Sirsi: ದೀಪಾವಳಿ ಸನಾತನ ಸಂಸ್ಕೃತಿ ಪ್ರತೀಕ… ಸೋದೆ ಶ್ರೀ
Team Udayavani, Nov 13, 2023, 4:36 PM IST
ಶಿರಸಿ: ದೀಪಾವಳಿ ಸನಾತನ ಸಂಸ್ಕೃತಿ ಪ್ರತೀಕ ಎಂದು ಉಡುಪಿ ಅಷ್ಟ ಮಠಗಳಲ್ಲಿ ಒಂದಾದ ಸೋದೆ ವಾದಿರಾಜ ಮಠಾಧೀಶ ಶ್ರೀ ವಿಶ್ವವಲ್ಲಭ ಶ್ರೀಪಾದರು ನುಡಿದರು.
ಅವರು ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಸೋಮವಾರ ಮಠದ ಆವಾರದಲ್ಲಿ ಇರುವ ಗೋ ಶಾಲೆಯಲ್ಲಿ ಗೋ ಗ್ರಾಸ ನೀಡಿ ಆಶೀರ್ವಚನ ನುಡಿದರು.
ದೀಪಾವಳಿ ಅಂದರೆ ಕೇವಲ ದೀಪಗಳ ಸಮೂಹ ಮಾತ್ರವಲ್ಲ. ಇದೊಂದು ಹಬ್ಬಗಳ ಸಮೂಹವೂ ಹೌದು. ಲಕ್ಷ್ಮೀಪೂಜೆ , ಬಲೀಂದ್ರಪೂಜೆ , ಗೋಪೂಜೆ ಹೀಗೆ ಸಾಲು ಸಾಲು ದೇವತಾರಾಧನೆಗಳು ನಡೆಯುವ ಹಬ್ಬ ಎಂದು ಬಣ್ಣಿಸಿದ ಶ್ರೀಗಳು ದೀಪಾವಳಿ ನಮ್ಮ ಸನಾತನ ಸಂಸ್ಕೃತಿಯ ಪ್ರತೀಕದ ಹಬ್ಬ ಎಂದರು.
ನರಕಾಸುರನನ್ನು ಶ್ರೀಕೃಷ್ಣ ಸಂಹರಿಸಿ ಸಾವಿರಾರು ಹೆಣ್ಣು ಮಕ್ಕಳನ್ನು ಸಂರಕ್ಷಿಸಿದ ದಿನ. ಈ ಸಂದರ್ಭದಲ್ಲಿ ದೇಶಕ್ಕೆ ಸಮೃದ್ಧಿ ಉಂಟಾಗಲಿ. ಸಮಸ್ತರೂ ಸುಖ ಭಾವದಿಂದ ಬಾಳುವಂತಾಗಲಿ ಎಂದು ನುಡಿದರು.
ಸಮಾಜದಲ್ಲಿ ಹೆಚ್ಚುತ್ತಿರುವ ಅಸುರ ಭಾವನೆಗಳು ದೂರವಾಗಲಿ. ಪ್ರತಿಯೊಬ್ಬರ ಬದುಕಿನಲ್ಲೂ ಸನ್ಮಂಗಲದ ಬೆಳಕು ಮೂಡುವ ಹಬ್ಬ ಇದಾಗಲಿ ಎಂದೂ ಶ್ರೀಗಳು ಆಶಿಸಿದರು.
ಈ ವೇಳೆ ಪ್ರಮುಖರಾದ ಮಧ್ವೇಶ ತಂತ್ರಿಗಳು, ವ್ಯವಸ್ಥಾಪಕ ಮಧುಸೂದನ ಪುತ್ರಾಯ , ಪಿಆರ್ ಓಗಳಾದ ಅಡವಿರಾಯ ಹಾಗೂ ಜಿ ವಾಸುದೇವ ಇತರರು ಇದ್ದರು.
ಇದನ್ನೂ ಓದಿ:Panaji: ಐದು ರಾಜ್ಯಗಳ ಚುನಾವಣೆಯನ್ನು ಬಿಜೆಪಿ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನವಜಾತ ಶಿಶುವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಚರಂಡಿಗೆ ಎಸೆದ ಪಾಪಿಗಳು; ಪೊಲೀಸರಿಂದ ಶೋಧ
49 ಅಭ್ಯರ್ಥಿಗಳಿಂದ ಉಮೇದುವಾರಿಕೆ: ನಾಮಪತ್ರ ಸಲ್ಲಿಕೆಗೆ ಇಂದು ಕೊನೆ ದಿನ
JDS MP ಪ್ರಜ್ವಲ್ ಎಲ್ಲಿ? ಕುಟುಂಬದವರು ಸಹಿತ ಯಾರಿಗೂ ಗೊತ್ತಿಲ್ಲ: ಜಿ.ಟಿ.ದೇವೇಗೌಡ
ಪರಿಷತ್ ಚುನಾವಣೆ: 3 ಪಕ್ಷಕ್ಕೂ ಬಂಡಾಯ ಬಿಸಿ; ಪಕ್ಷದ ವಿರುದ್ಧವೇ ಸಡ್ಡು ಹೊಡೆದು ಸ್ಪರ್ಧೆ
Attendance ಕೊರತೆ ಇದ್ದರೂ ಎಸೆಸೆಲ್ಸಿ ಪರೀಕ್ಷೆ-2ಕ್ಕೆ ಅವಕಾಶ
MUST WATCH
ಹೊಸ ಸೇರ್ಪಡೆ
Mistake; ಮಗುವಿನ ಬೆರಳಿಗೆ ಶಸ್ತ್ರಚಿಕಿತ್ಸೆ ಬೇಕಿತ್ತು: ವೈದ್ಯರು ಮಾಡಿದ್ದು ನಾಲಗೆಗೆ!
J’khand; ಬಂಧಿತ ಸಚಿವ ಅಲಂಗೀರ್ ಆಲಂ 6 ದಿನಗಳ ಕಾಲ ಇಡಿ ಕಸ್ಟಡಿಗೆ
Naveen Patnaik ಅವರಿಗೆ ಬೀಳ್ಕೊಡುಗೆ ನೀಡಲು ಒಡಿಶಾ ಜನ ಸಜ್ಜು: ಜೆ.ಪಿ.ನಡ್ಡಾ
Money Laundering Case; ಇಡಿ ಸುಮ್ಮನೆ ಬಂಧಿಸುವಂತಿಲ್ಲ..: ಮಹತ್ವದ ತೀರ್ಪು ನೀಡಿದ ಸುಪ್ರೀಂ
ಬರಲಿದೆ ಮತ್ತೊಂದು ಸ್ಕ್ಯಾಮ್ ಸಿರೀಸ್: ʼಸ್ಕ್ಯಾಮ್ 2010: ಸುಬ್ರತಾ ರಾಯ್ʼ ಅನೌನ್ಸ್