School Time: ಪರಿಹಾರ ಗೊತ್ತಿದ್ರೆ ನಮಗೂ ಹೇಳ್ರೀ…


Team Udayavani, Sep 3, 2023, 10:54 AM IST

School Time: ಪರಿಹಾರ ಗೊತ್ತಿದ್ರೆ ನಮಗೂ ಹೇಳ್ರೀ…

ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಬದಲಾಗಿ, ಗುಣಮಟ್ಟದ ಶಿಕ್ಷಣ ಕೊಡಿಸೋಣ ಅಂತ ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದೇವೆ. ಸರ್ಕಾರಿ ಶಾಲೆಗಳಾದರೆ ಮನೆಯ ಹತ್ತಿರದಲ್ಲೆಲ್ಲೋ ಇರುತ್ತಿದ್ದವು. ಇದೀಗ ನಮಗೆ ಬೇಕಾದ ಖಾಸಗಿ ಶಾಲೆಗಳಿಗೆ ಸೇರಿಸುವ ಧಾವಂತದಲ್ಲಿ ಅವು ಎಷ್ಟು ದೂರವಿದ್ದರೂ ಸರಿಯೇ ಅನ್ನುವ ಮನಸ್ಥಿತಿ ಎಲ್ಲಾ ಪೋಷಕರದ್ದೂ ಆಗಿದೆ. ಹಾಗಾಗಿ ಎಂಟೂವರೆಗೆ ಶುರುವಾಗುವ ಶಾಲೆಗೆ, ಮಕ್ಕಳು ಕಡಿಮೆಯೆಂದರೂ ಏಳು ಗಂಟೆಯಿಂದ ಏಳೂವರೆಯ ಒಳಗೆ ಸ್ಕೂಲ್‌ಬಸ್‌ ಏರಬೇಕು.

ಏಳು ಗಂಟೆಗೆ ಹೊರಡಬೇಕೆಂದರೆ ಏನಿಲ್ಲವೆಂದರೂ ಆರು ಗಂಟೆಗಾದರೂ ಏಳಬೇಕು. ಆದರೆ ಆ ವಯಸ್ಸಿಗೆ ಆ ಸಮಯದಲ್ಲಿ ಮಕ್ಕಳು ಸುಖವಾದ ನಿದ್ರೆ ಮಾಡುತ್ತಿರುತ್ತವೆ. ಬಲವಂತವಾಗಿ ಎಬ್ಬಿಸಿ ಅವುಗಳು ಅಳುತ್ತಿದ್ದರೂ ಸ್ನಾನ ಮಾಡಿಸಿ ರೆಡಿ ಮಾಡುವುದು ದೊಡ್ಡ ಸಾಹಸವೇ ಸರಿ. ಇದು ಇಷ್ಟಕ್ಕೇ ನಿಲ್ಲುವುದಿಲ್ಲ. ಇದಕ್ಕೆ ಮೊದಲು ಅವುಗಳಿಗೆ ಲಂಚ್‌ ಬಾಕ್ಸು, ಶಾರ್ಟ್‌ ಬ್ರೇಕು, ಫ್ರೂಟ್‌ ಬ್ರೇಕು ಅಂತ ಒಂದೊಂದಕ್ಕೆ ಒಂದೊಂದು  ತಿನಿಸನ್ನು ರೆಡಿ ಮಾಡಬೇಕು. ಅವುಗಳಿಗೆ ಯಾವುದೇ ಜಂಕ್‌ ಫ‌ುಡ್‌ ಹಾಕುವಂತಿಲ್ಲ ಅನ್ನುವುದು ಶಾಲೆಯ ತಾಕೀತು. ಹಾಗಾಗಿ ಇವುಗಳಿಗೆಲ್ಲ ಮೂರು ಬಗೆಯ ತಿನಿಸನ್ನು ಸಿದ್ಧಪಡಿಸಬೇಕೆಂದರೆ ಅದಕ್ಕಾಗಿ ಹಿಂದಿನ ದಿನವೇ ಸಿದ್ಧತೆ ಮಾಡಿಕೊಂಡಿರಬೇಕು. ಹಾಗೆ ಮಾಡಿಕೊಂಡರೂ ಪ್ರತೀ ದಿನ ಬೆಳಿಗ್ಗೆ ಸೂರ್ಯ ಹುಟ್ಟುವುದರೊಳಗೆ ಏಳಬೇಕು.

ಯೂನಿಫಾರ್ಮ್ ಇಸ್ತ್ರಿ ಮಾಡುವುದು, ಶೂ ಪಾಲಿಶ್‌, ಐಡಿ ಕಾರ್ಡ್‌ ಸಿಗುವಂತೆ ಎತ್ತಿಡುವುದನ್ನು ಮರೆಯುವಂತಿಲ್ಲ. ಇದರ ಮಧ್ಯೆ ನಿನ್ನೆಯ ದಿನದ ಹೋಂವರ್ಕ್‌ ಮಾಡಿದ್ದೀರ, ಬುಕ್‌ ಅನ್ನು ಬ್ಯಾಗಿಗೆ ಹಾಕಿಕೊಂಡಿದ್ದೀರ ಅಂತ ವಿಚಾರಿಸಿಕೊಳ್ಳುವುದು ಮಿಸ್‌ ಮಾಡಬಾರದ ಚೆಕ್‌ಲಿಸ್ಟ್‌.

ಅಷ್ಟು ಬೆಳಗ್ಗೆ ಶಾಲೆಗೆ ಹೋಗುವ ಮಕ್ಕಳಿಗೆ ಅಲ್ಲಿ ತಿಂಡಿ ತಿನ್ನಲು ಸಮಯವಿರುವುದಿಲ್ಲ. ಹಾಗಾಗಿ ಶಾಲೆಗೆ ಹೋಗುವ ಧಾವಂತದಲ್ಲಿರುವ ಮಕ್ಕಳಿಗೆ ತಿಂಡಿಯನ್ನೂ ತಿನ್ನಿಸಬೇಕು. ಅಷ್ಟು ಬೆಳಿಗ್ಗೆ ಇನ್ನೂ ನಿದ್ರೆಯ ಗುಂಗಿನಲ್ಲಿರುವ ಮಕ್ಕಳು ಒಂದು ತುತ್ತು ತಿನ್ನುವುದೇ ಹೆಚ್ಚು. ಪ್ರತೀ ತುತ್ತು ತಿನ್ನಲು ಕಷ್ಟಪಡುತ್ತವೆ. ಹಸಿವಿಲ್ಲದೆ ಅವುಗಳಿಗೆ ಅಷ್ಟು ಬೆಳಿಗ್ಗೆಯೇ ತಿನ್ನುವ ಮನಸ್ಸಾದರೂ ಹೇಗೆ ಬಂದೀತು ಹೇಳಿ? ನೀವೇನಾದರೂ ಮಗುವಿನ ಬದಲು ಆ ಅಮ್ಮನಿಗೇ ಅಷ್ಟು ಬೆಳಿಗ್ಗೆ ತಿಂಡಿ ಕೊಟ್ಟು ತಿನ್ನಿ ಅಂದರೆ- “ಈಗಲೇ ಬೇಡ. ಯಾರು ತಿಂತಾರೆ ಇಷ್ಟು ಬೆಳಿಗ್ಗೆ?’ ಅಂತಾರೆ! ಆದರೆ ಅವರ ಮಕ್ಕಳು ಹಾಗೆಲ್ಲ ಮಾಡುವ ಹಾಗಿಲ್ಲ. ತಿಂಡಿ ತಿಂದು ಹೋಗಲೇಬೇಕು. ಅವು ಕಡಿಮೆ ತಿಂದು ಶಾಲೆಗೆ ಹೋದರಂತೂ ಅಮ್ಮನಿಗೆ ಸಂಜೆಯವರೆಗೂ ಮನಸ್ಸಿಗೆ ನೆಮ್ಮದಿಯಿಲ್ಲ.

“ಶಾಲೆಗೆ ಹೋಗುತ್ತಿರುವ ತನ್ನ ಮಕ್ಕಳು ಯಾಕೋ ಸರಿಯಾಗಿ ತಿನ್ನುತ್ತಿಲ್ಲ…’ ಅನ್ನುವುದು ಪ್ರಪಂಚದ ಎಲ್ಲ ತಾಯಂದಿರ ಒಂದೇ ದೂರು! ಏನಾದರೂ ಸಮಸ್ಯೆಯಿದೆಯಾ ಅಂತ ಡಾಕ್ಟ್ರ ಹತ್ತಿರ ಹೋಗಿ- “ಡಾಕ್ಟ್ರೇ…. ನನ್‌ ಮಗ/ ಮಗಳು ಯಾಕೋ ಸರಿಯಾಗಿ ಊಟನೇ ಮಾಡ್ತಿಲ್ಲ. ಏನಾದರೂ ಪ್ರಾಬ್ಲಿಮ್‌ ಇದೆಯಾ ನೋಡ್ತೀರಾ?’ ಅಂತ ಕೇಳಿದರೆ, ಆಗ ಆ ಡಾಕ್ಟರ್‌ ಹೇಳ್ತಾರೆ: “ಅದಕ್ಕೆ ಏನಾದ್ರೂ ಪರಿಹಾರ ಸಿಕ್ಕರೆ ನಮಗೂ ಹೇಳ್ರಮ್ಮ. ನಮ್‌ ಮನೆಲೂ ಎರಡು ಮಕ್ಕಳಿದಾವೆ. ಅವೂ ಸ್ಕೂಲಿಗೆ ಹೋಗುವ ಮುನ್ನ ದಿನಾ ಸರಿಯಾಗಿ ತಿಂತಿಲ್ಲ ಅಂತ ನಮ್‌ ಮನೆಯವಳೂ ಬೇಜಾರ್‌ ಮಾಡ್ಕೊತಿರ್ತಾಳೆ’ ಅಂತ! ‌

ಸಂತೋಷ್‌ ಕುಮಾರ್‌ ಎಲ್. ಎಂ

ಟಾಪ್ ನ್ಯೂಸ್

Beans Price: ರಾಂಚಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಬೀನ್ಸ್‌ !

Beans Price: ರಾಂಚಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಬೀನ್ಸ್‌!

Bidar; ಪಲ್ಟಿಯಾಗಿ ನಾಲಿಗೆ ಬಿದ್ದ ಕಾರು; ಚಾಲಕ ಸ್ಥಳದಲ್ಲೇ ಸಾವು

Bidar; ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ನಾಲಿಗೆ ಬಿದ್ದ ಕಾರು; ಚಾಲಕ ಸ್ಥಳದಲ್ಲೇ ಸಾವು

Why not hold a press conference? Prime Minister Modi replied

PM Modi ಪತ್ರಿಕಾಗೋಷ್ಠಿ ಯಾಕೆ ನಡೆಸುವುದಿಲ್ಲ? ಉತ್ತರಿಸಿದ ಪ್ರಧಾನಿ ಮೋದಿ

4-Pavagada

Pavagada: ಸಿಡಿಲಿನ ಪರಿಣಾಮ ಹೊತ್ತಿ ಉರಿದ ದನದ ಕೊಟ್ಟಿಗೆ; ಸ್ಥಳದಲ್ಲಿಯೇ ಹಸು ಸಜೀವ ದಹನ

Sunil Chhetri

Sunil Chhetri ಸರಿಸಾಟಿಯಿಲ್ಲದ ಆಟಗಾರ; ಭಾರತ ಫುಟ್‌ಬಾಲ್‌ನ ತೆಂಡುಲ್ಕರ್‌ ಚೆಟ್ರಿ

ಲೈಂಗಿಕ ದೌರ್ಜನ್ಯ: ಸಾಕ್ಷ್ಯ ಸಂಗ್ರಹಕ್ಕೆ ಇನ್ಮುಂದೆ ಸುರಕ್ಷಿತ ಕಿಟ್‌ ಬಳಕೆ

ಲೈಂಗಿಕ ದೌರ್ಜನ್ಯ: ಸಾಕ್ಷ್ಯ ಸಂಗ್ರಹಕ್ಕೆ ಇನ್ಮುಂದೆ ಸುರಕ್ಷಿತ ಕಿಟ್‌ ಬಳಕೆ

7

Miyazaki mango: ಶಂಕರಪುರದಲ್ಲಿ ವಿಶ್ವದ ದುಬಾರಿ ಮಾವಿನಹಣ್ಣು! 


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

17

Baratang‌ Island: ಬಾರಾತಂಗ್‌ ಎಂಬ ಬೆರಗು

Mother’s Day: ಅಮ್ಮ ಅಂದರೆ ಪ್ರೀತಿಯ ಕಡಲು, ಮಮತೆಯ ಮಡಿಲು 

Mother’s Day: ಅಮ್ಮ ಅಂದರೆ ಪ್ರೀತಿಯ ಕಡಲು, ಮಮತೆಯ ಮಡಿಲು 

11

ಮೊಬೈಲ್‌ ಮಾಯಾಜಾಲ ರೀಲ್ಸ್‌ ಇಂದ್ರಜಾಲ!: ರೀಲ್‌ಗ‌ಳಿಗೆ ಮರುಳಾಗಬೇಡಿ, ನೆನಪು ಕುಂದುತ್ತೆ 

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

Vijayapura; ತ್ಯಾಜ್ಯನೀರಿನ ಸಂಸ್ಕರಣಾಘಟಕ ದುರಂತ; ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ತಂಡ ಭೇಟಿ

Vijayapura; ತ್ಯಾಜ್ಯನೀರಿನ ಸಂಸ್ಕರಣಾಘಟಕ ದುರಂತ; ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ತಂಡ ಭೇಟಿ

Bengaluru: ಬೆದರಿಸಲು ನೇಣಿಗೆ ಕೊರಳೊಡ್ಡಿದ ಪತಿ ದಿಢೀರ್‌ ಕುಣಿಕೆ ಬಿಗಿದು ಸಾವು

Bengaluru: ಬೆದರಿಸಲು ನೇಣಿಗೆ ಕೊರಳೊಡ್ಡಿದ ಪತಿ ದಿಢೀರ್‌ ಕುಣಿಕೆ ಬಿಗಿದು ಸಾವು

Fraud: ಗೃಹ ಸಚಿವರ ಆಪ್ತ ಎಂದು ನಂಬಿಸಿ ಹಲವರಿಗೆ ವಂಚನೆ

Fraud: ಗೃಹ ಸಚಿವರ ಆಪ್ತ ಎಂದು ನಂಬಿಸಿ ಹಲವರಿಗೆ ವಂಚನೆ

Complaint: ಖಾಸಗಿ ಫೋಟೋ ತೋರಿಸಿ ಬೆದರಿಸಿದ ವೈದ್ಯನ ವಿರುದ್ಧ ದೂರು

Complaint: ಖಾಸಗಿ ಫೋಟೋ ತೋರಿಸಿ ಬೆದರಿಸಿದ ವೈದ್ಯನ ವಿರುದ್ಧ ದೂರು

Beans Price: ರಾಂಚಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಬೀನ್ಸ್‌ !

Beans Price: ರಾಂಚಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಬೀನ್ಸ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.