Kapu ಆಸ್ಪತ್ರೆಗೆ ನುಗ್ಗಿ ಜೀವಬೆದರಿಕೆ: ದೂರು ದಾಖಲು
Team Udayavani, Sep 20, 2023, 10:59 PM IST
ಉಡುಪಿ: ಆಸ್ಪತ್ರೆಯೊಳಗೆ ತೆರಳಿ ವ್ಯಕ್ತಿಯೊಬ್ಬರಿಗೆ ನಿಂದಿಸಿ ಜೀವಬೆದರಿಕೆ ಹಾಕಿದ ಘಟನೆ ನಡೆದಿದೆ.
ಸೆ. 19ರಂದು ಜಿಲ್ಲಾಸ್ಪತ್ರೆಯಲ್ಲಿ ಸುಹಾನಾ ಅವರು ತನ್ನ ತಮ್ಮ ಆಸೀಫ್ ನ ಆರೈಕೆಯಲ್ಲಿದ್ದಾಗ ಕಾಪು ಠಾಣೆಯಲ್ಲಿ ಕೇಸು ದಾಖಲಿಸಿದ ವಿಚಾರವಾಗಿ ಆರೋಪಿಗಳಾದ ಹಸನ್, ಲತೀಫ್, ಮೈಮುನಾ, ಆಫ್ರೀನಾ ಅವರು ಬಂದು ಆಸೀಫ್ ನಿಗೆ ಅವಾಚ್ಯ ಶಬ್ದದಿಂದ ಬೈದು ಹೊಡೆಯಲು ಮುಂದಾಗಿ ಜೀವಬೆದರಿಕೆ ಹಾಕಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.