Missing Case ಮಚ್ಚಟ್ಟು: ಯುವಕ ನಾಪತ್ತೆ: ಐದು ದಿನ ಕಳೆದರೂ ಪತ್ತೆಯಾಗಿಲ್ಲ
Team Udayavani, Sep 20, 2023, 11:15 PM IST
ಸಿದ್ದಾಪುರ: ಮಚ್ಚಟ್ಟು ಗ್ರಾಮದ ತೊಂಬಟ್ಟು ಇರ್ಕಿಗದ್ದೆ ವಿವೇಕಾನಂದ(28) ಅವರು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಸೆ. 16ರಂದು ಮನೆಯಿಂದ ನಾಪತ್ತೆಯಾಗಿದ್ದು, 5ದಿನ ಕಳೆದರು ಇನ್ನೂ ಪತ್ತೆಯಾಗಿಲ್ಲ. ತೊಂಬಟ್ಟು ಪರಿಸರದ ಕಾಡಿನಲ್ಲಿ ಕಳೆದ 5 ದಿನಗಳಿಂದ ನಿರಂತರವಾಗಿ ಹುಡುಕಾಟ ನಡೆಯುತ್ತಿದೆ.
ಸ್ಥಳೀಯರೊಂದಿಗೆ ಅಮಾಸೆಬೈಲು ಪೊಲೀಸರು ಕೂಡ ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ.
ತೊಂಬಟ್ಟು ಪರಿಸರದ ಅರಣ್ಯದಲ್ಲಿ ಸಾಕಷ್ಟು ಚಿರತೆಗಳು ಇದ್ದು, ಯುವಕನನ್ನು ಚಿರತೆ ಹೊತ್ತೂಯ್ದಿರುವ ಸಾಧ್ಯತೆಯ ಬಗ್ಗೆಯೂ ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.
ವಿವೇಕಾನಂದ 4.8 ಅಡಿ ಎತ್ತರ ಇದ್ದು, ಎಣ್ಣೆಕಪ್ಪು ಮೈ ಬಣ್ಣ ಹೊಂದಿದ್ದಾರೆ. ಕೋಲು ಮುಖ, ಸಪೂರ ಶರೀರ ಹೊಂದಿರುವ ಅವರು ಕಾಣೆಯಾಗುವಾಗ ಹಳದಿ ಬಣ್ಣದ ಟೀ ಶರ್ಟು ಹಾಗೂ ನೀಲಿ ಬಣ್ಣದ ಒಳ ಉಡುಪು ಧರಿಸಿದ್ದರು.
ವಿವೇಕಾನಂದ ಸಹೋದರ ಸದಾನಂದ ನಾಯ್ಕ ಅವರು ಪೊಲೀಸರಿಗೆ ದೂರು ನೀಡಿದ್ದು, ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.