ಗೆಳೆಯನ ಮೃತದೇಹದ ಅಡಿಯಲ್ಲಿ ಸತ್ತಂತೆ ನಟಿಸಿ ಹಮಾಸ್ ಉಗ್ರರಿಂದ ಬಚಾವಾದ ಇಸ್ರೇಲ್ ಯುವತಿ


Team Udayavani, Nov 6, 2023, 4:19 PM IST

ಗೆಳೆಯನ ಮೃತದೇಹದ ಅಡಿಯಲ್ಲಿ ಸತ್ತಂತೆ ನಟಿಸಿ ಹಮಾಸ್ ಉಗ್ರರಿಂದ ಬಚಾವಾದ ಇಸ್ರೇಲ್ ಯುವತಿ

ಜೆರುಸೆಲಮ್: ಅಕ್ಟೋಬರ್ 7 ರಂದು ಹಮಾಸ್ ಬಂಡುಕೋರರು ನಡೆಸಿದ ದಾಳಿಯಲ್ಲಿ ಸಾವಿರಾರು ಮಂದಿ ಮೃತಪಟ್ಟಿದ್ದಾರೆ ಅಷ್ಟು ಮಾತ್ರವಲ್ಲದೆ ಹಮಾಸ್ ಬಂಡುಕೋರರ ತಂಡ ದಕ್ಷಿಣ ಇಸ್ರೇಲ್ ನಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮಕ್ಕೆ ಪ್ರವೇಶಿಸಿ ಮನಬಂದಂತೆ ಗುಂಡಿನ ದಾಳಿ ನಡೆಸಿ ನೂರಾರು ಮಂದಿಯನ್ನು ಹತ್ಯೆಗೈದಿದ್ದಾರೆ ಅಲ್ಲದೆ ನೂರಾರು ಮಂದಿಯನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ ಆದರೆ ಇದರ ನಡುವೆ ಇಸ್ರೇಲ್ ಯುವತಿಯೊಬ್ಬಳು ಹಮಾಸ್ ಉಗ್ರರು ನಡೆಸಿದ ದಾಳಿಯಲ್ಲಿ ತನ್ನ ಗೆಳೆಯನನ್ನು ಕಳೆದುಕೊಂಡಿದ್ದಾಳೆ ಅಲ್ಲದೆ ಗುಂಡಿನ ದಾಳಿಯಿಂದ ತಾನು ಬಚಾವಾಗಿ ಬಂದಿದ್ದು, ಉಗ್ರರ ದಾಳಿಯಿಂದ ತಪ್ಪಿಸಿಕೊಂಡು ಬಂದ ರೋಚಕ ಕತೆಯನ್ನು ಯುವತಿ ಹೇಳಿಕೊಂಡಿದ್ದಾಳೆ.

27 ವರ್ಷದ ಮಾಡೆಲ್ ನೋಮ್ ಮಝಲ್ ಬೆನ್ ಹಾಗೂ ಆಕೆಯ ಗೆಳೆಯ ಡೇವಿಡ್ ದಕ್ಷಿಣ ಇಸ್ರೇಲ್ ನಲ್ಲಿ ನಡೆಯುತ್ತಿದ್ದ ಸಂಗೀತ ಉತ್ಸವಕ್ಕೆ ತೆರಳಿದ್ದರು ಈ ವೇಳೆ ಪ್ಯಾಲೆಸ್ಟೇನ್ ಗುಂಪು ದಿಡೀರ್ ದಾಳಿ ನಡೆಸಿ ಮನಬಂದನಂತೆ ಗುಂಡಿನ ದಾಳಿ ನಡೆಸಲು ಆರಂಭಿಸಿದ್ದಾರೆ ಅಲ್ಲಿದ್ದ ಜನ ಕಕ್ಕಾಬಿಕ್ಕಿಯಾಗಿ ಒಡಲು ಪ್ರಾರಂಭಿಸಿದ್ದಾರೆ ಆದರೆ ಹಮಾಸ್ ಬಂಡುಕೋರರು ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾರಣ ತಪ್ಪಿಸಿಕೊಳ್ಳುವುದು ಸುಲಭದ ಮಾತು ಆಗಿರಲಿಲ್ಲ, ಉಗ್ರರರು ಗುಂಡಿನ ದಾಳಿ ನಡೆಸುತ್ತಿದ್ದಂತೆ ನಾನು ಮತ್ತೆ ಡೇವಿಡ್ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದೆವು ಮೊದಲು ತಾವು ಬಂದಿದ್ದ ಕಾರಿನಲ್ಲಿ ಪಾರಾಗಲು ಯತ್ನಿಸಿದೆವು ಆದರೆ ಅದು ಸಾಧ್ಯವಾಗಲಿಲ್ಲ ಬಳಿಕ ಅಲ್ಲಿದ್ದ ಕಂಟೈನರ್ ಬಳಿ ತೆರಳಿ ನಾವು ಅವಿತುಕೊಂಡು ಕುಳಿತೆವು ಆದರೆ ಬಂಡುಕೋರರು ಮನ ಬಂದಂತೆ ಗುಂಡಿನ ದಾಳಿ ನಡೆಸುತ್ತಿದ್ದ ಪರಿಣಾಮ ಬದುಕುಳಿಯುವುದು ಕಷ್ಟ ಸಾಧ್ಯ ಎಂಬುದು ಗಮನಕ್ಕೆ ಬಂತು.

ಕೂಡಲೇ ಅಲ್ಲಿದ್ದ ಎರಡು ಕಂಟೈನರ್ ಗಳನ್ನೂ ಗಮನಿಸಿದ ನಾವು ಅದರಲ್ಲಿ ಒಂದನ್ನು ಬಂಡುಕೋರರು ಗ್ರಾನೈಟ್ ದಾಳಿ ನಡೆಸಿ ಸ್ಪೋಟಿಸಿದ್ದರು ಈ ವೇಳೆ ಅದರೊಳಗೆ ಅವಿತ್ತಿದ್ದ ಹಲವು ಮಂದಿ ಮೃತಪಟ್ಟರು. ಇನ್ನು ನಮ್ಮ ಬಳಿ ಬದುಕುಳಿಯಲು ಬೇರೆ ಮಾರ್ಗ ಇಲ್ಲ ಕೊನೆಯದಾಗಿ ಕಂಟೈನರ್ ಒಳಗೆ ಅವಿತು ಕುಳಿತುಕೊಳ್ಳುವ ಎಂದು ಹೇಳಿ ಅಲ್ಲಿಗೆ ತೆರಳಿ ಅವಿತು ಕುಳಿತೆವು ಈ ವೇಳೆ ಹೊರಗಿನಿಂದ ಉಗ್ರರು ಗುಂಡಿನ ದಾಳಿ ನಡೆಸುತ್ತಿರುವ ಸದ್ದು ಕೇಳುತ್ತಿತ್ತು ಅಲ್ಲದೆ ಅಲ್ಲಿದ್ದ ಜನ ಅಲ್ಲಾಹು ಅಕ್ಬರ್ ಎಂದು ಕೂಗುತ್ತಿದ್ದರು ಈ ವೇಳೆ ಯುವತಿಯೊಬ್ಬಳು ನನ್ನನ್ನು ಕೊಲ್ಲಬೇಡಿ ಬಿಟ್ಟುಬಿಡಿ ಎಂದು ಕೂಗುತ್ತಿರುವುದು ಕೇಳುತ್ತಿತ್ತು ಅಷ್ಟೋತ್ತಿಗೆ ಆಕೆಯನ್ನು ಬಂಡುಕೋರರು ಸಾಯಿಸದೆ ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ.

ಇಷ್ಟೆಲ್ಲ ಎಡಿಎ ಬಳಿಕ ಓರ್ವ ಬಂಡುಕೋರ ನಾವಿದ್ದ ಕಂಟೈನರ್ ಬಳಿ ಬಂದಿದ್ದಾನೆ ಇದನ್ನು ಕಂಡ ಗೆಳೆಯ ಡೇವಿಡ್ ತನ್ನನ್ನು ಅಲ್ಲಿ ಅದಾಗಲೇ ಸಾವನ್ನಪ್ಪಿದ್ದ ಜನರ ಅಡಿಯಲ್ಲಿ ಅವಿತು ಕೊಳ್ಳುವಂತೆ ಹೇಳಿದ್ದಾನೆ ಅದರಂತೆ ತಾನು ಸತ್ತಂತೆ ನಟಿಸಿದೆ ಈ ವೇಳೆ ಬಂಡುಕೋರ ಕಂಟೈನರ್ ಒಳಗೆ ಜಿಗಿದು ಅಲ್ಲಾಹು ಅಕ್ಬರ್ ಎಂದು ಹೇಳಿ ಗುಂಡಿನ ದಾಳಿ ನಡೆಸಿದ್ದಾನೆ ಈ ವೇಳೆ ನನ್ನ ಗೆಳೆಯ ಡೇವಿಡ್ ಗುಂಡಿನ ದಾಳಿಗೆ ಸಿಲುಕಿ ಮೃತಪಟ್ಟ ಇದಾದ ಬಳಿಕ ಇನ್ನೊಂದು ಸುತ್ತು ಗುಂಡಿನ ದಾಳಿ ನಡೆಸಿದ ವೇಳೆ ನನ್ನ ಸೊಂಟದ ಭಾಗಕ್ಕೆ ಗುಂಡು ತಗುಲಿ ಗಾಯವಾಗಿತ್ತು ಆದರೂ ನೋವಾಗದ ರೀತಿಯಲ್ಲಿ ಸತ್ತಂತೆ ನಟಿಸಿ ಹೇಗೋ ಅಲ್ಲಿಂದ ಪಾರಾದೆ ಎಂದು ನೋಮ್ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Viral Video: ಕುಡಿದ ಮತ್ತಿನಲ್ಲಿ ಹಾವಿನ ಜತೆ ಹುಚ್ಚಾಟವಾಡಿ ಕೊನೆಯುಸಿರೆಳೆದ ಯುವಕ

ಟಾಪ್ ನ್ಯೂಸ್

1-wqeeqw

K. Vasantha Bangera; ಬೆಳ್ತಂಗಡಿಯ ಬಂಗಾರ ಕೇದೆಯ ಮಣ್ಣಲ್ಲಿ ಲೀನ; ಸಕಲ ಸರಕಾರಿ ಗೌರವ

1-qwewqwqe

IPL;ಪಂಜಾಬ್ ವಿರುದ್ಧ 60 ರನ್ ಗಳ ಗೆಲುವು ಸಾಧಿಸಿದ ಆರ್ ಸಿಬಿ: ಪ್ಲೇ ಆಫ್ ಆಸೆ ಜೀವಂತ

suicide

Heatstroke; ಬಸವಕಲ್ಯಾಣದಲ್ಲಿ ಬಿಸಿಲಿನ ಝಳಕ್ಕೆ ಕಾರ್ಮಿಕ‌ ಸಾವು‌?

1-ww-ewq

SSLC Result; ಜ್ಞಾನಸುಧಾ ಕಾರ್ಕಳ ಶೇ. 100 ಫ‌ಲಿತಾಂಶ: ಸಹನಾ ರಾಜ್ಯಕ್ಕೆ ತೃತೀಯ

Chikkaballapur: ಎಸ್ಸೆಸ್ಸೆಲ್ಸಿ ಫೇಲ್; ವಿದ್ಯಾರ್ಥಿನಿ ನೇಣಿಗೆ ಶರಣು

Chikkaballapur: ಎಸ್ಸೆಸ್ಸೆಲ್ಸಿ ಫೇಲ್; ವಿದ್ಯಾರ್ಥಿನಿ ನೇಣಿಗೆ ಶರಣು

JDS: ಸಂಪುಟದಿಂದ ಡಿಕೆಶಿ ಕೈಬಿಡಿ; ರಾಜ್ಯಪಾಲರಿಗೆ ಜೆಡಿಎಸ್‌ ದೂರು

JDS: ಸಂಪುಟದಿಂದ ಡಿಕೆಶಿ ಕೈಬಿಡಿ; ರಾಜ್ಯಪಾಲರಿಗೆ ಜೆಡಿಎಸ್‌ ದೂರು

Compensation: ಮಳೆ ಆಧಾರಿತ ಬೆಳೆಗಳಿಗೂ ಪರಿಹಾರಧನ; ಸಚಿವ ಕೃಷ್ಣ ಬೈರೇಗೌಡ

Compensation: ಮಳೆ ಆಧಾರಿತ ಬೆಳೆಗಳಿಗೂ ಪರಿಹಾರಧನ; ಸಚಿವ ಕೃಷ್ಣ ಬೈರೇಗೌಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Student Missing: ಅಮೆರಿಕದಲ್ಲಿ ಮತ್ತೋರ್ವ ವಿದ್ಯಾರ್ಥಿ ನಾಪತ್ತೆ… ಕಂಗಾಲಾದ ಕುಟುಂಬ

Student Missing: ಅಮೆರಿಕದಲ್ಲಿ ಮತ್ತೋರ್ವ ವಿದ್ಯಾರ್ಥಿ ನಾಪತ್ತೆ… ಕಂಗಾಲಾದ ಕುಟುಂಬ

Tulu Movie: ಕತಾರ್ ನಲ್ಲಿ ವಿಜೃಂಭಿಸಿದ ತುಳು ಚಿತ್ರ “ತುಡರ್”         

Tulu Movie: ಕತಾರ್ ನಲ್ಲಿ ವಿಜೃಂಭಿಸಿದ ತುಳು ಚಿತ್ರ “ತುಡರ್”         

7-

ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷ ಸುಬ್ರಮಣ್ಯ ಹೆಬ್ಬಾಗಿಲು: ಕೃತಜ್ಞತೆ, ಗೌರವ

Brazil Floods: ಪ್ರವಾಹಕ್ಕೆ ತತ್ತರಿಸಿದ ಬ್ರೆಜಿಲ್‌, ಸಾವಿನ ಸಂಖ್ಯೆ 90ಕ್ಕೆ ಏರಿಕೆ

Brazil Floods: ಪ್ರವಾಹಕ್ಕೆ ತತ್ತರಿಸಿದ ಬ್ರೆಜಿಲ್‌, ಸಾವಿನ ಸಂಖ್ಯೆ 90ಕ್ಕೆ ಏರಿಕೆ

Israel captures Hamas last stronghold rafah

Hamas ಕೊನೇ ಬಲಿಷ್ಠ ನೆಲೆ ಇಸ್ರೇಲ್‌ ವಶಕ್ಕೆ! ರಫಾ ಪೂರ್ವಭಾಗಕ್ಕೆ ನುಗ್ಗಿದ ಇಸ್ರೇಲ್‌ ಪಡೆ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Himanth-Bisw

BJP ಗೆದ್ದರೆ 5 ಲಕ್ಷ ಜನರಿಗೆ ಅಯೋಧ್ಯೆ ರಾಮನ ದರ್ಶನ: ಹಿಮಂತ್‌ ಬಿಸ್ವಾ

Rahul Gandhi 3

BJP ಪಕ್ಷದಿಂದ ಸಂವಿಧಾನ ಬದಲು: ರಾಹುಲ್‌ ಗಾಂಧಿ ವಿರುದ್ಧ ದೂರು

1-wqeeqw

K. Vasantha Bangera; ಬೆಳ್ತಂಗಡಿಯ ಬಂಗಾರ ಕೇದೆಯ ಮಣ್ಣಲ್ಲಿ ಲೀನ; ಸಕಲ ಸರಕಾರಿ ಗೌರವ

1-wqeeewqe

SSLC; ರಾಜ್ಯಕ್ಕೆ 5ನೇ ರ್‍ಯಾಂಕ್‌: ಪ್ರತ್ವಿತಾಗೆ IAS ಅಧಿಕಾರಿಯಾಗುವ ಆಸೆ

1-wewqewqe

SSLC; ಆಳ್ವಾಸ್‌ ಮೂಡುಬಿದಿರೆಗೆ ಶೇ. 100 ಫಲಿತಾಂಶ : 51ಮಂದಿಗೆ 600ಕ್ಕೂ ಅಧಿಕ ಅಂಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.