಪ್‌ ಫುಟ್‌ಬಾಲ್‌ ಆತಿಥ್ಯ ಬ್ರಝಿಲ್‌ಗೆ ಲಭಿಸಿತು

Udupi ಕುಡಿಯುವ ನೀರು ಕೊರತೆ ನೀಗಿಸಲು ಜಿಲ್ಲಾಧಿಕಾರಿ ಸೂಚನೆ

Udupi ಕುಡಿಯುವ ನೀರು ಕೊರತೆ ನೀಗಿಸಲು ಜಿಲ್ಲಾಧಿಕಾರಿ ಸೂಚನೆ

Malpe ಸೈಂಟ್‌ ಮೇರೀಸ್‌ ಪ್ರವಾಸಿ ಬೋಟ್‌ ಯಾನ, ಜಲಕ್ರೀಡೆ ತಾತ್ಕಾಲಿಕ ಸ್ಥಗಿತ

Malpe ಸೈಂಟ್‌ ಮೇರೀಸ್‌ ಪ್ರವಾಸಿ ಬೋಟ್‌ ಯಾನ, ಜಲಕ್ರೀಡೆ ತಾತ್ಕಾಲಿಕ ಸ್ಥಗಿತ

1-wqewqe

Impact player ನಿಯಮದಿಂದ ಬೌಲರ್‌ಗಳಿಗೆ ಹೊಡೆತ: ಶಾಬಾಜ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.